ಝಾಡಿಸಿ ಒದ್ದರೂ ಹೋಗದಲ್ಲ,
ಮತಾಂತರದ ಭೂತ!
'ನಿನ್ನ ಬಳಿ ಬಂದರೇನು ಮತಾಂತರಕೆ?'
ಉತ್ತರವು ಗೊತ್ತಿದೆ ಮನಕೆ...
'ಬಂದರೇನು ಮಾಡುವೆ?'
ಇದೂ ಗೊತ್ತಿದೆ...
ಆದರೂ ಬಿಡದಿದು...
ಬೆನ್ನ ಹತ್ತಿದ ಬೇತಾಳನೆಂದರೆ ಇದೇ ಏನೋ...
'ಯಾರೋ, ಎಲ್ಲೋ, ನಂಬಿಕೆಯ ನಿಯತ್ತನ್ನು ಬದಲಿಸಿದರೆ,
ನಿನಗೇನು ಕುತ್ತು?'
ಗೊತ್ತಿಲ್ಲ...
ಹಲವು ಬಾರಿ ನೆಮ್ಮದಿಯ ಕಲಕಿದ್ದಂತೂ ಹೌದು...ಯಾಕೆ?
ತಿಳಿಯದು...
'ನಿನ್ನ ಮತ ಮಾಡದ ಏಳಿಗೆ, ಇನ್ನೊಂದು ಮತ ಮಾಡಿತೇ?'
ಉತ್ತರ ಗೊತ್ತು...
'ಏಳಿಗೆ ಮಾಡಿದರೆ, ನಿನಗೇನು ಹೊಟ್ಟೆ ಉರಿ?'...
ಅದೇ ಹಾಳು ಮೌನ...
'ನಿನ್ನ ಧರ್ಮವೇಕೆ ಇಷ್ಟು ದಿನ ಮಲಗಿತ್ತು ಕುಂಭಕರ್ಣನಂತೆ?'
...
'ಕುಂಭಕರ್ಣ ಎದ್ದ...ಕೊನೆಗೇನಾಯಿತೆಂಬುದು ತಿಳಿದಿದೆ...'
!!!??!!!
'ತಲೆ ಕೆಡಿಸಿಕೊಂಡ ನೀನು, ಮಾಡಿದ್ದಾದರೂ ಏನು?'
ಉತ್ತರವಿಲ್ಲ...
'ಮತಾಂತರವು ದೇಶದ ಅಭದ್ರತೆಗೆ ದಾರಿ...'
ಪುರಾವೆ ಏನು?
ಇದೆಯೇನು ಉತ್ತರ?
ಗೊಡ್ಡು ವಾದವಷ್ಟೆ...
'ಮತಾಂತರವು ಹೊಸದೇ?'
ಗೊತ್ತಿದ್ದೂ ಇದರೆಡೆಗೆ ಯೋಚಿಸದ ಜಾಣ...
ಆದರೂ ಬಿಡದು ತಲೆಯಲ್ಲಿ ಹೊಕ್ಕಿರುವ ಈ ಭೂತ...
ಮತಾಂತರದ ಭೂತ...
ಯಾಕೆ? ಯಾಕೆ? ಯಾಕೆ????
...ಉತ್ತರವಿಲ್ಲ...
--ಶ್ರೀ
(೩ ನವಂಬರ್ ೨೦೦೮)
ವಿಧ ವಿಧವಾದ ಕಡ್ಲೆ ಕಾಯಿ ವಿತರಿಸುವ ಏಕೈಕ ಬ್ಲಾಗ್ ತಾಣಕ್ಕೆ ಸ್ವಾಗತ... ಇಲ್ಲಿವರೆಗೂ ಬಂದಿದೀರ, ಸ್ವಲ್ಪ ಕಡ್ಲೆ ಕಾಯಿ ತಿಂದು ಹೇಗಿದೆ ಅಂತ ಹೇಳಿ ಹೋಗಿ...
