ನನ್ನಿಂದಾಗಿ
ನೀನು ಸುರಿಸಿದ
ಕಣ್ಣೀರ ಹನಿ
ನನ್ನ
ಹಲವಾರು
ಯಶಸ್ವೀ ಬರಹಗಳಿಗೆ
ಬಂಡವಾಳ!
--ಶ್ರೀ
೨೪-ಜನವರಿ-೨೦೧೩
ವಿಧ ವಿಧವಾದ ಕಡ್ಲೆ ಕಾಯಿ ವಿತರಿಸುವ ಏಕೈಕ ಬ್ಲಾಗ್ ತಾಣಕ್ಕೆ ಸ್ವಾಗತ... ಇಲ್ಲಿವರೆಗೂ ಬಂದಿದೀರ, ಸ್ವಲ್ಪ ಕಡ್ಲೆ ಕಾಯಿ ತಿಂದು ಹೇಗಿದೆ ಅಂತ ಹೇಳಿ ಹೋಗಿ...
Friday, January 25, 2013
Monday, December 3, 2012
ಕ್ರಾಂತಿಕಾರಿ ವಿಲಿಯಂ ಯೇಟ್ಸ್ ಮತ್ತು ನನ್ನ ತರಲೆ
’ವಿಲಿಯಂ ಯೇಟ್ಸ್’ (1865-1939) ಬಗ್ಗೆ ನಿಮ್ಮಗಳಲ್ಲಿ ಬಹಳಷ್ಟು ಜನಕ್ಕೆ ಗೊತ್ತಿರಬಹುದು.
ಯೇಟ್ಸ್ ಒಬ್ಬ ಪ್ರಖ್ಯಾತ ಐರಿಶ್ ಕ್ರಾಂತಿಕಾರಿ ಸಾಹಿತಿ...ಇವನು ಮೊದ-ಮೊದಲು ಅದ್ಭುತ ನಾಟಕಗಳನ್ನು ಬರೆದು ಜಗತ್ತಿನ ಗಮನ ಸೆಳೆದವನು.
ಈ ನಾಟಕಗಳಿಂದಲೇ ಪ್ರಖ್ಯಾತನಾಗಿ ನೋಬಲ್ ಪ್ರಶಸ್ತಿಯನ್ನು ಕೂಡ ಪಡೆದವನು.
ನೋಬಲ್ ಪ್ರಶಸ್ತಿ ನಾಟಕಗಳಿಗೆ ಬಂತಾದರೂ, ಪ್ರಶಸ್ತಿಯ ನಂತರ ಇವನು ಅದೆಷ್ಟೋ ಕವನಗಳನ್ನು ರಚಿಸಿ ಮತ್ತಷ್ಟು ಪ್ರಖ್ಯಾತನಾದ.
ವಿಮರ್ಶಕರು ಹೇಳುವ ಹಾಗೆ ನಾಟಕದ ಕೃತಿಗಳಿಗಿಂತ ಇವನ ಕವನ ಮೇರು ಮಟ್ಟದ್ದು...
ಹತ್ತೊಂಬತ್ತನೆ ಶತಮಾನದ ಅಂತ್ಯದಲ್ಲಿ ಹಾಗೂ ಇಪ್ಪತ್ತನೇ ಶತಮಾನದ ಮೊದಲಿನ ಭಾಗದಲ್ಲಿ ನಡೆದ ಹಲವಾರು ಯುದ್ಧಗಳು ಮತ್ತದರ ವಿದ್ಯಮಾನಗಳು ಇವನ ರಚನೆಗಳಿಗೆ ಸ್ಫೂರ್ತಿಯಾಗಿತ್ತು...
ಇವನ ಕ್ರಾಂತಿಕಾರಿ ಬರಹಗಳಿಂದ ಪ್ರೇರಿತರಾದವರು ಅದೆಷ್ಟೋ...
ಇತ್ತೀಚಿಗೆ ಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಿದ್ದಾಗ, ಯೇಟ್ಸ್ ನ "ಪೊಲಿಟಿಕ್ಸ್" ಕವನದ ಅನುವಾದವೊಂದು ನನ್ನ ಕಣ್ಣಿಗೆ ಬಿತ್ತು.
"ಪೊಲಿಟಿಕ್ಸ್" ಕವನವನ್ನು ಓದುತ್ತಿದ ಹಾಗೆ, ನನಗೆ ಮತ್ತೇನೋ ಹೊಳೆದು, ಕೆಳಗಿನ ಸಾಲುಗಳನ್ನು ಬರೆದೆ...
ಯೇಟ್ಸ್ ನ ಮೂಲ ಕವನ "ಪೊಲಿಟಿಕ್ಸ್" ಕೆಳಗಿದೆ.
ನೀವು ಅವನ ಈ ಕವನವನ್ನು ಓದುವಾಗ, ಅಂದಿನ ಕಾಲದ ರಾಜಕೀಯ ವಾತವರಣವನ್ನು ಮನದಲ್ಲಿಟ್ಟುಕೊಳ್ಳಬೇಕು.
ಹಲವಾರು ದೇಶಗಳ ನಡುವೆ ಯುದ್ಧ ಸಾಧ್ಯತೆಗಳಿತ್ತು ಎಂಬುದನ್ನು ಗಮನದಲ್ಲಿಟ್ಟು ಕೊಳ್ಳಬೇಕು...
Politics
HOW can I, that girl standing there,
My attention fix
On Roman or on Russian
Or on Spanish politics?
Yet here's a travelled man that knows
What he talks about,
And there's a politician
That has read and thought,
And maybe what they say is true
Of war and war's alarms,
But O that I were young again
And held her in my arms!
- William Butler Yeats
ಮೇಲಿನ ಗಂಭೀರ ಕವನವನ್ನು ಓದುತ್ತಿದ ಹಾಗೆ, ನನ್ನ ತರಲೆ ಮನಸ್ಸಿಗೆ ಮತ್ತೇನೋ ಹೊಳೆದು, ಕೆಳಗಿನ ಸಾಲುಗಳನ್ನು ಬರೆದಿದ್ದೇನೆ;
ನಿಮ್ಮ ಅನಿಸಿಕೆ ಹೇಳಿ:
***
ಅಲ್ಲಿರುವ ಸುಂದರ ಹುಡುಗಿಯ
ಮೇಲಿಟ್ಟ ಕಂಗಳನ್ನು
ಸರಿಸಲಾಗದೆ
ನಿಂತಿಹನು - ರಾಜತಂತ್ರಜ್ಞ
ಇವನು ನೈಪುಣ್ಯತೆಯಿಂದ
ಕ್ಷಣದಲೇ ಗುರುತಿಸುವನು
ದೇಶದಲ್ಲಾಗುವ
ಯುದ್ಧ-ಅಪಾಯ ಮತ್ತಿತರ ವಿಘ್ನ
ಅವಳನ್ನು ನೋಡುತಲೇ
ಆತನಿಗೆ ಅನಿಸುತಿದೆ
ಅವಳ ರಮಿಸಬೇಕೆಂದು
ಮನದಲ್ಲೆಲ್ಲ ಅವಳದೇ ಯೋಚನೆ...
ಇವ, ಪಕ್ಕಾ
ಬ್ರಹ್ಮಚಾರಿಯೇ ಇರಬೇಕು
ಇಲ್ಲವಾದಲ್ಲಿ ಇವನಿಗೇಕೆ
ತಿಳಿಯದು ಮಹಾಯುದ್ಧದ ಸೂಚನೆ!
***
ಮಹಾಕವಿಯ ಕವನವನ್ನು ತಿರುಚಿ ತರಲೆ ಮಾಡಿದ್ದಕ್ಕೆ ಕ್ಷಮೆ ಇರಲಿ :-)
-ಶ್ರೀ
(೩-ಡಿಸೆಂಬರ್-೨೦೧೨)
ಕೊ:
ಯೇಟ್ಸ್ ನ "ಪೊಲಿಟಿಕ್ಸ್" ಕವನದ ಕೇಶವ ಕುಲಕರ್ಣಿಯವರ ಅನುವಾದ
ಕೊ.ಕೊ:
ಡಾ. ಯು.ಆರ್. ಅನಂತ ಮೂರ್ತಿಯವರು - "ಶತಮಾನದ ಕವಿ ಯೇಟ್ಸ್" ಎಂಬ ಪುಸ್ತಕವನ್ನೇ ಹೊರತಂದು, ಇವನ ಅದೆಷ್ಟೋ ಕವನಗಳ ಅನುವಾದ ಮಾಡಿದ್ದಾರೆ.
ಮೇಲಿನ ಕವನವನ್ನು ಯು,ಆರ್ ಅನಂತ ಮೂರ್ತಿಯವರು ಹೀಗೆ ಅನುವಾದಿಸಿದ್ದಾರೆ.
ಯೇಟ್ಸ್ ಒಬ್ಬ ಪ್ರಖ್ಯಾತ ಐರಿಶ್ ಕ್ರಾಂತಿಕಾರಿ ಸಾಹಿತಿ...ಇವನು ಮೊದ-ಮೊದಲು ಅದ್ಭುತ ನಾಟಕಗಳನ್ನು ಬರೆದು ಜಗತ್ತಿನ ಗಮನ ಸೆಳೆದವನು.
ಈ ನಾಟಕಗಳಿಂದಲೇ ಪ್ರಖ್ಯಾತನಾಗಿ ನೋಬಲ್ ಪ್ರಶಸ್ತಿಯನ್ನು ಕೂಡ ಪಡೆದವನು.
ನೋಬಲ್ ಪ್ರಶಸ್ತಿ ನಾಟಕಗಳಿಗೆ ಬಂತಾದರೂ, ಪ್ರಶಸ್ತಿಯ ನಂತರ ಇವನು ಅದೆಷ್ಟೋ ಕವನಗಳನ್ನು ರಚಿಸಿ ಮತ್ತಷ್ಟು ಪ್ರಖ್ಯಾತನಾದ.
