Monday, November 3, 2008

ಝಾಡಿಸಿ ಒದ್ದರೂ ಹೋಗದಲ್ಲ ಈ ಭೂತ...

ಝಾಡಿಸಿ ಒದ್ದರೂ ಹೋಗದಲ್ಲ,
ಮತಾಂತರದ ಭೂತ!
'ನಿನ್ನ ಬಳಿ ಬಂದರೇನು ಮತಾಂತರಕೆ?'
ಉತ್ತರವು ಗೊತ್ತಿದೆ ಮನಕೆ...
'ಬಂದರೇನು ಮಾಡುವೆ?'
ಇದೂ ಗೊತ್ತಿದೆ...
ಆದರೂ ಬಿಡದಿದು...
ಬೆನ್ನ ಹತ್ತಿದ ಬೇತಾಳನೆಂದರೆ ಇದೇ ಏನೋ...

'ಯಾರೋ, ಎಲ್ಲೋ, ನಂಬಿಕೆಯ ನಿಯತ್ತನ್ನು ಬದಲಿಸಿದರೆ,
ನಿನಗೇನು ಕುತ್ತು?'
ಗೊತ್ತಿಲ್ಲ...
ಹಲವು ಬಾರಿ ನೆಮ್ಮದಿಯ ಕಲಕಿದ್ದಂತೂ ಹೌದು...ಯಾಕೆ?
ತಿಳಿಯದು...

'ನಿನ್ನ ಮತ ಮಾಡದ ಏಳಿಗೆ, ಇನ್ನೊಂದು ಮತ ಮಾಡಿತೇ?'
ಉತ್ತರ ಗೊತ್ತು...
'ಏಳಿಗೆ ಮಾಡಿದರೆ, ನಿನಗೇನು ಹೊಟ್ಟೆ ಉರಿ?'...
ಅದೇ ಹಾಳು ಮೌನ...
'ನಿನ್ನ ಧರ್ಮವೇಕೆ ಇಷ್ಟು ದಿನ ಮಲಗಿತ್ತು ಕುಂಭಕರ್ಣನಂತೆ?'
...
'ಕುಂಭಕರ್ಣ ಎದ್ದ...ಕೊನೆಗೇನಾಯಿತೆಂಬುದು ತಿಳಿದಿದೆ...'
!!!??!!!
'ತಲೆ ಕೆಡಿಸಿಕೊಂಡ ನೀನು, ಮಾಡಿದ್ದಾದರೂ ಏನು?'
ಉತ್ತರವಿಲ್ಲ...
'ಮತಾಂತರವು ದೇಶದ ಅಭದ್ರತೆಗೆ ದಾರಿ...'
ಪುರಾವೆ ಏನು?
ಇದೆಯೇನು ಉತ್ತರ?
ಗೊಡ್ಡು ವಾದವಷ್ಟೆ...
'ಮತಾಂತರವು ಹೊಸದೇ?'
ಗೊತ್ತಿದ್ದೂ ಇದರೆಡೆಗೆ ಯೋಚಿಸದ ಜಾಣ...

ಆದರೂ ಬಿಡದು ತಲೆಯಲ್ಲಿ ಹೊಕ್ಕಿರುವ ಈ ಭೂತ...
ಮತಾಂತರದ ಭೂತ...
ಯಾಕೆ? ಯಾಕೆ? ಯಾಕೆ????
...ಉತ್ತರವಿಲ್ಲ...

--ಶ್ರೀ

(೩ ನವಂಬರ್ ೨೦೦೮)

No comments: