ಪುರೋಹಿತರೂ ಶಾಸ್ತ್ರಿಗಳೂ
ಧರ್ಮದ ಹೆಸರ ಬಳಸಿ
ಜನರ ಕೊಳ್ಳೆ ಹೊಡೆಯವರೆಂದು,
ಜ್ಞಾನೋದಯ ಮಾಡುವುದಾಗಿ
ಚೊಕ್ಕವಾದ ಹೊತ್ತಿಗೆಯೊಂದು ಬರೆದು,
ಚಕ್ಕಂದದಿಂದ ನಾಟಕವನಾಡಿ,
ಅದೇ ಧರ್ಮದ ಹೆಸರಲ್ಲಿ
ಕೊಳ್ಳೆ ಹೊಡೆಯುವುದೂ
ನಾಸ್ತಿಕ ಧರ್ಮದ ಒಂದು ಮುಖವೇ?
--ಶ್ರೀ
ವಿಧ ವಿಧವಾದ ಕಡ್ಲೆ ಕಾಯಿ ವಿತರಿಸುವ ಏಕೈಕ ಬ್ಲಾಗ್ ತಾಣಕ್ಕೆ ಸ್ವಾಗತ... ಇಲ್ಲಿವರೆಗೂ ಬಂದಿದೀರ, ಸ್ವಲ್ಪ ಕಡ್ಲೆ ಕಾಯಿ ತಿಂದು ಹೇಗಿದೆ ಅಂತ ಹೇಳಿ ಹೋಗಿ...
Sunday, August 2, 2009
Sunday, July 19, 2009
ನಡೆಸು ಎನ್ನ ಬಿಡದೆ
ನಡೆಸು ಎನ್ನ ಬಿಡದೆ ಹಿಡಿದು
ಎಡವಿ ಬೀಳೋ ಹುಡುಗೆನದು
ತೊಡರಿ ತಡಕುವಾಗ
ತಡವಿ ಬಿಡಿಸೋ ಒಡೆಯ (ಬಿಡಿಸೆನ್ನೊಡೆಯ)
ಕೇಡನರಿಯದೆ ಮಾಡೆ
ಬಡಿದು ಸರಿಪಡಿಸೆನ್ನ
ಕೋಡ ಮೂಡದ ಹಾಗೆ
ನೋಡೆಕೊಳೊ ಹಡೆದವನೆ
ಕಡಲಿರಲಿ, ಸುಡುತಿರಲಿ
ಒಡಕಿರಲಿ, ಮಡುವಿರಲಿ,
ಅಡಿಗಡಿಗೂ ಹಿಡಿದೆನ್ನ
ದಿಟದ ಜಾಡಲಿ ಇರಿಸು
ಈ ಹಾಡನ್ನು ಹಮೀರ್ ಕಲ್ಯಾಣಿ ರಾಗಕ್ಕೆ ಅಳವಡಿಸಿದ್ದೇನೆ. ಈ ರಾಗವನ್ನು ಕೇದಾರ್ ಎಂದು ಹಿಂದೂಸ್ಥಾನಿ ಪದ್ದತಿಯಲ್ಲಿ ಹೇಳುತ್ತಾರೆ.
ಶಾಸ್ತ್ರೀಯವಾಗಿ ಹೆಚ್ಚಾಗಿ ಕಲಿತಿಲ್ಲವಾದ್ದರಿಂದ, ತಪ್ಪುಗಳಿದ್ದರೆ ಮನ್ನಿಸಿ.
ಪ್ರಖ್ಯಾತ ಹಾಡು ’ ಹಮ್ ಕೊ ಮನ್ ಕಿ ಶಕ್ತಿ ದೇನಾ’, ಇದೇ ರಾಗದಲ್ಲಿದೆ.