ವಿಮರ್ಶಕರು ಹೇಳುವ ಹಾಗೆ ನಾಟಕದ ಕೃತಿಗಳಿಗಿಂತ ಇವನ ಕವನ ಮೇರು ಮಟ್ಟದ್ದು...
ಹತ್ತೊಂಬತ್ತನೆ ಶತಮಾನದ ಅಂತ್ಯದಲ್ಲಿ ಹಾಗೂ ಇಪ್ಪತ್ತನೇ ಶತಮಾನದ ಮೊದಲಿನ ಭಾಗದಲ್ಲಿ ನಡೆದ ಹಲವಾರು ಯುದ್ಧಗಳು ಮತ್ತದರ ವಿದ್ಯಮಾನಗಳು ಇವನ ರಚನೆಗಳಿಗೆ ಸ್ಫೂರ್ತಿಯಾಗಿತ್ತು...
ಇವನ ಕ್ರಾಂತಿಕಾರಿ ಬರಹಗಳಿಂದ ಪ್ರೇರಿತರಾದವರು ಅದೆಷ್ಟೋ...
ಇತ್ತೀಚಿಗೆ ಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಿದ್ದಾಗ, ಯೇಟ್ಸ್ ನ "ಪೊಲಿಟಿಕ್ಸ್" ಕವನದ ಅನುವಾದವೊಂದು ನನ್ನ ಕಣ್ಣಿಗೆ ಬಿತ್ತು.
"ಪೊಲಿಟಿಕ್ಸ್" ಕವನವನ್ನು ಓದುತ್ತಿದ ಹಾಗೆ, ನನಗೆ ಮತ್ತೇನೋ ಹೊಳೆದು, ಕೆಳಗಿನ ಸಾಲುಗಳನ್ನು ಬರೆದೆ...
ಯೇಟ್ಸ್ ನ ಮೂಲ ಕವನ "ಪೊಲಿಟಿಕ್ಸ್" ಕೆಳಗಿದೆ.
ನೀವು ಅವನ ಈ ಕವನವನ್ನು ಓದುವಾಗ, ಅಂದಿನ ಕಾಲದ ರಾಜಕೀಯ ವಾತವರಣವನ್ನು ಮನದಲ್ಲಿಟ್ಟುಕೊಳ್ಳಬೇಕು.
ಹಲವಾರು ದೇಶಗಳ ನಡುವೆ ಯುದ್ಧ ಸಾಧ್ಯತೆಗಳಿತ್ತು ಎಂಬುದನ್ನು ಗಮನದಲ್ಲಿಟ್ಟು ಕೊಳ್ಳಬೇಕು...
Politics
HOW can I, that girl standing there,
My attention fix
On Roman or on Russian
Or on Spanish politics?
Yet here's a travelled man that knows
What he talks about,
And there's a politician
That has read and thought,
And maybe what they say is true
Of war and war's alarms,
But O that I were young again
And held her in my arms!
- William Butler Yeats
ಮೇಲಿನ ಗಂಭೀರ ಕವನವನ್ನು ಓದುತ್ತಿದ ಹಾಗೆ, ನನ್ನ ತರಲೆ ಮನಸ್ಸಿಗೆ ಮತ್ತೇನೋ ಹೊಳೆದು, ಕೆಳಗಿನ ಸಾಲುಗಳನ್ನು ಬರೆದಿದ್ದೇನೆ;
ನಿಮ್ಮ ಅನಿಸಿಕೆ ಹೇಳಿ:
***
ಅಲ್ಲಿರುವ ಸುಂದರ ಹುಡುಗಿಯ
ಮೇಲಿಟ್ಟ ಕಂಗಳನ್ನು
ಸರಿಸಲಾಗದೆ
ನಿಂತಿಹನು - ರಾಜತಂತ್ರಜ್ಞ
ಇವನು ನೈಪುಣ್ಯತೆಯಿಂದ
ಕ್ಷಣದಲೇ ಗುರುತಿಸುವನು
ದೇಶದಲ್ಲಾಗುವ
ಯುದ್ಧ-ಅಪಾಯ ಮತ್ತಿತರ ವಿಘ್ನ
ಅವಳನ್ನು ನೋಡುತಲೇ
ಆತನಿಗೆ ಅನಿಸುತಿದೆ
ಅವಳ ರಮಿಸಬೇಕೆಂದು
ಮನದಲ್ಲೆಲ್ಲ ಅವಳದೇ ಯೋಚನೆ...
ಇವ, ಪಕ್ಕಾ
ಬ್ರಹ್ಮಚಾರಿಯೇ ಇರಬೇಕು
ಇಲ್ಲವಾದಲ್ಲಿ ಇವನಿಗೇಕೆ
ತಿಳಿಯದು ಮಹಾಯುದ್ಧದ ಸೂಚನೆ!
