ವಿಧ ವಿಧವಾದ ಕಡ್ಲೆ ಕಾಯಿ ವಿತರಿಸುವ ಏಕೈಕ ಬ್ಲಾಗ್ ತಾಣಕ್ಕೆ ಸ್ವಾಗತ... ಇಲ್ಲಿವರೆಗೂ ಬಂದಿದೀರ, ಸ್ವಲ್ಪ ಕಡ್ಲೆ ಕಾಯಿ ತಿಂದು ಹೇಗಿದೆ ಅಂತ ಹೇಳಿ ಹೋಗಿ...
Showing posts with label ಪ್ರಚಲಿತ. Show all posts
Showing posts with label ಪ್ರಚಲಿತ. Show all posts
Thursday, November 1, 2012
ಸ್ಯಾಂಡಿ - ಸಂಧ್ಯಾನ -ಸಂದೀಪನಾ? ಮತ್ತು ಲೈಲಾ-ಮಜನೂ ಸೇರದ ಕಥೆ!
ಕೆಲ ದಿನಗಳ ಹಿಂದೆ ಅಮ್ಮನಿಗೆ ಫೋನ್ ಮಾಡಿ - ’ಸ್ಯಾಂಡಿಯಿಂದ ನಮಗೇನು ಆತಂಕ ಇಲ್ಲಮ್ಮ...ನೀನೇನು ಯೋಚನೆ ಮಾಡಬೇಡ’ ಅಂದೆ...
’ಅಲ್ಲಿ ಸ್ಯಾಂಡಿ ಅಂತೆ, ಇಲ್ಲೇನೋ ’ನೀಲಂ’ ಬರ್ತಾ ಇದೆಯಂತೆ - ಸೈಕ್ಲೋನ್ ಎಲ್ಲ ಹೆಸರಿಟ್ಟುಕೊಂಡು ಬರ್ತಾ ಇದೆ!’ ಅಂದರು ಅಮ್ಮ...
ಅಮ್ಮನ ಮುಗ್ಧ ಮಾತಿಗೆ ನಕ್ಕು, ’ಹೆಸರು ಇಟ್ಕೊಂಡ್ ಬರಕ್ಕೇ ಆಗತ್ತಾ? ನಾವೇ ಹೆಸರಿಡೋದು...ಹಿಂದೆ ಎಲ್ಲ ’ಲೈಲಾ’ ಬಂದಿದ್ಳು ನೆನಪಿದೆಯಾ?’ ಅಂದೆ...
’ಹೌದಾ...ಲೈಲಾ ಬಂದ್ರೆ ಮಜನೂ ಬರಲಿಲ್ವಾ?’ ಎಂದು ಕೇಳಿದಾಗ, ಅಮ್ಮನ ಮಾತಿಗೆ ನಾನು ಗೊಳ್ಳೆಂದು ನಕ್ಕೆನಾದರೂ, ’ಮಜನೂ’ ಏಕೆ ಬರಲಿಲ್ಲ ಅಥವಾ ಏಕೆ ಮಜನೂ ಮುಂದೇನೂ ಬರೋದಿಲ್ಲ ಅಂತ ಗೊತ್ತಿರಲಿಲ್ಲ...
ಇತ್ತ ಕಡೆ ’ಸ್ಯಾಂಡಿ’ ಅಮೇರಿಕದ ಪೂರ್ವ ಭಾಗದಲ್ಲಿ ಅನಾಹುತವನ್ನು ಮಾಡ್ತಿದ್ರೆ,
ಕೀಟಲೆ ಕೋರರು, "’ಸ್ಯಾಂಡಿ’ ನಮ್ಮ ’ಸಂಧ್ಯ’ನಾ ಇಲ್ಲ ’ಸಂದೀಪ’ನಾ?" ಅಂತ ಫ಼ೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿ, ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ನಡುವೆ ಭಯಂಕರ ಬಿಕ್ಕಟ್ಟನ್ನೇ ಸೃಷ್ಟಿಸಿಬಿಟ್ಟರು...
’ಸ್ಯಾಂಡಿ’ - ’ ಸಂಧ್ಯಾ"ನೇ ಅಂತ ಹೆಂಡತಿಯೊಂದಿಗೆ ವಾಗ್ವಾದ ಮಾಡಿದ ಗಂಡ ಉಪವಾಸ ಬೀಳಬೇಕಾಯ್ತು ಅಂತ ಅನ್ನೋದು ಮತ್ತೊಂದು ಫ಼ೇಸ್ ಬುಕ್ ಕಥೆ...
ಅದೇನೆ ಇರಲಿ, ನನ್ನ ಹೆಂಡತಿ ಕೂಡ, ’ತುಂಬಾ ಮೋಸ...ಹರಿಕೇನ್ ಗೆಲ್ಲಾ ಹುಡುಗೀರ್ ಹೆಸರೇ ಯಾಕಿಡ್ಬೇಕು - ಕಟ್ರೀನಾ ಅಂತೆ...ಲೈಲಾ ಅಂತೆ...ನೀಲಂ ಅಂತೆ...’ ಎಂದಾಗ
ನಾನು ಸುಮ್ಮನೆ ಇರದೆ ’ಅಷ್ಟೂ ಗೊತ್ತಾಗಲ್ವೇನೆ ಯಾಕೇ ಹುಡುಗೀರ್ ಹೆಸರಿಡ್ತಾರೆ ಅಂತ?’ ಎಂದು ಹೇಳ್ಬಿಟ್ಟೆ...ಅವತ್ತು ನನ್ನ ಪಾಡು ಯಾಕೆ ಕೇಳ್ತೀರಾ!