Monday, November 3, 2008
Saturday, November 1, 2008
ಹೀಗೊಂದು ರಾಜ್ಯೋತ್ಸವ!
ನನ್ನನ್ನು
’ಮಾತೃ ವಾಕ್ಯ ಪರಿಪಾಲಕ’
ಎಂದಾಗ ಉಬ್ಬಿ ಹೋಗಿದ್ದೆ ನಾನು...
ಬಂದಳೆನ್ನ ಮಡದಿ,
ಕನ್ನಡಿಸಿದಳಿದನ್ನು...
’ಅಮ್ಮನ ಮಗನೇ ನೀವು!"
ಎಂದು ಕೊಂಕಾಡಿದಾಗ,
ಫಟ್ಟನೆ ಒಡೆದಿತ್ತೆನ್ನ ಮನದ ಬಲೂನು!
:)
--ಶ್ರೀ
’ಮಾತೃ ವಾಕ್ಯ ಪರಿಪಾಲಕ’
ಎಂದಾಗ ಉಬ್ಬಿ ಹೋಗಿದ್ದೆ ನಾನು...
ಬಂದಳೆನ್ನ ಮಡದಿ,
ಕನ್ನಡಿಸಿದಳಿದನ್ನು...
’ಅಮ್ಮನ ಮಗನೇ ನೀವು!"
ಎಂದು ಕೊಂಕಾಡಿದಾಗ,
ಫಟ್ಟನೆ ಒಡೆದಿತ್ತೆನ್ನ ಮನದ ಬಲೂನು!
:)
--ಶ್ರೀ
ರಾಜ್ಯೋತ್ಸವ!
ನನ್ನನ್ನು
’ಮಾತೃ ವಾಕ್ಯ ಪರಿಪಾಲಕ’
ಎಂದಾಗ ಉಬ್ಬಿ ಹೋಗಿದ್ದೆ ನಾನು...
ಬಂದಳೆನ್ನ ಮಡದಿ,
ಕನ್ನಡಿಸಿದಳಿದನ್ನು...
’ಅಮ್ಮನ ಮಗನೇ ನೀವು!"
ಎಂದು ಕೊಂಕಾಡಿದಾಗ,
ಫಟ್ಟನೆ ಒಡೆದಿತ್ತೆನ್ನ ಮನದ ಬಲೂನು!
:)
--ಶ್ರೀ
(೧ - ನವಂಬರ್ - ೨೦೦೮)
’ಮಾತೃ ವಾಕ್ಯ ಪರಿಪಾಲಕ’
ಎಂದಾಗ ಉಬ್ಬಿ ಹೋಗಿದ್ದೆ ನಾನು...
ಬಂದಳೆನ್ನ ಮಡದಿ,
ಕನ್ನಡಿಸಿದಳಿದನ್ನು...
’ಅಮ್ಮನ ಮಗನೇ ನೀವು!"
ಎಂದು ಕೊಂಕಾಡಿದಾಗ,
ಫಟ್ಟನೆ ಒಡೆದಿತ್ತೆನ್ನ ಮನದ ಬಲೂನು!
:)
--ಶ್ರೀ
(೧ - ನವಂಬರ್ - ೨೦೦೮)
Labels:
ಕನ್ನಡ,
ಚುಟುಕ,
ರಾಜ್ಯ್ಳೋತ್ಸವ,
ಹಾಸ್ಯ
Thursday, October 30, 2008
ರಚ್ಚೆ ಏತಕೊ ನಿನದು ???

ರಚ್ಚೆ ಏತಕೊ ನಿನದು
ಬೆಚ್ಚನೆ ಹಾಲ ಕುಡಿದು
ಮಲಗೋ ನೀನು ನನ ಕಂದ
ಮಲಗೋ ನೀನು ನನ ಕಂದ...
ಅಳುವ ನಿಲಿಸಿ ನೀನು
ಬಳಸಿ ನಡುವ, ಜೇನು
ನಿದ್ದೆಗೆ ಜಾರೋ ನನ ಕಂದ
ನಿದ್ದೆಗೆ ಜಾರೋ ನನ ಕಂದ...
ಮೆಲ್ಲನೆ ಬೆನ್ನನು ತಟ್ಟಿ
ಗಲ್ಲಕೆ ಮುದ್ದನು ಇಟ್ಟು
ಜೋಗುಳ ಹಾಡುವೆ ನನ ಕಂದ
ಜೋಗುಳ ಹಾಡುವೆ ನನ ಕಂದ...
ಓಡೋಡಿ ಬಳಿ ಬಂದು
ಉಡಿಯ ನುಸುಳಿ ಇಂದು
ಹಾಯಾಗಿ ಮಲಗೋ ನನ ಕಂದ
ಹಾಯಾಗಿ ಮಲಗೋ ನನ ಕಂದ...
ರಂಪಾಟ ಸಾಕಿನ್ನು
ಜೊಂಪಾಟವ ಆಡಿನ್ನು
ಸೊಂಪಾಗಿ ಮಲಗೋ ನನ ಕಂದ
ಸೊಂಪಾಗಿ ಮಲಗೋ ನನ ಕಂದ...
ಹಾಯಾಗಿ ಮಲಗೋ ನನ ಕಂದ...
ನಿದ್ದೆಗೆ ಜಾರೋ ನನ ಕಂದ...
ಬೆಚ್ಚನೆ ಮಲಗೋ ನನ ಕಂದ...
ಹಚ್ಚಗೆ ಮಲಗೋ ನನ ಕಂದ...
~~~*~~~
ಇದನ್ನು ಜನಪದ ಶೈಲಿಯಲ್ಲಿ ಹಾಡುವ ಪ್ರಯತ್ನ ಮಾಡಿದ್ದೀನಿ.
ಕೇಳಲು ಕೆಳಗಿನ ಕೊಂಡಿ ಚಿಟಕಿಸಿ...
Boomp3.com
--ಶ್ರೀ
(೨೬-೨೭, ಅಕ್ಟೋಬರ್-೨೦೦೮)
ಕಿಲಾಡಿ ಜರಡಿ...!
ಬರಡೇ ಬುರುಡೆ,
ಬುರುಡೆಯ ಹರಡುವರ
ಕುರುಡಾಗಿ ನಂಬಲು?
ಬರಡಿಲ್ಲ-ಕುರುಡಿಲ್ಲ,
ಬೇಕಿದ್ದನ್ನು ಉಳಿಸಿ,
ಮಿಕ್ಕವನ್ನು ಅಳಿಸುವ
ಕಿಲಾಡಿ ಜರಡಿ!
--ಶ್ರೀ
(೩೦-ಅಕ್ಟೋಬರ್-೨೦೦೮)
ಬುರುಡೆಯ ಹರಡುವರ
ಕುರುಡಾಗಿ ನಂಬಲು?
ಬರಡಿಲ್ಲ-ಕುರುಡಿಲ್ಲ,
ಬೇಕಿದ್ದನ್ನು ಉಳಿಸಿ,
ಮಿಕ್ಕವನ್ನು ಅಳಿಸುವ
ಕಿಲಾಡಿ ಜರಡಿ!
--ಶ್ರೀ
(೩೦-ಅಕ್ಟೋಬರ್-೨೦೦೮)
Tuesday, October 28, 2008
ದಿಟಕೆ ದಿಟವೇ ಶತ್ರು!
ಕಣ್ಣ ಮುಂದೆ
ರಾಚಿದೆ ದಿಟವು...
ಪುರಾವೆಯಿಲ್ಲ
ಪ್ರಮಾಣಿಸಲು...
ಹಳಸಿದ್ದನ್ನು
ಎತ್ತಿ ಹಿಡಿದರು,
ರಾಚುವ ದಿಟವ
ಹುಸಿಯೆಂದು ತೋರಲು...
-- ಶ್ರೀ
ರಾಚಿದೆ ದಿಟವು...
ಪುರಾವೆಯಿಲ್ಲ
ಪ್ರಮಾಣಿಸಲು...
