ಎಳೆ) ರಾಜಕಾರಣಿ: ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!!
ಪತ್ರಕರ್ತ: ಯಾವ ವಿಚಾರಕ್ಕಾಗಿ ಧಿಕ್ಕಾರ ಕೂಗುತ್ತಿದ್ದೀರ? ನಿಮ್ಮ ಅನಿಸಿಕೆ ಹಂಚಿಕೊಳ್ಳುವಿರಾ?
(ಎಳೆ) ರಾಜಕಾರಣಿ: ಭಾ.ಜ.ಪ ಅಧಿಕಾರಕ್ಕೆ ಬಂದಾಗಿಂದ, ಪ್ರತಿದಿನ ಬೆಳಗ್ಗೆ - ಸಂಜೆ ಸೂರ್ಯನ ಕೇಸರಿ ಬಣ್ಣ ಹೆಚ್ಚಾಗಿ ಕಾಣ್ತಾ ಇದೆ ಅದಕ್ಕೆ!
:)
--ಶ್ರೀ
(೧೦-ಫೆಬ್ರವರಿ-೨೦೦೯)
ವಿಧ ವಿಧವಾದ ಕಡ್ಲೆ ಕಾಯಿ ವಿತರಿಸುವ ಏಕೈಕ ಬ್ಲಾಗ್ ತಾಣಕ್ಕೆ ಸ್ವಾಗತ... ಇಲ್ಲಿವರೆಗೂ ಬಂದಿದೀರ, ಸ್ವಲ್ಪ ಕಡ್ಲೆ ಕಾಯಿ ತಿಂದು ಹೇಗಿದೆ ಅಂತ ಹೇಳಿ ಹೋಗಿ...
Showing posts with label ಹಾಸ್ಯ. Show all posts
Showing posts with label ಹಾಸ್ಯ. Show all posts
Tuesday, February 10, 2009
Thursday, November 27, 2008
ದ್ರೌಪದಿಯ ಸೀರೆ ಸೆಳೆವಾಗ...
ಸೀರೆಯನ್ನೆಳೆದಾಗ
ದ್ರೌಪದಿ ಕೂಗಿದಳು 'ಕೃಷ್ಣಾ'....
ಥಟ್ಟನೆ ಬಿತ್ತು ಕೆನ್ನೆಗೆ ಏಟು...
'ಕೃಷ್ಣನನ್ನೇಕೆ ಕರೆಯುವೆ,
ನಾನು ಅರ್ಜುನ!' :)
~~~ * ~~~
ಸೀರೆಯನ್ನೆಳೆದಾಗ
ದ್ರೌಪದಿ ಕೂಗಿದಳು 'ಅರ್ಜುನಾ...'
ಅರ್ಜುನ ಬರಲಿಲ್ಲ...
ಥಟ್ಟನೆ ಬೀಸಿ ಕೆನ್ನೆಗೆ ಏಟು,
ಕೂಗಿದಳು 'ಕೃಷ್ಣಾ...' :)
--ಶ್ರೀ
(೨೭-ನವಂಬರ್-೨೦೦೮)
ದ್ರೌಪದಿ ಕೂಗಿದಳು 'ಕೃಷ್ಣಾ'....
ಥಟ್ಟನೆ ಬಿತ್ತು ಕೆನ್ನೆಗೆ ಏಟು...
'ಕೃಷ್ಣನನ್ನೇಕೆ ಕರೆಯುವೆ,
ನಾನು ಅರ್ಜುನ!' :)
~~~ * ~~~
ಸೀರೆಯನ್ನೆಳೆದಾಗ
ದ್ರೌಪದಿ ಕೂಗಿದಳು 'ಅರ್ಜುನಾ...'
ಅರ್ಜುನ ಬರಲಿಲ್ಲ...
ಥಟ್ಟನೆ ಬೀಸಿ ಕೆನ್ನೆಗೆ ಏಟು,
ಕೂಗಿದಳು 'ಕೃಷ್ಣಾ...' :)
--ಶ್ರೀ
(೨೭-ನವಂಬರ್-೨೦೦೮)
Saturday, November 1, 2008
ರಾಜ್ಯೋತ್ಸವ!
ನನ್ನನ್ನು
’ಮಾತೃ ವಾಕ್ಯ ಪರಿಪಾಲಕ’
ಎಂದಾಗ ಉಬ್ಬಿ ಹೋಗಿದ್ದೆ ನಾನು...
ಬಂದಳೆನ್ನ ಮಡದಿ,
ಕನ್ನಡಿಸಿದಳಿದನ್ನು...
