Showing posts with label ಅನುವಾದ. Show all posts
Showing posts with label ಅನುವಾದ. Show all posts

Friday, June 5, 2009

ತಂಪಾದ ಗುಣಗಳ ಕಂಪು

ತಂಪಾದ ಗುಣಗಳು ದೂರದಲಿರುವ ಗರಿಮೆಗಳ ಮುಟ್ಟುವುದು
ಕಂಪಾದ ಕೇದಗೆಯ ಬಳಿಗೆ ದುಂಬಿಗಳು ತಂತಾನೆ ಬರುವಂತೆ

ಸಂಸ್ಕೃತ ಮೂಲ:

ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ|
ಕೇತಕೀಗಂಧಮಘ್ರಾಯ ಸ್ವಯಮಾಯಾಂತಿ ಷಟ್ಪದಾಃ ||

--ಶ್ರೀ

(೫-ಜೂನ್-೨೦೦೯)

ಸಾಲ ಮಾಡಿ ತುಪ್ಪ ತಿನ್ನು!

ಬರೀ ತುಪ್ಪ ತಿನ್ನೋದು ನನಗೆ ಇಷ್ಟನೇ ಇಲ್ಲ...
ಆದ್ರೂ, ಕೆಳಗಿನ ಸುಭಾಷಿತವನ್ನು ಹಂಸಾನಂದಿಯವರು ಕೊಟ್ಟಾಗ, ನಾನೂ ಒಂದು ಭಾವಾನುವಾದ ಮಾಡಿಬಿಟ್ಟೆ :)

ಬೂದಿಯಾದ ಒಡಲು ಮರಳಿ ಬರುವುದೇನೋ, ಬೆಪ್ಪ!
ತಿಣುಕಿ ಸಾಲ ಮಾಡಿಯಾದ್ರೂ ತಿನ್ನೋ ನೀನು ತುಪ್ಪ!

ಸಂಸ್ಕೃತ ಮೂಲ (ಚಾರ್ವಾಕ):

ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ |
ತಸ್ಮಾತ್ ಸರ್ವ ಪ್ರಯತ್ನೇನ ಋಣಂ ಕೃತ್ವಾ ಘೃತಂ ಪಿಬೇತ್ ||

--ಶ್ರೀ
(೫-ಜೂನ್-೨೦೦೯)

Tuesday, June 2, 2009

ಕುಂದು ಬಂದಾಗ ಎದಿರಿಸುವುದು ಹೇಗೆ???

ಕುಂದು ಬಂದಾಗ ಎದಿರಿಸುವುದು ಹೇಗೆಂದು ಎಣಿಸಿರಬೇಕು
ಬೆಂದು ಉರಿವಾಗ ಮನೆ ಬಾವಿಯ ಅಗೆವುದು ತರವೇನು?

ಸಂಸ್ಕೃತ ಮೂಲ:

ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ ||

(೨-ಜೂನ್-೨೦೦೯)