***
ಮಹಾಕವಿಯ ಕವನವನ್ನು ತಿರುಚಿ ತರಲೆ ಮಾಡಿದ್ದಕ್ಕೆ ಕ್ಷಮೆ ಇರಲಿ :-)
-ಶ್ರೀ
(೩-ಡಿಸೆಂಬರ್-೨೦೧೨)
ಕೊ:
ಯೇಟ್ಸ್ ನ "ಪೊಲಿಟಿಕ್ಸ್" ಕವನದ ಕೇಶವ ಕುಲಕರ್ಣಿಯವರ ಅನುವಾದ
ಕೊ.ಕೊ:
ಡಾ. ಯು.ಆರ್. ಅನಂತ ಮೂರ್ತಿಯವರು - "ಶತಮಾನದ ಕವಿ ಯೇಟ್ಸ್" ಎಂಬ ಪುಸ್ತಕವನ್ನೇ ಹೊರತಂದು, ಇವನ ಅದೆಷ್ಟೋ ಕವನಗಳ ಅನುವಾದ ಮಾಡಿದ್ದಾರೆ.
ಮೇಲಿನ ಕವನವನ್ನು ಯು,ಆರ್ ಅನಂತ ಮೂರ್ತಿಯವರು ಹೀಗೆ ಅನುವಾದಿಸಿದ್ದಾರೆ.
Labels:
ಇಂಗ್ಲಿಷ್ ಸಾಹಿತ್ಯ,
ಕವನ,
ನೋಬಲ್ ಪ್ರಶಸ್ತಿ,
ಯೇಟ್ಸ್
Sunday, November 11, 2012
ಪ್ರತಿಬಿಂಬ
ಪ್ರಿಯೆ,
ನನ್ನ ಈ ಹೃದಯ
ಇಷ್ಟೊಂದು
ಸುಂದರವೆಂದು
ನಿನ್ನ ಕಂಗಳಳೊಳಗೆ
ಇಣುಕಿ ನೋಡುವವರೆಗೂ
ತಿಳಿದೇ ಇರಲಿಲ್ಲ...
--ಶ್ರೀ
ನನ್ನ ಈ ಹೃದಯ
ಇಷ್ಟೊಂದು
ಸುಂದರವೆಂದು
ನಿನ್ನ ಕಂಗಳಳೊಳಗೆ
ಇಣುಕಿ ನೋಡುವವರೆಗೂ
ತಿಳಿದೇ ಇರಲಿಲ್ಲ...
--ಶ್ರೀ
Friday, November 9, 2012
ನಿನ್ನಲ್ಲಿರುವುದು ರಕುತವಲ್ಲ...
ನಲ್ಲೆ,
ನಿನ್ನ ಧಮನಿಗಳಲ್ಲಿ
ಹರಿಯುವುದು
ನೆತ್ತರಲ್ಲ...
ಅದು ನೆತ್ತರಲ್ಲ...
ಮಧುವಿರಬೇಕು...
ಬರಿಯ ನೆತ್ತರಿಂದಲೇ
ನಿನ್ನಧರ ಇಂತಿಷ್ಟು
ಮಧುರವಾಗಿರಲು
ಸಾಧ್ಯವೇ?
--ಶ್ರೀ
ನಿನ್ನ ಧಮನಿಗಳಲ್ಲಿ
ಹರಿಯುವುದು
ನೆತ್ತರಲ್ಲ...
ಅದು ನೆತ್ತರಲ್ಲ...
ಮಧುವಿರಬೇಕು...
ಬರಿಯ ನೆತ್ತರಿಂದಲೇ
ನಿನ್ನಧರ ಇಂತಿಷ್ಟು
ಮಧುರವಾಗಿರಲು
ಸಾಧ್ಯವೇ?
--ಶ್ರೀ
Wednesday, November 7, 2012
ತಕರಾರು
ನಲ್ಲೆ,
ನನ್ನ ತರಕಾದ ಕೆನ್ನೆಯ
ಬಗ್ಗೆ ತಕರಾರು ಎತ್ತಬೇಡ
ಗಡ್ಡ ಬೆಳೆಯದಂತೆ
ತಪ್ಪದೇ ಮುಲಾಮು
ಹಚ್ಚದಿದ್ದದ್ದು
ನಿನ್ನ ತಪ್ಪಲ್ಲವೇ?
-ಶ್ರೀ
ನನ್ನ ತರಕಾದ ಕೆನ್ನೆಯ
ಬಗ್ಗೆ ತಕರಾರು ಎತ್ತಬೇಡ
ಗಡ್ಡ ಬೆಳೆಯದಂತೆ
ತಪ್ಪದೇ ಮುಲಾಮು
ಹಚ್ಚದಿದ್ದದ್ದು
ನಿನ್ನ ತಪ್ಪಲ್ಲವೇ?
-ಶ್ರೀ
Tuesday, November 6, 2012
Thursday, November 1, 2012
ಸ್ಯಾಂಡಿ - ಸಂಧ್ಯಾನ -ಸಂದೀಪನಾ? ಮತ್ತು ಲೈಲಾ-ಮಜನೂ ಸೇರದ ಕಥೆ!