’ಅಮ್ಮನ ಮಗನೇ ನೀವು!"
ಎಂದು ಕೊಂಕಾಡಿದಾಗ,
ಫಟ್ಟನೆ ಒಡೆದಿತ್ತೆನ್ನ ಮನದ ಬಲೂನು!
:)
--ಶ್ರೀ
(೧ - ನವಂಬರ್ - ೨೦೦೮)
’ಮಾತೃ ವಾಕ್ಯ ಪರಿಪಾಲಕ’
ಎಂದಾಗ ಉಬ್ಬಿ ಹೋಗಿದ್ದೆ ನಾನು...
ಬಂದಳೆನ್ನ ಮಡದಿ,
ಕನ್ನಡಿಸಿದಳಿದನ್ನು...
’ಅಮ್ಮನ ಮಗನೇ ನೀವು!"
ಎಂದು ಕೊಂಕಾಡಿದಾಗ,
ಫಟ್ಟನೆ ಒಡೆದಿತ್ತೆನ್ನ ಮನದ ಬಲೂನು!
:)
--ಶ್ರೀ
(೧ - ನವಂಬರ್ - ೨೦೦೮)
Labels:
ಕನ್ನಡ,
ಚುಟುಕ,
ರಾಜ್ಯ್ಳೋತ್ಸವ,
ಹಾಸ್ಯ
Tuesday, September 30, 2008
ಮತಾಂತರವನ್ನು ಏಕೆ ತಡೆಯಬೇಕು?
ಪತ್ರಕರ್ತ: ಮತಾಂತರವನ್ನು ಏಕೆ ತಡೆಯಬೇಕು?
ರಾಜಕಾರಣಿ: ಮತಾಂತರ ತಡೆಯದಿದ್ದರೆ ನಮಗೂ ಮತಕ್ಕೂ ಇರುವ ಅಂತರ ತುಂಬಾ ಹೆಚ್ಚತ್ತೆ ಅದಕ್ಕೆ...
:)
ರಾಜಕಾರಣಿ: ಮತಾಂತರ ತಡೆಯದಿದ್ದರೆ ನಮಗೂ ಮತಕ್ಕೂ ಇರುವ ಅಂತರ ತುಂಬಾ ಹೆಚ್ಚತ್ತೆ ಅದಕ್ಕೆ...
:)
Tuesday, September 23, 2008
ಮತಾಂತರ ಏಕೆ ಬೇಕು?
ಪತ್ರಕರ್ತ: ಈ ಮತಾಂತರ ಏಕೆ ಬೇಕು?
ರಾಜಕಾರಣಿ: ನಮಗೂ ಮತಕ್ಕೂ ಇರುವ ಅಂತರವನ್ನು ಕಡಿಮೆ ಮಾಡಲು, ಮತಾಂತರ ಬೇಕು...
ರಾಜಕಾರಣಿ: ನಮಗೂ ಮತಕ್ಕೂ ಇರುವ ಅಂತರವನ್ನು ಕಡಿಮೆ ಮಾಡಲು, ಮತಾಂತರ ಬೇಕು...
Friday, September 19, 2008
'ಟಾಟಾ' ಹೋದ 'ಟಾಟಾ'!
ಇದೀಗ ಬಂದ ಸುದ್ದಿಯಂತೆ, ಜನಜನಿತವಾಗಿದ್ದ 'ಟಾಟಾ' ಎಂಬ ಪದವು ನಿಗೂಢ ರೀತಿಯಲ್ಲಿ ಜನತೆಯ ಬಾಯಿಂದ ನಾಪತ್ತೆಯಾಗಿದೆ.
ಸುಮಾರು ೧೫-೨೦(?) ವರ್ಷಗಳಿಂದ ಗೆಳೆಯರನ್ನು, ಅತಿಥಿಗಳನ್ನು ಬೀಳ್ಕೊಡಲು ಬಳಸುತ್ತಿದ್ದ ಈ ಪದ, ಈ ರೀತಿ ಮಾಯವಾಗಿರುವುದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ತನಿಖಾ ತಂಡಗಳು 'ಟಾಟಾ' ಪದದ ಈ ಅವಸ್ಠೆಗೆ ಬಯೋತ್ಪಾದಕರೇ ('ಬೈ'ಉತ್ಪಾದಕರೇ) ಕಾರಣ ಎಂಬುದಾಗಿ ಗುರುತಿಸಿದ್ದಾರೆ.