--ಶ್ರೀ
ಎಡವಿ ಬೀಳೋ ಹುಡುಗೆನದು
ತೊಡರಿ ತಡಕುವಾಗ
ತಡವಿ ಬಿಡಿಸೋ ಒಡೆಯ (ಬಿಡಿಸೆನ್ನೊಡೆಯ)
ಕೇಡನರಿಯದೆ ಮಾಡೆ
ಬಡಿದು ಸರಿಪಡಿಸೆನ್ನ
ಕೋಡ ಮೂಡದ ಹಾಗೆ
ನೋಡೆಕೊಳೊ ಹಡೆದವನೆ
ಕಡಲಿರಲಿ, ಸುಡುತಿರಲಿ
ಒಡಕಿರಲಿ, ಮಡುವಿರಲಿ,
ಅಡಿಗಡಿಗೂ ಹಿಡಿದೆನ್ನ
ದಿಟದ ಜಾಡಲಿ ಇರಿಸು
ಈ ಹಾಡನ್ನು ಹಮೀರ್ ಕಲ್ಯಾಣಿ ರಾಗಕ್ಕೆ ಅಳವಡಿಸಿದ್ದೇನೆ. ಈ ರಾಗವನ್ನು ಕೇದಾರ್ ಎಂದು ಹಿಂದೂಸ್ಥಾನಿ ಪದ್ದತಿಯಲ್ಲಿ ಹೇಳುತ್ತಾರೆ.
ಶಾಸ್ತ್ರೀಯವಾಗಿ ಹೆಚ್ಚಾಗಿ ಕಲಿತಿಲ್ಲವಾದ್ದರಿಂದ, ತಪ್ಪುಗಳಿದ್ದರೆ ಮನ್ನಿಸಿ.
| ನಡೆಸು ಎನ್ನ ಬಿಡದೆ.m... |
ಪ್ರಖ್ಯಾತ ಹಾಡು ’ ಹಮ್ ಕೊ ಮನ್ ಕಿ ಶಕ್ತಿ ದೇನಾ’, ಇದೇ ರಾಗದಲ್ಲಿದೆ.
--ಶ್ರೀ
Labels:
ಕವನ,
ಕೇದಾರ್ ರಾಗ,
ಗೀತೆ,
ಹಮೀರ್ ಕಲ್ಯಾಣಿ ರಾಗ
Monday, June 29, 2009
ಓ ’ಸಾಥಿ’ ರೇ, ತೇರೆ ಬಿನಾ ಭಿ ಕ್ಯಾ ಜೀನಾ!
ಕಿಶೋರ್ ಕುಮಾರ್ ಹಾಡಿರುವ ಅಚ್ಚುಮೆಚ್ಚಿನ ಹಾಡುಗಳಲ್ಲಿ ಈ ಹಾಡೂ ಒಂದು...
ಹಾಗೂ ’ಗೀತಾ’ ಚಿತ್ರದ ’ಜೊತೆ ಜೊತೆಯಲಿ’ ಹಾಡೂ ಅಂದ್ರೆ ನನಗೆ ತುಂಬಾನೇ ಇಷ್ಟ!
ಈ ಹಿಂದಿ ಹಾಡಿಗೂ, ಗೀತಾ ಚಿತ್ರಗೀತೆಗೂ ಏನು ಸಂಬಂಧ ಅಂದುಕೊಳ್ಳುತ್ತಿದ್ದೀರಾ?
ಇತ್ತೀಚಿಗೆ ಟಿ.ವಿ. ಮಾಧ್ಯಮದವರೂ, ಕನ್ನಡಪ್ರಭ, ಪ್ರಜಾವಾಣಿ ಮುಂತಾದ ಹೆಸರಾಂತ ಪತ್ರಿಕೆಗಳೂ, ಈ "ಜೊತೆ"ಗೆ ಕೈ ಕೊಟ್ಟು "ಸಾಥ್"ನ ಸಾಥಿಗಳಾಗಿದ್ದಾರೆ...