ಹಳಸಿದ್ದನ್ನು
ಎತ್ತಿ ಹಿಡಿದರು,
ರಾಚುವ ದಿಟವ
ಹುಸಿಯೆಂದು ತೋರಲು...
-- ಶ್ರೀ
Labels:
christianaggression.org,
ನೀಲು,
ಭೈರಪ್ಪ,
ಮತಾಂತರ
ಪುಟಾಣಿಗೆ ಭೂಮಿ ಕಷ್ಟವಂತೆ...!
(ಈ ಘಟನೆ ನಡೆದು ಸುಮಾರು ೬ ತಿಂಗಳ ಮೇಲಾಯ್ತು...)
ಆಗ ನಮ್ ಪುಟಾಣಿ ಮಾತಾಡೋಕೆ ಕಲಿತು ಒಂದು ೩-೪ ತಿಂಗಳಿರಬಹುದು...
ಸಾಮಾನ್ಯವಾಗಿ ಏನೇನೋ ಹೇಳ್ತಾ ಇರ್ತಾನೆ ಬಾಯಿಗೆ ಬಂದದ್ದು...
ಹೀಗೆ ಒಂದು ದಿನ, ಈ ಪುಟ್ಟ, " ಭೂಮಿ ಕಷ್ಟ ಆಗಿದೆ..." ಅಂದಂಗಾಯ್ತು...
ನಾನು ಇದನ್ನ ಕೇಳಿ ಶಾಕ್ ಆದೆ...ಸರಿಯಾಗಿ ಕೇಳಿಸಿತಾ ಅನ್ನೋ ಅನುಮಾನ..."ಏನೋ ಅದು?" ಅಂದೆ...
ಮತ್ತೆ ಮೆಲ್ಲಗೆ "...ಭೂಮಿ ಕಷ್ಟ ಆಗಿದೆ..." ಅಂದ..
’ಏನಪ್ಪ ಈ ಪಾಪು ಈ ವಯಸ್ಸಿಗೇ ಹಿಂಗೆಲ್ಲಾ ಮಾತಾಡ್ತಾನೆ’ ಅಂತ ಅಂದುಕೊಂಡೆ...
ತಕ್ಷಣ ಅಕ್ಕನ್ನ ಕರೆದೆ..."ಲೇ...ಏನೇ ನಿನ್ ಮಗ ಹೀಗೆಲ್ಲಾ ಮಾತಾಡ್ತಾನೇ???" ಅಂದೆ...
ಅವಳು "ಏನಂದಾ?" ಅಂದ್ಲು...ನಾನು "ಏನೇನೋ ಹೇಳ್ತಾ ಇದಾನೆ, ನೀನೇ ಕೇಳು" ಅಂದೆ...
ಅವನು ಅಕ್ಕನ ಮುಂದೆ ಕೂಡ ಮೆಲ್ಲಗೆ "ಭೂಮಿ ಕಷ್ಟ ಆಗಿದೆಯೋ..." ಅಂದ...
ಅದಕ್ಕೆ ಅಕ್ಕ, "ಅಯ್ಯೋ, ಇದು ’ಗಾಳಿಪಟ’ ಚಿತ್ರದ ಹಾಡು...ಚಿತ್ರದ ಹಾಡು ಹೀಗಿದೆ...’ಆಕಾಶ ಇಷ್ಟೇ ಯಾಕಿದೆಯೋ...ಈ ಭೂಮಿ ಕಷ್ಟ ಆಗಿದೆಯೋ...’...ಅದಕ್ಕೆ ನೀನು ಎಫ್.ಎಂ. ರೇಡಿಯೋ ಕೇಳಬೇಕು ಅಂತ ಯಾವಾಗ್ಲೂ ಹೇಳೋದು...ನೋಡು, ಈ ಪುಟಾಣಿನೇ ನಿನ್ನ ಮೀರಿಸ್ತಿದಾನೆ!" ಅಂದಾಗ ನಾನು ಸುಸ್ತು...ನನಗೆ ಎಫ್.ಎಂ. ರೇಡಿಯೋ ಕೇಳಬೇಕು ಅನಿಸಿದ್ದು ಆಗಲೇ!