ಈ ಬಯೋತ್ಪಾದಕರು ನುಸುಳುವ ಬಗ್ಗೆ ಸರ್ಕಾರಕ್ಕೆ ಗುಪ್ತ ದಳವು ಮಾಹಿತಿಯನ್ನು ಮುಂಚೆಯೇ ತಿಳಿಸಲಾಗಿತ್ತಾದರೂ, ಸರ್ಕಾರ ಇದರತ್ತ ಗಮನ ಹರಿಸಿರಲಿಲ್ಲ ಎನ್ನಲಾಗಿದೆ.
ಈ 'ಬಯೋತ್ಪಾದಕ'ರೂ ನಮ್ಮ ನಾಡಿನಲ್ಲಿ ನುಸುಳಲು, ಈ ರೀತಿ ಎಲ್ಲರ ಬಾಯಲ್ಲೂ ನೆಲೆಸಲು ಸರ್ಕಾರದ ವೈಫಲ್ಯವೇ ಕಾರಣ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದೆ.
ಇಡೀ ರಾಜ್ಯದಲ್ಲಿ 'ಬಯ'ದ (ಬೈ'ದ) ವಾತಾವರಣ ಉಂಟಾಗಿದ್ದು, ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಒತ್ತಡದಲ್ಲಿರುವ ಸರ್ಕಾರ, ಎಲ್ಲರ ಬಾಯಲ್ಲಿ ನಲಿದ ಈ 'ಟಾಟಾ', ಈ ರೀತಿ ಬಾಯ್ಮರೆಯಾದದ್ದಕ್ಕೆ ಕಾರಣವೇನೆಂದು ತಿಳಿಯಲು ತಜ್ಞರ ಸಮಿತಿ ರಚಿಸುವುದಾಗಿ ಸರ್ಕಾರ ಘೋಷಿಸಿದೆ.
ಇತ್ತ ರಾಜಕೀಯ ತಜ್ಞರು, ಹಿಂದಿನ ಸರ್ಕಾರ, 'ಟಾಟಾ' ಕಾಟ ಹೆಚ್ಚಾಗಿ 'ಪೋಟಾ' ಕಾಯ್ದೆಯೇನಾದರೂ ಬಳಸಿದ್ದರೆ? ಎಂಬುದನ್ನು ತನಿಖೆ ಮಾಡಬೇಕೆಂದು ಕರೆ ನೀಡಿದ್ದಾರೆ. ಹಲವು ಬಲ ಪಕ್ಷ್ದದ ರಾಜಕೀಯ ಮುಖಂಡರು, 'ಟಾಟಾ' ಮಂದಿ ಈಗ 'ಬೈಯಾಂತರ'ಗೊಂಡಿರುವುದಾಗಿ ಶಂಕಿಸುತ್ತಿದ್ದಾರೆ. ಇದರ ಮಧ್ಯೆ, ಈ ಪದವು ಈ ರೀತಿ ಬಾಯ್ಮರೆಯಾಗಲು, ಕೋಮುವಾದಿ ಸಂಘಟನೆಗಳೇ ಕಾರಣ ಎಂದು 'ಎಡ' ಪಕ್ಷ ತನ್ನ ಮೈ ಕೊಡವಿಕೊಂಡಿದೆ.
ಈ ಸುದ್ದಿ ಸ್ಫೋಟಗೊಳ್ಳುತ್ತಿದ್ದಂತೆ, ಭಾಷಾ ತಜ್ಞರು, ಈ ಪದದ ಹಿನ್ನಲೆಯನ್ನು ಹುಡುಕಲಾರಂಭಿಸಿದ್ದು, ಸಾಹಿತ್ಯ ವಲಯದಲ್ಲಿ ವಿವಿಧ ಅಭಿಪ್ರಾಯಗಳು ಹೊರಹೊಮ್ಮಿದೆ. ಈ ಪದವು ಸಂಸ್ಕೃತದ್ದು, ಅಚ್ಚ ಕನ್ನಡ ಒರೆಯು, ಮರಾಠಿ, ಪ್ರಾಕೃತವು ಎಂದು ತಮ್ಮದೇ ಆದ ವಾದಗಳನ್ನು ಸಾಕಷ್ಟು ಪುರಾವೆಗಳೊಂದಿಗೆ ಪ್ರಮಾಣ ಮಾಡುವುದಾಗಿ ಹಲವಾರು ಸಾಹಿತಿಗಳು ಪಂಥ ಕಟ್ಟಿದ್ದಾರೆ.