ನನ್ನ ಪಾಡು ಏನೇ ಆದ್ರೂ, ನನ್ನ ಹೆಂಡತಿ ಸ್ಯಾಂಡಿ ಹುಡುಗಿನೇ ಅಂತ ಒಪ್ಕೊಂಡ್ಳಲ್ಲಾ ಅಂತ ನನ್ನಷ್ಟಕ್ಕೇ ನಾನೇ ಸಮಾಧಾನ ಮಾಡ್ಕೊಂಡಿದ್ದೆ!!!
***
ಇಷ್ಟೆಲ್ಲಾ ಓದಿದ ಹೆಣ್ಣು ಮಕ್ಕಳು ಈಗಾಗಲೇ ನನ್ನ ಮೇಲೆ ಮೂರನೇ ಮಹಾ ಯುದ್ಧಕ್ಕೆ ಸಿದ್ಧರಾಗ್ತಿರಬಹುದು, ಹಾಗಾಗಿ ಮುಖ್ಯವಾದ ವಿಷಯ ಮೊದಲೇ ಹೇಳಿ ಬಿಡ್ತೀನಿ...
ಎಲ್ಲಾ ಹರಿಕೇನ್ ಗಳೂ/ಸೈಕ್ಲೋನ್ಗಳೂ, ಹೆಣ್ಣು ಮಕ್ಕಳ ಹೆಸರು ಇಟ್ಕೊಂಡಿರಲ್ಲ...
ಮುಂದೆ ’ಆಕಾಶ’ ನೂ ಬರ್ತಾನೆ ’ಸಾಗರ್’ ಕೂಡ ಬರ್ತಾನೆ ಆದ್ರೆ ಸದ್ಯಕ್ಕಲ್ಲ ...ಆದ್ರೆ ’ಮಜನೂ’ ಬರೋದು ಮಾತ್ರ ತುಂಬಾನೇ ಡೌಟು...
"ಅದೇನು ಅಷ್ಟೊಂದು ಕಾನ್ಫಿಡೆನ್ಸ್ ನಿಂದ ಹೇಳ್ತಿದೀರಾ?" ಅಂತೀರಾ? ಅದಕ್ಕೆ ಕಾರಣ ಇದೆ...
ಪ್ರತಿಯೊಂದು ಸೈಕ್ಲೋನ್ ಬರೋದಕ್ಕೂ ಮುಂಚೇನೆ ಮುಂದೆ ಏನು ಬರತ್ತೇ ಅನ್ನೋದನ್ನ ಮೊದಲೇ ನಿರ್ಧಾರ ಮಾಡಿ ಆಗಿರತ್ತೆ...
ಇದು ಏನಪ್ಪಾ ಇದು ಅಂತ ತಲೆ ಕೆರ್ಕೋ ಬೇಡಿ...
ನಮ್ಮ ’ಪ್ರಭವ’, ’ವಿಭವ’ ಅಂತ ಅರವತ್ತು ಸಂವತ್ಸರಗಳ ಹೆಸರಿದೆಯಲ್ಲಾ, ಅದೇ ರೀತಿ...
"ರೀ, ಸಾಕು ಸುಮ್ನೆ ಬುರಡೆ ಬಿಡಬೇಡಿ, ನಾವು ಚಿಕ್ಕವರಾಗಿದ್ದಾಗ ಇದು ಯಾವ ಹೆಸ್ರೂ ಕೇಳೇ ಇರಲಿಲ್ಲ...ಪ್ರಭವ-ವಿಭವ ಅಂತೇ...ಆ ರೀತಿ ಇದ್ದಿದ್ರೆ ನಮ್ಮ ಅಪ್ಪನೋ ತಾತನೋ ಹೇಳ್ತಿದ್ರು ಅಲ್ವಾ" ಅಂತ ಅಂದ್ರಾ?
ಅದಕ್ಕೂ ಕಾರಣ ಇದೆ...ನಮ್ಮ ಭಾರತದಲ್ಲಿ ಸೈಕ್ಲೋನ್ ಹೆಸರಿಡುವ ಪ್ರತೀತಿ ಶುರುವಾಗಿದ್ದು ೨೦೦೪ರಲ್ಲಿ...
ಮೊದಲು ಬಂದಿದ್ದು ’ಒನಿಲ್’ ಆಮೇಲೆ ’ಅಗ್ನಿ’ ಆದರೆ ನೀವು ಎಲ್ಲ ಹೆಸರೂ ಕೇಳಿರಬೇಕು ಅಂತ ಏನು ಇಲ್ಲ...
ಯಾಕೇ ಅಂದ್ರೆ ಪ್ರತಿ ವರ್ಷ ಹತ್ತಾರು ಸೈಕ್ಲೋನ್ ಗಳೂ ಹರಿಕೇನ್ ಗಳೂ ಬಂದು ಹೋಗ್ತಾ ಇರತ್ತೆ...ದಿನ ಪತ್ರಿಕೆಯಲ್ಲಿ ಬರೋದು ಏನಿದ್ರೂ ನಮ್ಮ ನಿತ್ಯ-ಜೀವನಕ್ಕೆ ತಟ್ಟುವಂತಹವುಗಳು ಮಾತ್ರ...
ಹಾಗಾಗಿ ’ಲೈಲಾ’ ’ಕಟ್ರೀನಾ’ ’ಐರೀನ್’ ಗಳ ನೆನಪು ನಮಲ್ಲಿ ಹೆಚ್ಚು ಕಾಲ ಉಳಿಯುತ್ತೆ...
’ಅದು ಸರಿ, ನಮ್ಮ ಬಾಲಿವುಡ್ ನಲ್ಲಿ ಕಟ್ರೀನಾ ಈಗಾಗ್ಲೇ ಇದಾಳೆ, ಸೈಕ್ಲೋನ್ ಕಟ್ರೀನಾ ಬೇಡ’ ಅಂದ್ರಾ?
ತಥಾಸ್ತು! ನಮ್ಮ ದೇಶಕ್ಕೆ ಕಟ್ರೀನಾ ’ಶಾಪ’ ತಟ್ಟಲ್ಲ ಬಿಡಿ!
"ಏನ್ರೀ ಈಗ ತಾನೆ ಲಿಸ್ಟ್ ಇದೇ ಅಂದ್ರೀ, ಈಗ ಕಟ್ರೀನಾ ಬರಲ್ಲ ಅಂತೀರಾ? ಸುಮ್ನೆ ತಲೇ ಕೇಡಿಸ್ಬೇಡ್ರೀ" ಅಂದ್ರಾ?
ಅದು ಹಾಗಲ್ಲ ಕಣ್ರೀ, ನಮ್ಮ ಭೂಮಿಯಲ್ಲಿರೋ ಬೇರೆ ಬೇರೆ ಸಾಗರ/ಸಮುದ್ರಗಳನ್ನು ವಿವಿಧ ಪ್ರಾಂತ್ಯಗಳಾಗಿ ವಿಂಗಡನೆ ಮಾಡಿದ್ದಾರೆ...
ಪ್ರತಿಯೊಂದು ಪ್ರಾಂತ್ಯದಲ್ಲೂ ಸೈಕ್ಲೋನ್/ಹರಿಕೇನ್ ಗಳ ಒಂದು ಪಟ್ಟಿ ಇರತ್ತೆ, ಹಾಗಾಗಿ ’ಕಟ್ರೀನಾ’ ಶಾಪ ಏನಿದ್ರೂ ಅಟ್ಲಾಂಟಿಕ್ ಪ್ರದೇಶಕ್ಕೇ ಸೀಮಿತ...
ನಮ್ಮ ನೀಲಂ ನೃತ್ಯ ಏನಿದ್ರೂ ಹಿಂದೂ ಮಹಾ ಸಾಗರದಲ್ಲಿ ಮಾತ್ರ!
ಈ ಹೆಸರಿಡೋ ಪದ್ಧತಿ ಮೊದಲು ಶುರುವಾಗಿದ್ದು ಆಕಸ್ಮಿಕವಾಗಿ ಅಟ್ಲಾಂಟಿಕ್ ಮಹಾ ಸಾಗರದಲ್ಲಿ "ಅಂತ್ಜೆ" ಎಂಬ ಒಂದು ಪ್ರಸಿದ್ಧ ಹಡಗು ಹರಿಕೇನ್ ನಿಂದ ಮುಳಿಗಿದಾಗ...
ಆಗ ಜನ "ಅಂತ್ಜೆ" ಹರಿಕೇನ್ ಎಂದು ಕರೆಯಲು ಆರಂಭಿಸಿದರಂತೆ...
ನಂತರ ಇಪ್ಪತ್ತನೇ ಶತಮಾನದ ಮಧ್ಯದಲ್ಲಿ ಪ್ರತಿಯೊಂದು ಹರಿಕೇನ್ಗೂ ಹೆಸರಿಡಲು ಆರಂಭಿಸಿದರಂತೆ...
ಮೊದ-ಮೊದಲಿಗೆ ಬರೀ ಹುಡುಗಿಯರ ಹೆಸರೇ ಇತ್ತಂತೆ...ಇದಾದ ಮೇಲೆ ಹವಾಮಾನ ಕೇಂದ್ರದಲ್ಲಿದ್ದವರಿಗೆ ಉಪವಾಸವೇ ಗತಿಯಾಯ್ತೇನೋ ೧೯೭೯ರಲ್ಲಿ ಹುಡುಗರ ಹೆಸರನ್ನೂ ಸೇರಿಸಿದರಂತೆ...
ಈಗ ಅಟ್ಲಾಂಟಿಕ್ ಸಾಗರದಲ್ಲಿ ಹುಟ್ಟುವ ಹರಿಕೇನ್ ಗಳಿಗೆ ಹುಡುಗಿಯರ ಮತ್ತು ಹುಡುಗರ ಹೆಸರನ್ನು ಒಂದಾದಮೇಲೆ ಮತ್ತೊಂದು ಬರುವಂತೆ ಬದಲಾಯಿಸಿದ್ದಾರೆ...
ಈಗ ಪ್ರಪಂಚದಲ್ಲಿರುವ ವಿಭಾಗಳು ಇವು:
೧. ಕೆರಿಬಿಯನ್, ಮೆಕ್ಸಿಕೋ ಮತ್ತು ಉತ್ತರ ಅಟ್ಲಾಂಟಿಕ್ ವಿಭಾಗ
೨. ಈಶಾನ್ಯ ಪೆಸಿಫಿಕ್ ವಿಭಾಗ
೩. ಉತ್ತರ-ಮಧ್ಯ ಪೆಸಿಫಿಕ್ ವಿಭಾಗ
೪. ವಾಯುವ್ಯ ಪೆಸಿಫಿಕ್ ಮತ್ತು ದಕ್ಷಿಣ ಚೀನಾ ಸಮುದ್ರ ವಿಭಾಗ
೫. ಆಸ್ಟ್ರೇಲಿಯಾ ವಿಭಾಗ
೬. ನಾಡಿಸ್ ವಿಭಾಗ (ದಕ್ಷಿಣ ಪೆಸಿಫಿಕ್ನ ಕೆಲವು ಭಾಗಗಳು)
೭. ಪೋರ್ಟ್ ಮೋರ್ಸ್ಬಯ್ ವಿಭಾಗ
೮. ಜಕಾರ್ತಾ ವಿಭಾಗ
೯. ಉತ್ತರ ಹಿಂದೂ ಮಹಾಸಾಗರ ವಿಭಾಗ
೧೦.ನೈರುತ್ಯ ಹಿಂದೂ ಮಹಾ ಸಾಗರ ವಿಭಾಗ
ಪ್ರತಿಯೊಂದು ವಿಭಾಗದ ಹವಾಮಾನಕ್ಕೂ ಒಂದು ಮುಖ್ಯ ಕಚೇರಿಯಿದ್ದು, ಉತ್ತರ ಹಿಂದೂ ಮಹಾಸಾಗರ ವಿಭಾಗಕ್ಕೆ ದೆಹಲಿಯಲ್ಲಿ ಮುಖ್ಯ ಕಚೇರಿ ಇದೆ...
ಈ ವಿಭಾಗದ ಸೈಕ್ಲೋನ್ಗಳಿಗೆ ಭಾರತ, ಪಾಕಿಸ್ತಾನ, ಶ್ರೀಲಂಕ, ಮಾಲ್ಡೀವ್ಸ್, ಮ್ಯಾನ್ಮಾರ್, ಥೈಲಾಂಡ್ ಮತ್ತು ಓಮನ್ ದೇಶದವರು ಸೇರಿ ಹೆಸರಿಟ್ಟಿದ್ದಾರೆ.
ಈ ಪಟ್ಟಿ ಇಲ್ಲಿದೆ:
ಭಾರತೀಯ ಹವಾಮಾನ ಇಲಾಖೆ ಜನತೆಗೆ ಹೊಸ ಹೆಸರನ್ನು ಸೂಚಿಸಬಹುದಾದ ಅವಕಾಶ ಕೊಡುತ್ತದೆಯಾದರೂ, ೨೦೦೪ರಲ್ಲಿ ಸಿದ್ಧಪಡಿಸಿರುವ ಪಟ್ಟಿಯನ್ನು ಈ ಸದ್ಯದಲ್ಲಿ ಬದಲಾಯಿಸುವುದು ಅನುಮಾನ...
ಹಾಗಾಗಿ, ಸೈಕ್ಲೋನ್ ಲೈಲಾ-’ಸೈಕ್ಲೋನ್’ ಮಜನೂನ ಸದ್ಯಕ್ಕಂತೂ ಸೇರೋಕಾಗೋದಿಲ್ಲ...!
ಇವೆಲ್ಲಾ ವಿಷಯ ಓದಿ ನಿಮಗೆ ಇನ್ನೂ ಸಮಾಧಾನ ಆಗಲಿಲ್ಲವಾದಲ್ಲಿ, ಹೆಚ್ಚಿನ ವಿಷಯಗಳಿಗೆ ಇಲ್ಲಿ ಚಿಟಕಿಸಿ:
http://www.wmo.int/pages/prog/www/tcp/Storm-naming.html
ಇಷ್ಟೆಲ್ಲ ಕಥೆ ಹೇಳಿದ್ದಾಯ್ತು, ಹೇಳೋದ್ದನ್ನೇ ಮರೆತಿದ್ದೇ...
ಸ್ಯಾಂಡಿ - ಸಂಧ್ಯಾನೇ ಅಂತ ಕನ್ಫರ್ಮ್ ಆಯ್ತು ಯಾಕೇ ಅಂದ್ರೆ ಅವಳ ಹಿಂದೆ ಬಂದಿದ್ದು ರಾಫಲ್ ಮುಂದೆ ಬರೋವ್ನು ಟೋನಿ...! :-)
--ಶ್ರೀ
ಹೆಚ್ಚಿನ ಮಾಹಿತಿಗೆ:
http://www.wmo.int
ಚಿತ್ರ ಕೃಪೆ: http://www.imd.gov.in/
ಸ್ಯಾಂಡಿ ಚಿತ್ರಕೃಪೆ: http://www.telegraph.co.uk
Friday, August 5, 2011
Sunday, May 31, 2009
ಅತ್ತೆಯ ನೋವು
ಬಿಳಿಯ ಮೈಯವಳಾದರೇನು,
ಮಗಳಂತೆ ಸಲುಹಿದೆ ಸೊಸೆಯನ್ನು...
ಜಗಳವೆಂದೂ ಇಲ್ಲ, ಈ ಹೊಸ ಮಗಳೊಡನೆ
ಸೊಸೆ ಕೂಡ ಮಗಳಂತೆ, ಕಿಲಕಿಲನೆ ನಗುನಗುತ ಓಡಾಡಿದಾಗ, ನನಗೂ ಖುಷಿ!
ಮನೆಯವಳಾದಳಲ್ಲ ಹೊರಗಿನವಳೆಂದು !
ಸಮಯ ಉರುಳಿತು...
ಬಳಿಕ ನನ್ನ ಕಿಬ್ಬೊಟ್ಟೆಯ ನೋವು ಹೆಚ್ಚಾಗಿ
ಕೊನೆಗೆ ನೋವು ತಡೆಯಲಾರದೆ ನೋಡಿಕೊಂಡೆ ಏನಾಗಿದೆಯೆಂದು...
ಆಗಲೇ ನನಗೆ ಕಂಡದ್ದು, ನನ್ನಳೊಗೆ ಆಳವಾಗಿಳಿದ ಮಿರಿ-ಮಿರಿ ಮಿಂಚುವ ಚಾಕು ...
ಆ ಕಿಲಕಿಲ ನಗು ಹೆಚ್ಚಾಗಿತ್ತು...
-ಶ್ರೀ
ಮಗಳಂತೆ ಸಲುಹಿದೆ ಸೊಸೆಯನ್ನು...
ಜಗಳವೆಂದೂ ಇಲ್ಲ, ಈ ಹೊಸ ಮಗಳೊಡನೆ
ಸೊಸೆ ಕೂಡ ಮಗಳಂತೆ, ಕಿಲಕಿಲನೆ ನಗುನಗುತ ಓಡಾಡಿದಾಗ, ನನಗೂ ಖುಷಿ!
ಮನೆಯವಳಾದಳಲ್ಲ ಹೊರಗಿನವಳೆಂದು !
ಸಮಯ ಉರುಳಿತು...
ಬಳಿಕ ನನ್ನ ಕಿಬ್ಬೊಟ್ಟೆಯ ನೋವು ಹೆಚ್ಚಾಗಿ
ಕೊನೆಗೆ ನೋವು ತಡೆಯಲಾರದೆ ನೋಡಿಕೊಂಡೆ ಏನಾಗಿದೆಯೆಂದು...
ಆಗಲೇ ನನಗೆ ಕಂಡದ್ದು, ನನ್ನಳೊಗೆ ಆಳವಾಗಿಳಿದ ಮಿರಿ-ಮಿರಿ ಮಿಂಚುವ ಚಾಕು ...
ಆ ಕಿಲಕಿಲ ನಗು ಹೆಚ್ಚಾಗಿತ್ತು...
-ಶ್ರೀ
Labels:
ನೀಲು,
ಪ್ರಚಲಿತ,
ರಾಜಕೀಯ,
ಸೋನಿಯಾ ಗಾಂಧಿ
Wednesday, February 11, 2009
ರವಿಯ ನಿಜ ಬಣ್ಣವೇನು???
ನಾನು ನನ್ನ ಗೆಳೆಯನಿಗೆ ಆಗಸ ತೋರಿ ಹೇಳಿದೆ...
'ಅದೋ ನೋಡು, ಸೂರ್ಯನೆಷ್ಟು ಹಳದಿಯಾಗಿ ಹೊಳೆಯುತ್ತಿದ್ದಾನೆ!'
ಅವನು ತಲೆ ಎತ್ತದೆಯೇ ಗುಡುಗುತ್ತಾನೆ...'ಸೂರ್ಯ ಹಳದಿಯಲ್ಲ, ಕೇಸರಿ!!!'
'ಅಲ್ಲಿ ನೋಡೋ, ಒಮ್ಮೆ...! ಅದೆಷ್ಟು ಸೊಬಗು ಆ ಹೊಂಬಣ್ಣ...'
ಆಗಸ ನೋಡಲು ಮತ್ತದೇ ಉದಾಸೀನ ಅವನಿಗೆ...
'ನಿನಗೆಲ್ಲೋ ತಲೆ ತಿರುಗಿದೆ, ಸೂರ್ಯನೆಂದಾದರು ಹಳದಿಯಾಗುವುದುಂಟೆ...ಅವನೆಂದು ಕೇಸರಿಯೇ...'
ಎಷ್ಟು ವರ್ಷದಿಂದ ನೋಡುತ್ತಿರುವೆ ಇವನನ್ನು...ಇವನು ಜಗಮೊಂಡ...'ನಾ ಹಿಡಿದ ಮೊಲಕ್ಕೆ ಒಂದೇ ಕಿವಿ ಎಂದು ಸಾಧಿಸುವವ' ಎಂದು ಮನದಲ್ಲೆಣಿಸಿದೆ...
ತುಸು ಹೊತ್ತಿನ ನಂತರ ಅವನು ತಲೆ ಎತ್ತಿ, 'ಅಲ್ಲಿ ನೋಡೋ ಮೂರ್ಖ! ಸೂರ್ಯನದೆಷ್ಟು ಕೇಸರಿ' ಎಂದ...
ಆ ವೇಳೆಗಾಗಲೆ ಸಂಜೆಯಾಗಿತ್ತು...