ಕೆಲ ದಿನಗಳ ಹಿಂದೆ ಅಮ್ಮನಿಗೆ ಫೋನ್ ಮಾಡಿ - ’ಸ್ಯಾಂಡಿಯಿಂದ ನಮಗೇನು ಆತಂಕ ಇಲ್ಲಮ್ಮ...ನೀನೇನು ಯೋಚನೆ ಮಾಡಬೇಡ’ ಅಂದೆ...
’ಅಲ್ಲಿ ಸ್ಯಾಂಡಿ ಅಂತೆ, ಇಲ್ಲೇನೋ ’ನೀಲಂ’ ಬರ್ತಾ ಇದೆಯಂತೆ - ಸೈಕ್ಲೋನ್ ಎಲ್ಲ ಹೆಸರಿಟ್ಟುಕೊಂಡು ಬರ್ತಾ ಇದೆ!’ ಅಂದರು ಅಮ್ಮ...
ಅಮ್ಮನ ಮುಗ್ಧ ಮಾತಿಗೆ ನಕ್ಕು, ’ಹೆಸರು ಇಟ್ಕೊಂಡ್ ಬರಕ್ಕೇ ಆಗತ್ತಾ? ನಾವೇ ಹೆಸರಿಡೋದು...ಹಿಂದೆ ಎಲ್ಲ ’ಲೈಲಾ’ ಬಂದಿದ್ಳು ನೆನಪಿದೆಯಾ?’ ಅಂದೆ...
’ಹೌದಾ...ಲೈಲಾ ಬಂದ್ರೆ ಮಜನೂ ಬರಲಿಲ್ವಾ?’ ಎಂದು ಕೇಳಿದಾಗ, ಅಮ್ಮನ ಮಾತಿಗೆ ನಾನು ಗೊಳ್ಳೆಂದು ನಕ್ಕೆನಾದರೂ, ’ಮಜನೂ’ ಏಕೆ ಬರಲಿಲ್ಲ ಅಥವಾ ಏಕೆ ಮಜನೂ ಮುಂದೇನೂ ಬರೋದಿಲ್ಲ ಅಂತ ಗೊತ್ತಿರಲಿಲ್ಲ...
ಇತ್ತ ಕಡೆ ’ಸ್ಯಾಂಡಿ’ ಅಮೇರಿಕದ ಪೂರ್ವ ಭಾಗದಲ್ಲಿ ಅನಾಹುತವನ್ನು ಮಾಡ್ತಿದ್ರೆ,
ಕೀಟಲೆ ಕೋರರು, "’ಸ್ಯಾಂಡಿ’ ನಮ್ಮ ’ಸಂಧ್ಯ’ನಾ ಇಲ್ಲ ’ಸಂದೀಪ’ನಾ?" ಅಂತ ಫ಼ೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ ಕೇಳಿ, ಗಂಡು ಮಕ್ಕಳ ಮತ್ತು ಹೆಣ್ಣು ಮಕ್ಕಳ ನಡುವೆ ಭಯಂಕರ ಬಿಕ್ಕಟ್ಟನ್ನೇ ಸೃಷ್ಟಿಸಿಬಿಟ್ಟರು...
’ಸ್ಯಾಂಡಿ’ - ’ ಸಂಧ್ಯಾ"ನೇ ಅಂತ ಹೆಂಡತಿಯೊಂದಿಗೆ ವಾಗ್ವಾದ ಮಾಡಿದ ಗಂಡ ಉಪವಾಸ ಬೀಳಬೇಕಾಯ್ತು ಅಂತ ಅನ್ನೋದು ಮತ್ತೊಂದು ಫ಼ೇಸ್ ಬುಕ್ ಕಥೆ...
ಅದೇನೆ ಇರಲಿ, ನನ್ನ ಹೆಂಡತಿ ಕೂಡ, ’ತುಂಬಾ ಮೋಸ...ಹರಿಕೇನ್ ಗೆಲ್ಲಾ ಹುಡುಗೀರ್ ಹೆಸರೇ ಯಾಕಿಡ್ಬೇಕು - ಕಟ್ರೀನಾ ಅಂತೆ...ಲೈಲಾ ಅಂತೆ...ನೀಲಂ ಅಂತೆ...’ ಎಂದಾಗ
ನಾನು ಸುಮ್ಮನೆ ಇರದೆ ’ಅಷ್ಟೂ ಗೊತ್ತಾಗಲ್ವೇನೆ ಯಾಕೇ ಹುಡುಗೀರ್ ಹೆಸರಿಡ್ತಾರೆ ಅಂತ?’ ಎಂದು ಹೇಳ್ಬಿಟ್ಟೆ...ಅವತ್ತು ನನ್ನ ಪಾಡು ಯಾಕೆ ಕೇಳ್ತೀರಾ!
ನನ್ನ ಪಾಡು ಏನೇ ಆದ್ರೂ, ನನ್ನ ಹೆಂಡತಿ ಸ್ಯಾಂಡಿ ಹುಡುಗಿನೇ ಅಂತ ಒಪ್ಕೊಂಡ್ಳಲ್ಲಾ ಅಂತ ನನ್ನಷ್ಟಕ್ಕೇ ನಾನೇ ಸಮಾಧಾನ ಮಾಡ್ಕೊಂಡಿದ್ದೆ!!!