--ಶ್ರೀ
ಆಗ ನಮ್ ಪುಟಾಣಿ ಮಾತಾಡೋಕೆ ಕಲಿತು ಒಂದು ೩-೪ ತಿಂಗಳಿರಬಹುದು...
ಸಾಮಾನ್ಯವಾಗಿ ಏನೇನೋ ಹೇಳ್ತಾ ಇರ್ತಾನೆ ಬಾಯಿಗೆ ಬಂದದ್ದು...
ಹೀಗೆ ಒಂದು ದಿನ, ಈ ಪುಟ್ಟ, " ಭೂಮಿ ಕಷ್ಟ ಆಗಿದೆ..." ಅಂದಂಗಾಯ್ತು...
ನಾನು ಇದನ್ನ ಕೇಳಿ ಶಾಕ್ ಆದೆ...ಸರಿಯಾಗಿ ಕೇಳಿಸಿತಾ ಅನ್ನೋ ಅನುಮಾನ..."ಏನೋ ಅದು?" ಅಂದೆ...
ಮತ್ತೆ ಮೆಲ್ಲಗೆ "...ಭೂಮಿ ಕಷ್ಟ ಆಗಿದೆ..." ಅಂದ..
’ಏನಪ್ಪ ಈ ಪಾಪು ಈ ವಯಸ್ಸಿಗೇ ಹಿಂಗೆಲ್ಲಾ ಮಾತಾಡ್ತಾನೆ’ ಅಂತ ಅಂದುಕೊಂಡೆ...
ತಕ್ಷಣ ಅಕ್ಕನ್ನ ಕರೆದೆ..."ಲೇ...ಏನೇ ನಿನ್ ಮಗ ಹೀಗೆಲ್ಲಾ ಮಾತಾಡ್ತಾನೇ???" ಅಂದೆ...
ಅವಳು "ಏನಂದಾ?" ಅಂದ್ಲು...ನಾನು "ಏನೇನೋ ಹೇಳ್ತಾ ಇದಾನೆ, ನೀನೇ ಕೇಳು" ಅಂದೆ...
ಅವನು ಅಕ್ಕನ ಮುಂದೆ ಕೂಡ ಮೆಲ್ಲಗೆ "ಭೂಮಿ ಕಷ್ಟ ಆಗಿದೆಯೋ..." ಅಂದ...
ಅದಕ್ಕೆ ಅಕ್ಕ, "ಅಯ್ಯೋ, ಇದು ’ಗಾಳಿಪಟ’ ಚಿತ್ರದ ಹಾಡು...ಚಿತ್ರದ ಹಾಡು ಹೀಗಿದೆ...’ಆಕಾಶ ಇಷ್ಟೇ ಯಾಕಿದೆಯೋ...ಈ ಭೂಮಿ ಕಷ್ಟ ಆಗಿದೆಯೋ...’...ಅದಕ್ಕೆ ನೀನು ಎಫ್.ಎಂ. ರೇಡಿಯೋ ಕೇಳಬೇಕು ಅಂತ ಯಾವಾಗ್ಲೂ ಹೇಳೋದು...ನೋಡು, ಈ ಪುಟಾಣಿನೇ ನಿನ್ನ ಮೀರಿಸ್ತಿದಾನೆ!" ಅಂದಾಗ ನಾನು ಸುಸ್ತು...ನನಗೆ ಎಫ್.ಎಂ. ರೇಡಿಯೋ ಕೇಳಬೇಕು ಅನಿಸಿದ್ದು ಆಗಲೇ!
--ಶ್ರೀ
Labels:
ಅಂಗೈಯಲ್ಲಿ ಅರಮನೆ,
ಅನುಭವ ಕಥನ,
ಮಕ್ಕಳ ಮನಸ್ಸು
Subscribe to:
Posts (Atom)