--ಶ್ರೀ
(ಫೆಬ್ರವರಿ ೧೧ ೨೦೦೯)
'ಅದೋ ನೋಡು, ಸೂರ್ಯನೆಷ್ಟು ಹಳದಿಯಾಗಿ ಹೊಳೆಯುತ್ತಿದ್ದಾನೆ!'
ಅವನು ತಲೆ ಎತ್ತದೆಯೇ ಗುಡುಗುತ್ತಾನೆ...'ಸೂರ್ಯ ಹಳದಿಯಲ್ಲ, ಕೇಸರಿ!!!'
'ಅಲ್ಲಿ ನೋಡೋ, ಒಮ್ಮೆ...! ಅದೆಷ್ಟು ಸೊಬಗು ಆ ಹೊಂಬಣ್ಣ...'
ಆಗಸ ನೋಡಲು ಮತ್ತದೇ ಉದಾಸೀನ ಅವನಿಗೆ...
'ನಿನಗೆಲ್ಲೋ ತಲೆ ತಿರುಗಿದೆ, ಸೂರ್ಯನೆಂದಾದರು ಹಳದಿಯಾಗುವುದುಂಟೆ...ಅವನೆಂದು ಕೇಸರಿಯೇ...'
ಎಷ್ಟು ವರ್ಷದಿಂದ ನೋಡುತ್ತಿರುವೆ ಇವನನ್ನು...ಇವನು ಜಗಮೊಂಡ...'ನಾ ಹಿಡಿದ ಮೊಲಕ್ಕೆ ಒಂದೇ ಕಿವಿ ಎಂದು ಸಾಧಿಸುವವ' ಎಂದು ಮನದಲ್ಲೆಣಿಸಿದೆ...
ತುಸು ಹೊತ್ತಿನ ನಂತರ ಅವನು ತಲೆ ಎತ್ತಿ, 'ಅಲ್ಲಿ ನೋಡೋ ಮೂರ್ಖ! ಸೂರ್ಯನದೆಷ್ಟು ಕೇಸರಿ' ಎಂದ...
ಆ ವೇಳೆಗಾಗಲೆ ಸಂಜೆಯಾಗಿತ್ತು...
--ಶ್ರೀ
(ಫೆಬ್ರವರಿ ೧೧ ೨೦೦೯)
Labels:
ಕೇಸರೀಕರಣ,
ಪ್ರಚಲಿತ,
ಸ್ವಗತ,
ಹುಸಿ ಜಾತ್ಯಾತೀತತೆ
Tuesday, February 10, 2009
ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!!
ಎಳೆ) ರಾಜಕಾರಣಿ: ಕೇಸರೀಕರಣಕ್ಕೆ ಧಿಕ್ಕಾರ!! ಧಿಕ್ಕಾರ!!
ಪತ್ರಕರ್ತ: ಯಾವ ವಿಚಾರಕ್ಕಾಗಿ ಧಿಕ್ಕಾರ ಕೂಗುತ್ತಿದ್ದೀರ? ನಿಮ್ಮ ಅನಿಸಿಕೆ ಹಂಚಿಕೊಳ್ಳುವಿರಾ?
(ಎಳೆ) ರಾಜಕಾರಣಿ: ಭಾ.ಜ.ಪ ಅಧಿಕಾರಕ್ಕೆ ಬಂದಾಗಿಂದ, ಪ್ರತಿದಿನ ಬೆಳಗ್ಗೆ - ಸಂಜೆ ಸೂರ್ಯನ ಕೇಸರಿ ಬಣ್ಣ ಹೆಚ್ಚಾಗಿ ಕಾಣ್ತಾ ಇದೆ ಅದಕ್ಕೆ!
:)
--ಶ್ರೀ
(೧೦-ಫೆಬ್ರವರಿ-೨೦೦೯)
ಪತ್ರಕರ್ತ: ಯಾವ ವಿಚಾರಕ್ಕಾಗಿ ಧಿಕ್ಕಾರ ಕೂಗುತ್ತಿದ್ದೀರ? ನಿಮ್ಮ ಅನಿಸಿಕೆ ಹಂಚಿಕೊಳ್ಳುವಿರಾ?
(ಎಳೆ) ರಾಜಕಾರಣಿ: ಭಾ.ಜ.ಪ ಅಧಿಕಾರಕ್ಕೆ ಬಂದಾಗಿಂದ, ಪ್ರತಿದಿನ ಬೆಳಗ್ಗೆ - ಸಂಜೆ ಸೂರ್ಯನ ಕೇಸರಿ ಬಣ್ಣ ಹೆಚ್ಚಾಗಿ ಕಾಣ್ತಾ ಇದೆ ಅದಕ್ಕೆ!
:)
--ಶ್ರೀ
(೧೦-ಫೆಬ್ರವರಿ-೨೦೦೯)
Tuesday, October 14, 2008
ಮರಗಳು ಧರೆಗೆ ಉರುಳುವುದೋ? ಹಸಿರು ಕಂಗಳಿಸುವುದೋ??

ಕಳೆದ ಕೆಲವು ದಿನಗಳಿಂದ, ಮೇಖ್ರಿ ವೃತ್ತದಿಂದ ಟಿ.ವಿ.ಗೋಪುರಕ್ಕೆ ಮುಟ್ಟುವ ದಾರಿಯನ್ನು ಅಗಲಿಸುವ ಕೆಲಸ ಶುರು ಮಾಡಿದ್ದಾರೆ ಎಂದು ಕಾಣುತ್ತದೆ.