ಈ ವರದಿ ಪ್ರಕಟಿಸುವ ಮುನ್ನ ನಾವು ಜನಸಾಮಾನ್ಯರ ಅಭಿಪ್ರಾಯವನ್ನು ಶೇಖರಿಸಿದ್ದು, ಹಲವಾರು ಮಂದಿ, 'ಟಾಟಾ' ಕಂಪನಿಯು ''ನ್ಯಾನೋ'ದೊಂದಿಗೆ ಕಾಲಿಡುವಾಗ, 'ಟಾಟಾ' ಪದವು ನಮ್ಮ ನಾಡಿನಲ್ಲಿ ಮರುನೆಲೆಸುವುದಾಗಿ ಆಶಯ ಹೊಂದಿರುವುದು ಅಚ್ಚರಿ ಮೂಡಿಸಿದೆ.
'ಟಾಟಾ', 'ಟಾಟಾ'ನೊಂದಿಗೆ ಮರುಕಾಲಿಡುವುದೇ, ಇದನ್ನು ಸಮಯವೇ ಹೇಳಬೇಕಿದೆ.
--ಶ್ರೀ
ವಿ.ಸೂ: ನೀವು 'ಟಾಟಾ' ಮಂದಿಯಾಗಿದ್ದಲ್ಲಿ, ತಕ್ಷಣವೇ, ನಮ್ಮನ್ನು ಸಂಪರ್ಕಿಸಬೇಕಾಗಿಯೂ, ನಿಮ್ಮ ಸಂದರ್ಶನ ಮಾಡಿ, 'ಟಾಟಾ' ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಸಂಪಾದಕರು ಇಚ್ಚಿಸುತ್ತಾರೆ ಎಂದು ತಿಳಿಸಲು ಬಯಸುತ್ತೇವೆ.
ಸುಮಾರು ೧೫-೨೦(?) ವರ್ಷಗಳಿಂದ ಗೆಳೆಯರನ್ನು, ಅತಿಥಿಗಳನ್ನು ಬೀಳ್ಕೊಡಲು ಬಳಸುತ್ತಿದ್ದ ಈ ಪದ, ಈ ರೀತಿ ಮಾಯವಾಗಿರುವುದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ತನಿಖಾ ತಂಡಗಳು 'ಟಾಟಾ' ಪದದ ಈ ಅವಸ್ಠೆಗೆ ಬಯೋತ್ಪಾದಕರೇ ('ಬೈ'ಉತ್ಪಾದಕರೇ) ಕಾರಣ ಎಂಬುದಾಗಿ ಗುರುತಿಸಿದ್ದಾರೆ.
ಈ ಬಯೋತ್ಪಾದಕರು ನುಸುಳುವ ಬಗ್ಗೆ ಸರ್ಕಾರಕ್ಕೆ ಗುಪ್ತ ದಳವು ಮಾಹಿತಿಯನ್ನು ಮುಂಚೆಯೇ ತಿಳಿಸಲಾಗಿತ್ತಾದರೂ, ಸರ್ಕಾರ ಇದರತ್ತ ಗಮನ ಹರಿಸಿರಲಿಲ್ಲ ಎನ್ನಲಾಗಿದೆ.
ಈ 'ಬಯೋತ್ಪಾದಕ'ರೂ ನಮ್ಮ ನಾಡಿನಲ್ಲಿ ನುಸುಳಲು, ಈ ರೀತಿ ಎಲ್ಲರ ಬಾಯಲ್ಲೂ ನೆಲೆಸಲು ಸರ್ಕಾರದ ವೈಫಲ್ಯವೇ ಕಾರಣ ಎಂದು ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದೆ.
ಇಡೀ ರಾಜ್ಯದಲ್ಲಿ 'ಬಯ'ದ (ಬೈ'ದ) ವಾತಾವರಣ ಉಂಟಾಗಿದ್ದು, ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಒತ್ತಡದಲ್ಲಿರುವ ಸರ್ಕಾರ, ಎಲ್ಲರ ಬಾಯಲ್ಲಿ ನಲಿದ ಈ 'ಟಾಟಾ', ಈ ರೀತಿ ಬಾಯ್ಮರೆಯಾದದ್ದಕ್ಕೆ ಕಾರಣವೇನೆಂದು ತಿಳಿಯಲು ತಜ್ಞರ ಸಮಿತಿ ರಚಿಸುವುದಾಗಿ ಸರ್ಕಾರ ಘೋಷಿಸಿದೆ.