***
ಇಷ್ಟೆಲ್ಲಾ ಓದಿದ ಹೆಣ್ಣು ಮಕ್ಕಳು ಈಗಾಗಲೇ ನನ್ನ ಮೇಲೆ ಮೂರನೇ ಮಹಾ ಯುದ್ಧಕ್ಕೆ ಸಿದ್ಧರಾಗ್ತಿರಬಹುದು, ಹಾಗಾಗಿ ಮುಖ್ಯವಾದ ವಿಷಯ ಮೊದಲೇ ಹೇಳಿ ಬಿಡ್ತೀನಿ...
ಎಲ್ಲಾ ಹರಿಕೇನ್ ಗಳೂ/ಸೈಕ್ಲೋನ್ಗಳೂ, ಹೆಣ್ಣು ಮಕ್ಕಳ ಹೆಸರು ಇಟ್ಕೊಂಡಿರಲ್ಲ...
ಮುಂದೆ ’ಆಕಾಶ’ ನೂ ಬರ್ತಾನೆ ’ಸಾಗರ್’ ಕೂಡ ಬರ್ತಾನೆ ಆದ್ರೆ ಸದ್ಯಕ್ಕಲ್ಲ ...ಆದ್ರೆ ’ಮಜನೂ’ ಬರೋದು ಮಾತ್ರ ತುಂಬಾನೇ ಡೌಟು...
"ಅದೇನು ಅಷ್ಟೊಂದು ಕಾನ್ಫಿಡೆನ್ಸ್ ನಿಂದ ಹೇಳ್ತಿದೀರಾ?" ಅಂತೀರಾ? ಅದಕ್ಕೆ ಕಾರಣ ಇದೆ...
ಪ್ರತಿಯೊಂದು ಸೈಕ್ಲೋನ್ ಬರೋದಕ್ಕೂ ಮುಂಚೇನೆ ಮುಂದೆ ಏನು ಬರತ್ತೇ ಅನ್ನೋದನ್ನ ಮೊದಲೇ ನಿರ್ಧಾರ ಮಾಡಿ ಆಗಿರತ್ತೆ...
ಇದು ಏನಪ್ಪಾ ಇದು ಅಂತ ತಲೆ ಕೆರ್ಕೋ ಬೇಡಿ...
ನಮ್ಮ ’ಪ್ರಭವ’, ’ವಿಭವ’ ಅಂತ ಅರವತ್ತು ಸಂವತ್ಸರಗಳ ಹೆಸರಿದೆಯಲ್ಲಾ, ಅದೇ ರೀತಿ...
"ರೀ, ಸಾಕು ಸುಮ್ನೆ ಬುರಡೆ ಬಿಡಬೇಡಿ, ನಾವು ಚಿಕ್ಕವರಾಗಿದ್ದಾಗ ಇದು ಯಾವ ಹೆಸ್ರೂ ಕೇಳೇ ಇರಲಿಲ್ಲ...ಪ್ರಭವ-ವಿಭವ ಅಂತೇ...ಆ ರೀತಿ ಇದ್ದಿದ್ರೆ ನಮ್ಮ ಅಪ್ಪನೋ ತಾತನೋ ಹೇಳ್ತಿದ್ರು ಅಲ್ವಾ" ಅಂತ ಅಂದ್ರಾ?
ಅದಕ್ಕೂ ಕಾರಣ ಇದೆ...ನಮ್ಮ ಭಾರತದಲ್ಲಿ ಸೈಕ್ಲೋನ್ ಹೆಸರಿಡುವ ಪ್ರತೀತಿ ಶುರುವಾಗಿದ್ದು ೨೦೦೪ರಲ್ಲಿ...
ಮೊದಲು ಬಂದಿದ್ದು ’ಒನಿಲ್’ ಆಮೇಲೆ ’ಅಗ್ನಿ’ ಆದರೆ ನೀವು ಎಲ್ಲ ಹೆಸರೂ ಕೇಳಿರಬೇಕು ಅಂತ ಏನು ಇಲ್ಲ...
ಯಾಕೇ ಅಂದ್ರೆ ಪ್ರತಿ ವರ್ಷ ಹತ್ತಾರು ಸೈಕ್ಲೋನ್ ಗಳೂ ಹರಿಕೇನ್ ಗಳೂ ಬಂದು ಹೋಗ್ತಾ ಇರತ್ತೆ...ದಿನ ಪತ್ರಿಕೆಯಲ್ಲಿ ಬರೋದು ಏನಿದ್ರೂ ನಮ್ಮ ನಿತ್ಯ-ಜೀವನಕ್ಕೆ ತಟ್ಟುವಂತಹವುಗಳು ಮಾತ್ರ...
ಹಾಗಾಗಿ ’ಲೈಲಾ’ ’ಕಟ್ರೀನಾ’ ’ಐರೀನ್’ ಗಳ ನೆನಪು ನಮಲ್ಲಿ ಹೆಚ್ಚು ಕಾಲ ಉಳಿಯುತ್ತೆ...