ಇಲ್ಲಿಯವರೆಗೂ, ರಸ್ತೆಯ ಪಕ್ಕದ ಜಾಗದಲ್ಲಿ ಪಾದಚಾರಿಗಳಿಗೆಂದು ಸುಮಾರು ಅಗಲವಾದ ಜಾಗವನ್ನೇ ಬಿಟ್ಟಿದ್ದರು.
ಅಷ್ಟು ಅಗಲದ ಜಾಗದಲ್ಲಿ ನಡೆಯುತ್ತಿದ್ದವರು ತೀರ ಕಡಿಮೆ ಎನ್ನಬಹುದು.
ಹಾಗಾಗಿ, ಈ ಜಾಗವನ್ನು ಉಪಯೋಗಿಸಿಕೊಳ್ಳುತ್ತಿರುವುದು, ಇಲ್ಲಿ ರಸ್ತೆ ಅಗಲಿಸುವ ಕೆಲಸವನ್ನು ಕೈಗೊಂಡಿರುವುದು ಒಳ್ಳೆಯದೇ ಎನಿಸುತ್ತದೆ.
ಈ ರಸ್ತೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಬಳ್ಳಾರಿ ರಸ್ತೆಯ ಕೂಡು ರಸ್ತೆ ಆಗಿರುವುದರಿಂದ, ವಾಹನ ದಟ್ಟಣೆ ಇತ್ತೀಚಿನ ದಿನಗಳಲ್ಲಿ ತುಸು ಹೆಚ್ಚೇ ಆಗಿದೆ ಅನ್ನಬಹುದು.
ಹೆಚ್ಚು ಕಡಿಮೆ, ದಿನ-ನಿತ್ಯ ಇಲ್ಲಿ ಟ್ರಾಫಿಕ್ ಜ್ಯಾಮ್ ಆಗುವುದರಿಂದ, ಈ ರಸ್ತೆಯನ್ನು ಅಗಲಿಸುವ ಕೆಲಸದಿಂದ, ಜನರಿಗೆ ಅನುಕೂಲವಾಗಲಿದೆ.
ಬೆಂಗಳೂರಿನ ಹಳೆಯ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣುವಂತೆ, ಈ ರಸ್ತೆಯಲ್ಲೂ ಹಲವಾರು ದೊಡ್ಡ ಮರಗಳಿವೆ.
ಈ ರಸ್ತೆಯಲ್ಲಿ, ದೊಡ್ಡ ಮರಗಳ ಪಕ್ಕ ಸಾಕಷ್ಟು ಜಾಗವಿರುವುದರಿಂದ, ದೊಡ್ಡ ಮರಗಳನ್ನು ಕಡಿಯದೇ ಹಾಗೇ ಉಳಿಸಿ, ಅದನ್ನು ಸಣ್ಣ ವಾಹನಗಳಿಗೆ,ದ್ವಿಚಕ್ರದವರಿಗೆ ಮಾತ್ರ ಉಪಯೋಗಿಸುವಂತೆ ಮಾಡಬಹುದು. ಈ ಜಾಗದಲ್ಲಿ ಒಂದು ಕಾರು ಸುಲಭವಾಗಿ ಹೋಗುವಷ್ಟು ಜಾಗವಿದೆ. ದೊಡ್ಡದಾದ ವಾಹನಗಳ ಬಳಕೆಗೆ, ಈಗ ಇರುವ ರಸ್ತೆಯನ್ನು ಹಾಗೆ ಬಳಸಬಹುದು ಎಂಬುದು ನನ್ನ ಅನಿಸಿಕೆ.
ಸಮೂಹ ಮಾಧ್ಯಮದವರು, ಎಂದಿನಂತೆ ಈ ಕೆಲಸಕ್ಕೂ, ಸಕಾರಾತ್ಮಕವಾದ ಸಲಹೆಗಳನ್ನು ಈವರೆಗೆ ನೀಡಿರುವುದಿಲ್ಲ.
ಟಿ.ವಿ.ಯಲ್ಲಾಗಲೀ, ಪತ್ರಿಕೆಗಳಲ್ಲಾಗಲಿ, ಇದರ ಬಗ್ಗೆ ಸುದ್ದಿ ಪ್ರಕಟಗೊಂಡದ್ದು ನನಗೆ ತಿಳಿದು ಬಂದಿಲ್ಲ.
ಇತ್ತೀಚಿಗೆ ಡೆಕ್ಕನ್ ಹೆರಾಳ್ಡ್ ನಲ್ಲಿ, ಬೆಂಗಳೂರ ವಾತಾವರಣ ಎಷ್ಟು ಬದಲಾವಣೆ ಆಗಿದೆ, ಬೆಂಗಳೂರಲ್ಲಿ ಮರಗಳನ್ನು ಎಷ್ಟು ಹೆಚ್ಚು ಕಡಿದಿದ್ದಾರೆ ಎಂಬ ಒಂದು ಸಣ್ಣ ಲೇಖನ ಬಂದಿತ್ತು.