ಇತ್ತ ರಾಜಕೀಯ ತಜ್ಞರು, ಹಿಂದಿನ ಸರ್ಕಾರ, 'ಟಾಟಾ' ಕಾಟ ಹೆಚ್ಚಾಗಿ 'ಪೋಟಾ' ಕಾಯ್ದೆಯೇನಾದರೂ ಬಳಸಿದ್ದರೆ? ಎಂಬುದನ್ನು ತನಿಖೆ ಮಾಡಬೇಕೆಂದು ಕರೆ ನೀಡಿದ್ದಾರೆ. ಹಲವು ಬಲ ಪಕ್ಷ್ದದ ರಾಜಕೀಯ ಮುಖಂಡರು, 'ಟಾಟಾ' ಮಂದಿ ಈಗ 'ಬೈಯಾಂತರ'ಗೊಂಡಿರುವುದಾಗಿ ಶಂಕಿಸುತ್ತಿದ್ದಾರೆ. ಇದರ ಮಧ್ಯೆ, ಈ ಪದವು ಈ ರೀತಿ ಬಾಯ್ಮರೆಯಾಗಲು, ಕೋಮುವಾದಿ ಸಂಘಟನೆಗಳೇ ಕಾರಣ ಎಂದು 'ಎಡ' ಪಕ್ಷ ತನ್ನ ಮೈ ಕೊಡವಿಕೊಂಡಿದೆ.
ಈ ಸುದ್ದಿ ಸ್ಫೋಟಗೊಳ್ಳುತ್ತಿದ್ದಂತೆ, ಭಾಷಾ ತಜ್ಞರು, ಈ ಪದದ ಹಿನ್ನಲೆಯನ್ನು ಹುಡುಕಲಾರಂಭಿಸಿದ್ದು, ಸಾಹಿತ್ಯ ವಲಯದಲ್ಲಿ ವಿವಿಧ ಅಭಿಪ್ರಾಯಗಳು ಹೊರಹೊಮ್ಮಿದೆ. ಈ ಪದವು ಸಂಸ್ಕೃತದ್ದು, ಅಚ್ಚ ಕನ್ನಡ ಒರೆಯು, ಮರಾಠಿ, ಪ್ರಾಕೃತವು ಎಂದು ತಮ್ಮದೇ ಆದ ವಾದಗಳನ್ನು ಸಾಕಷ್ಟು ಪುರಾವೆಗಳೊಂದಿಗೆ ಪ್ರಮಾಣ ಮಾಡುವುದಾಗಿ ಹಲವಾರು ಸಾಹಿತಿಗಳು ಪಂಥ ಕಟ್ಟಿದ್ದಾರೆ.
ಈ ವರದಿ ಪ್ರಕಟಿಸುವ ಮುನ್ನ ನಾವು ಜನಸಾಮಾನ್ಯರ ಅಭಿಪ್ರಾಯವನ್ನು ಶೇಖರಿಸಿದ್ದು, ಹಲವಾರು ಮಂದಿ, 'ಟಾಟಾ' ಕಂಪನಿಯು ''ನ್ಯಾನೋ'ದೊಂದಿಗೆ ಕಾಲಿಡುವಾಗ, 'ಟಾಟಾ' ಪದವು ನಮ್ಮ ನಾಡಿನಲ್ಲಿ ಮರುನೆಲೆಸುವುದಾಗಿ ಆಶಯ ಹೊಂದಿರುವುದು ಅಚ್ಚರಿ ಮೂಡಿಸಿದೆ.
'ಟಾಟಾ', 'ಟಾಟಾ'ನೊಂದಿಗೆ ಮರುಕಾಲಿಡುವುದೇ, ಇದನ್ನು ಸಮಯವೇ ಹೇಳಬೇಕಿದೆ.
--ಶ್ರೀ
ವಿ.ಸೂ: ನೀವು 'ಟಾಟಾ' ಮಂದಿಯಾಗಿದ್ದಲ್ಲಿ, ತಕ್ಷಣವೇ, ನಮ್ಮನ್ನು ಸಂಪರ್ಕಿಸಬೇಕಾಗಿಯೂ, ನಿಮ್ಮ ಸಂದರ್ಶನ ಮಾಡಿ, 'ಟಾಟಾ' ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಸಂಪಾದಕರು ಇಚ್ಚಿಸುತ್ತಾರೆ ಎಂದು ತಿಳಿಸಲು ಬಯಸುತ್ತೇವೆ.
Labels:
ಲಲಿತ ಪ್ರಬಂಧ,
ಹಾಸ್ಯ
Subscribe to:
Posts (Atom)