’ಅದು ಸರಿ, ನಮ್ಮ ಬಾಲಿವುಡ್ ನಲ್ಲಿ ಕಟ್ರೀನಾ ಈಗಾಗ್ಲೇ ಇದಾಳೆ, ಸೈಕ್ಲೋನ್ ಕಟ್ರೀನಾ ಬೇಡ’ ಅಂದ್ರಾ?
ತಥಾಸ್ತು! ನಮ್ಮ ದೇಶಕ್ಕೆ ಕಟ್ರೀನಾ ’ಶಾಪ’ ತಟ್ಟಲ್ಲ ಬಿಡಿ!
"ಏನ್ರೀ ಈಗ ತಾನೆ ಲಿಸ್ಟ್ ಇದೇ ಅಂದ್ರೀ, ಈಗ ಕಟ್ರೀನಾ ಬರಲ್ಲ ಅಂತೀರಾ? ಸುಮ್ನೆ ತಲೇ ಕೇಡಿಸ್ಬೇಡ್ರೀ" ಅಂದ್ರಾ?
ಅದು ಹಾಗಲ್ಲ ಕಣ್ರೀ, ನಮ್ಮ ಭೂಮಿಯಲ್ಲಿರೋ ಬೇರೆ ಬೇರೆ ಸಾಗರ/ಸಮುದ್ರಗಳನ್ನು ವಿವಿಧ ಪ್ರಾಂತ್ಯಗಳಾಗಿ ವಿಂಗಡನೆ ಮಾಡಿದ್ದಾರೆ...
ಪ್ರತಿಯೊಂದು ಪ್ರಾಂತ್ಯದಲ್ಲೂ ಸೈಕ್ಲೋನ್/ಹರಿಕೇನ್ ಗಳ ಒಂದು ಪಟ್ಟಿ ಇರತ್ತೆ, ಹಾಗಾಗಿ ’ಕಟ್ರೀನಾ’ ಶಾಪ ಏನಿದ್ರೂ ಅಟ್ಲಾಂಟಿಕ್ ಪ್ರದೇಶಕ್ಕೇ ಸೀಮಿತ...
ನಮ್ಮ ನೀಲಂ ನೃತ್ಯ ಏನಿದ್ರೂ ಹಿಂದೂ ಮಹಾ ಸಾಗರದಲ್ಲಿ ಮಾತ್ರ!
ಈ ಹೆಸರಿಡೋ ಪದ್ಧತಿ ಮೊದಲು ಶುರುವಾಗಿದ್ದು ಆಕಸ್ಮಿಕವಾಗಿ ಅಟ್ಲಾಂಟಿಕ್ ಮಹಾ ಸಾಗರದಲ್ಲಿ "ಅಂತ್ಜೆ" ಎಂಬ ಒಂದು ಪ್ರಸಿದ್ಧ ಹಡಗು ಹರಿಕೇನ್ ನಿಂದ ಮುಳಿಗಿದಾಗ...
ಆಗ ಜನ "ಅಂತ್ಜೆ" ಹರಿಕೇನ್ ಎಂದು ಕರೆಯಲು ಆರಂಭಿಸಿದರಂತೆ...
ನಂತರ ಇಪ್ಪತ್ತನೇ ಶತಮಾನದ ಮಧ್ಯದಲ್ಲಿ ಪ್ರತಿಯೊಂದು ಹರಿಕೇನ್ಗೂ ಹೆಸರಿಡಲು ಆರಂಭಿಸಿದರಂತೆ...
ಮೊದ-ಮೊದಲಿಗೆ ಬರೀ ಹುಡುಗಿಯರ ಹೆಸರೇ ಇತ್ತಂತೆ...ಇದಾದ ಮೇಲೆ ಹವಾಮಾನ ಕೇಂದ್ರದಲ್ಲಿದ್ದವರಿಗೆ ಉಪವಾಸವೇ ಗತಿಯಾಯ್ತೇನೋ ೧೯೭೯ರಲ್ಲಿ ಹುಡುಗರ ಹೆಸರನ್ನೂ ಸೇರಿಸಿದರಂತೆ...
ಈಗ ಅಟ್ಲಾಂಟಿಕ್ ಸಾಗರದಲ್ಲಿ ಹುಟ್ಟುವ ಹರಿಕೇನ್ ಗಳಿಗೆ ಹುಡುಗಿಯರ ಮತ್ತು ಹುಡುಗರ ಹೆಸರನ್ನು ಒಂದಾದಮೇಲೆ ಮತ್ತೊಂದು ಬರುವಂತೆ ಬದಲಾಯಿಸಿದ್ದಾರೆ...