ಉದ್ಯಾನ ನಗರಿ ಹೋಗಿ, ಧೂಳಿನ ನಗರಿಯಾಗಿದೆ ಎಂಬುದು ಆ ಬರಹದ ಸಾರಾಂಶ.
ಈ ರೀತಿಯ ಬರಹಗಳ ಬದಲಾಗಿ, ಹೇಗೆ ನಮ್ಮಲ್ಲಿರುವ ಹಸಿರನ್ನು ಉಳಿಸಬಹುದು, ಹಾಗೂ ಇಂತಹ ರಸ್ತೆ ಅಗಲಿಸುವ, ಮೇಲ್ಸೇತುವೆಗಳ, ಅಂಡರ್ ಪಾಸ್ ಗಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ, ಸರ್ಕಾರ ಯಾವ ಯಾವ ರೀತಿಯಲ್ಲಿ ಉತ್ತಮ ಕೆಲಸವನ್ನು ಮಾಡಬಹುದು ಎಂಬುದಾಗಿ ಬರೆದರೆ, ನಮ್ಮ ಊರನ್ನು-ನಾಡನ್ನು ಇನ್ನಷ್ಟು ಉತ್ತಮಗೊಳಿಸಬಹುದು.
ನಾನು ಇಲ್ಲಿ ಕೊಡುತ್ತಿರುವುದು ಡೆಕ್ಕನ್ ಹೆರಾಳ್ಡ್ ಬರಹ ಉದಾಹರಣೆಯಷ್ಟೆ.
ಹೆಚ್ಚು ಕಡಿಮೆ ಎಲ್ಲ ಮಾಧ್ಯಮದವರೂ ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕುವ ಕೆಲಸವನ್ನಷ್ಟೇ ಮಾಡುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ.
ಮರಗಳು ಕಡಿದ ಮೇಲೆ, ನಾಡು ಬರಡಾದ ಮೇಲೆ, ಎಷ್ಟು ಬೊಬ್ಬೆ ಹೊಡೆದರೆ ಏನು ಪ್ರಯೋಜನ?
ಈ ಮೇಖ್ರಿ ವೃತ್ತದ ಬಳಿಯ ರಸ್ತೆಯನ್ನು ಅಗಲಿಸುವಾಗಾದರೂ, ನಮ್ಮ ಪಾಲಿಕೆ, ಮಾಧ್ಯಮ, ಜನ ಪರಿಸರದ ಬಗ್ಗೆ ಗಮನ ಕೊಡುವರೇನೋ ಎಂಬ ದೂರದ ಆಸೆ ನನಗೆ.
ಮರಗಳು ಧರೆಗೆ ಉರುಳುವುದೋ, ಹಸಿರು ಕಂಗಳಿಸುವುದೋ, ಇದನ್ನು ಸಮಯವೇ ಹೇಳಬೇಕು...
--ಶ್ರೀ
Labels:
ಪರಿಸರ,
ಪ್ರಚಲಿತ,
ಬೆಂಗಳೂರು,
ಮೇಖ್ರಿ,
ಸುತ್ತ-ಮುತ್ತ
Tuesday, September 30, 2008
ನಿಂದಕರೆಂದಿಗೂ ಸಂತರೇ ಅಲ್ಲ
ನಿಂದಕರೆಂದಿಗೂ
ಸಂತರೇ ಅಲ್ಲ
ನಿಂದಕರಿಂದ
ಸಂತಸವಿಲ್ಲ
ನಿಂದಕರಾದ
"ಸಂತ"ರು ಇರಲು,
ಸಂತೆಯಲಿದ್ದವಗೆ*
ಚಂದವು† ಇಲ್ಲ...
--ಶ್ರೀ
*ಸಂತೆಯಲಿದ್ದವ = ಜನ ಸಾಮಾನ್ಯ
†ಚಂದ = ಏಳಿಗೆ
ಸಂತರೇ ಅಲ್ಲ
ನಿಂದಕರಿಂದ
ಸಂತಸವಿಲ್ಲ
ನಿಂದಕರಾದ
"ಸಂತ"ರು ಇರಲು,
ಸಂತೆಯಲಿದ್ದವಗೆ*
ಚಂದವು† ಇಲ್ಲ...
--ಶ್ರೀ
*ಸಂತೆಯಲಿದ್ದವ = ಜನ ಸಾಮಾನ್ಯ
†ಚಂದ = ಏಳಿಗೆ
ಮತಾಂತರವನ್ನು ಏಕೆ ತಡೆಯಬೇಕು?
ಪತ್ರಕರ್ತ: ಮತಾಂತರವನ್ನು ಏಕೆ ತಡೆಯಬೇಕು?
ರಾಜಕಾರಣಿ: ಮತಾಂತರ ತಡೆಯದಿದ್ದರೆ ನಮಗೂ ಮತಕ್ಕೂ ಇರುವ ಅಂತರ ತುಂಬಾ ಹೆಚ್ಚತ್ತೆ ಅದಕ್ಕೆ...
:)
ರಾಜಕಾರಣಿ: ಮತಾಂತರ ತಡೆಯದಿದ್ದರೆ ನಮಗೂ ಮತಕ್ಕೂ ಇರುವ ಅಂತರ ತುಂಬಾ ಹೆಚ್ಚತ್ತೆ ಅದಕ್ಕೆ...
:)
Subscribe to:
Posts (Atom)



