Friday, June 10, 2011

ಜ್ಞಾನೋದಯ

ಹೆತ್ತವರು
ತಿದ್ದಲು
ತಿಪ್ಪರಲಾಗ ಹೊಡೆದರೂ
ನೆಟ್ಟಗಾಗದ ಗುಣ
ತನ್ನ ಪುಟ್ಟ ಕಂದ
ತನ್ನ ಪ್ರತಿರೂಪವೇ
ಎಂದು
ತಿಳಿದಾಗಲೇ
ತಪ್ಪಿನರಿವಾಗುವುದು!

--ಶ್ರೀ
(೧೦-ಜೂನ್-೨೦೧೧)

Wednesday, March 23, 2011

ಬಣ್ಣ ಅಳಿಸಿತು...




ಅಳಿಸಿದಳು ಬಣ್ಣವ
ಇಳಿದಿದ್ದ
ತಿಳಿಹಳದಿ
ಕಡುಗೆಂಪು
ಪಚ್ಚೆ-ನೀಲಿ
ಎಲ್ಲವನು ಅಳಿಸಿದಳು
ಬಣ್ಣಗಳ ಕಂಡೊಡನೆ
ಸಿಡುಕು-ಕಿಡಿ ನೋಟ
ಇಂತಿಷ್ಟು ಬಿಡದೆ
ಅಳಿಸಿದಳವಳು...
ಎಲ್ಲವೂ ಮಾಯವಾದಾಗ
ನೆಮ್ಮದಿಯ ನಿಟ್ಟುಸಿರು,
ರಸ್ತೆ ಗುಡಿಸುವಾಕೆಗೆ... :)

--ಶ್ರೀ
೨೩-ಮಾರ್ಚ್-೨೦೧೧

Wednesday, February 9, 2011

ಎಲ್ಲಮ್ಮನ ಜಾತ್ರೆ


ಇತ್ತೀಚಿನ ದಿನಗಳಲ್ಲಿ
ವೈದ್ಯ ಎಂಬುವನು
ರೋಗಿಯ
ಹೊಟ್ಟೆ ಕತ್ತರಿಸಿ
ಗುಣಪಡಿಸುವ ಬದಲಾಗಿ
ರೋಗಿಯ
ಜೇಬು ಕತ್ತರಿಸಿ
ತನ್ನ ಹೊಟ್ಟೆ
ತುಂಬಿಸಿಕೊಳ್ಳುತ್ತಿದ್ದಾನೆ...

--ಶ್ರೀ
(೧೦-ಫೆಬ್ರವರಿ-೨೦೧೧)
ಚಿತ್ರ ಕೃಪೆ: http://www.pointsincase.com/