ಈಗ ಪ್ರಪಂಚದಲ್ಲಿರುವ ವಿಭಾಗಳು ಇವು:
೧. ಕೆರಿಬಿಯನ್, ಮೆಕ್ಸಿಕೋ ಮತ್ತು ಉತ್ತರ ಅಟ್ಲಾಂಟಿಕ್ ವಿಭಾಗ
೨. ಈಶಾನ್ಯ ಪೆಸಿಫಿಕ್ ವಿಭಾಗ
೩. ಉತ್ತರ-ಮಧ್ಯ ಪೆಸಿಫಿಕ್ ವಿಭಾಗ
೪. ವಾಯುವ್ಯ ಪೆಸಿಫಿಕ್ ಮತ್ತು ದಕ್ಷಿಣ ಚೀನಾ ಸಮುದ್ರ ವಿಭಾಗ
೫. ಆಸ್ಟ್ರೇಲಿಯಾ ವಿಭಾಗ
೬. ನಾಡಿಸ್ ವಿಭಾಗ (ದಕ್ಷಿಣ ಪೆಸಿಫಿಕ್ನ ಕೆಲವು ಭಾಗಗಳು)
೭. ಪೋರ್ಟ್ ಮೋರ್ಸ್ಬಯ್ ವಿಭಾಗ
೮. ಜಕಾರ್ತಾ ವಿಭಾಗ
೯. ಉತ್ತರ ಹಿಂದೂ ಮಹಾಸಾಗರ ವಿಭಾಗ
೧೦.ನೈರುತ್ಯ ಹಿಂದೂ ಮಹಾ ಸಾಗರ ವಿಭಾಗ
ಪ್ರತಿಯೊಂದು ವಿಭಾಗದ ಹವಾಮಾನಕ್ಕೂ ಒಂದು ಮುಖ್ಯ ಕಚೇರಿಯಿದ್ದು, ಉತ್ತರ ಹಿಂದೂ ಮಹಾಸಾಗರ ವಿಭಾಗಕ್ಕೆ ದೆಹಲಿಯಲ್ಲಿ ಮುಖ್ಯ ಕಚೇರಿ ಇದೆ...
ಈ ವಿಭಾಗದ ಸೈಕ್ಲೋನ್ಗಳಿಗೆ ಭಾರತ, ಪಾಕಿಸ್ತಾನ, ಶ್ರೀಲಂಕ, ಮಾಲ್ಡೀವ್ಸ್, ಮ್ಯಾನ್ಮಾರ್, ಥೈಲಾಂಡ್ ಮತ್ತು ಓಮನ್ ದೇಶದವರು ಸೇರಿ ಹೆಸರಿಟ್ಟಿದ್ದಾರೆ.
ಈ ಪಟ್ಟಿ ಇಲ್ಲಿದೆ:
ಭಾರತೀಯ ಹವಾಮಾನ ಇಲಾಖೆ ಜನತೆಗೆ ಹೊಸ ಹೆಸರನ್ನು ಸೂಚಿಸಬಹುದಾದ ಅವಕಾಶ ಕೊಡುತ್ತದೆಯಾದರೂ, ೨೦೦೪ರಲ್ಲಿ ಸಿದ್ಧಪಡಿಸಿರುವ ಪಟ್ಟಿಯನ್ನು ಈ ಸದ್ಯದಲ್ಲಿ ಬದಲಾಯಿಸುವುದು ಅನುಮಾನ...
ಹಾಗಾಗಿ, ಸೈಕ್ಲೋನ್ ಲೈಲಾ-’ಸೈಕ್ಲೋನ್’ ಮಜನೂನ ಸದ್ಯಕ್ಕಂತೂ ಸೇರೋಕಾಗೋದಿಲ್ಲ...!
ಇವೆಲ್ಲಾ ವಿಷಯ ಓದಿ ನಿಮಗೆ ಇನ್ನೂ ಸಮಾಧಾನ ಆಗಲಿಲ್ಲವಾದಲ್ಲಿ, ಹೆಚ್ಚಿನ ವಿಷಯಗಳಿಗೆ ಇಲ್ಲಿ ಚಿಟಕಿಸಿ:
http://www.wmo.int/pages/prog/www/tcp/Storm-naming.html
ಇಷ್ಟೆಲ್ಲ ಕಥೆ ಹೇಳಿದ್ದಾಯ್ತು, ಹೇಳೋದ್ದನ್ನೇ ಮರೆತಿದ್ದೇ...
ಸ್ಯಾಂಡಿ - ಸಂಧ್ಯಾನೇ ಅಂತ ಕನ್ಫರ್ಮ್ ಆಯ್ತು ಯಾಕೇ ಅಂದ್ರೆ ಅವಳ ಹಿಂದೆ ಬಂದಿದ್ದು ರಾಫಲ್ ಮುಂದೆ ಬರೋವ್ನು ಟೋನಿ...! :-)
--ಶ್ರೀ
ಹೆಚ್ಚಿನ ಮಾಹಿತಿಗೆ:
http://www.wmo.int
ಚಿತ್ರ ಕೃಪೆ: http://www.imd.gov.in/
ಸ್ಯಾಂಡಿ ಚಿತ್ರಕೃಪೆ: http://www.telegraph.co.uk
Subscribe to:
Posts (Atom)