ಈ "ಸಾಥ್" ಪದದ ಬಳಕೆ, "ಜೊತೆ ಜೊತೆಯಲ್ಲಿ" ಎಂಬ ಅದ್ಭುತ ಹಾಡಿನಲ್ಲಿ ಬಳಸಿದ್ದರೆ ಹೇಗಿರುತ್ತಿತ್ತು ಎಂದನಿಸಿತು.
’ಜೊತೆ’ ಎಂಬ ಕನ್ನಡ ಪದವೂ ತೆರೆಮರೆಗೆ ಸರಿಯುತ್ತಿದೆಯೇ?
ನೀವು ಸಾಥ್ನ ಸಾಥಿಗಳಾಗಿದ್ದೀರೇ, ಜೊತೆಯ ಜೊತೆಯಲಿರುವವರೇ?
--ಶ್ರೀ
ಹಾಗೂ ’ಗೀತಾ’ ಚಿತ್ರದ ’ಜೊತೆ ಜೊತೆಯಲಿ’ ಹಾಡೂ ಅಂದ್ರೆ ನನಗೆ ತುಂಬಾನೇ ಇಷ್ಟ!
ಈ ಹಿಂದಿ ಹಾಡಿಗೂ, ಗೀತಾ ಚಿತ್ರಗೀತೆಗೂ ಏನು ಸಂಬಂಧ ಅಂದುಕೊಳ್ಳುತ್ತಿದ್ದೀರಾ?
ಇತ್ತೀಚಿಗೆ ಟಿ.ವಿ. ಮಾಧ್ಯಮದವರೂ, ಕನ್ನಡಪ್ರಭ, ಪ್ರಜಾವಾಣಿ ಮುಂತಾದ ಹೆಸರಾಂತ ಪತ್ರಿಕೆಗಳೂ, ಈ "ಜೊತೆ"ಗೆ ಕೈ ಕೊಟ್ಟು "ಸಾಥ್"ನ ಸಾಥಿಗಳಾಗಿದ್ದಾರೆ...
ಈ "ಸಾಥ್" ಪದದ ಬಳಕೆ, "ಜೊತೆ ಜೊತೆಯಲ್ಲಿ" ಎಂಬ ಅದ್ಭುತ ಹಾಡಿನಲ್ಲಿ ಬಳಸಿದ್ದರೆ ಹೇಗಿರುತ್ತಿತ್ತು ಎಂದನಿಸಿತು.
’ಜೊತೆ’ ಎಂಬ ಕನ್ನಡ ಪದವೂ ತೆರೆಮರೆಗೆ ಸರಿಯುತ್ತಿದೆಯೇ?
ನೀವು ಸಾಥ್ನ ಸಾಥಿಗಳಾಗಿದ್ದೀರೇ, ಜೊತೆಯ ಜೊತೆಯಲಿರುವವರೇ?
--ಶ್ರೀ
Labels:
ಕನ್ನಡ ಮಾಧ್ಯಮ,
ಕನ್ನಡಪ್ರಭ,
ಜೊತೆ,
ಟಿ.ವಿ.೯,
ಪ್ರಜಾವಾಣಿ,
ಸಾಥ್,
ಹಿಂದಿ ಮನ್ನಣೆ
Saturday, June 27, 2009
Friday, June 26, 2009
ಮನದ ಹೊಗೆ
ಬಾಳಿಗರು ದೆಹಲಿಯ ಚಿತೆಯ ಬಗ್ಗೆ "ಚಿಂತೆಯಲಿ" ಬರೆದುದನ್ನು ಓದಿದಾಗ, ನನಗಿದು ಹೊಳೆಯಿತು...
ಹಾಳು ಧಗೆ ಎಂದು
ಮನದ ಹೊಗೆ
ಹೊರಗೆ ಹಾಕುತ
ಭುಸುಗುಟ್ಟಿದೆ...
ಧಗೆಯ ಮೇಲಿನ
ಹೊಗೆ ಹೊರಹಾಕಿದರೂ
ಮನದಾಳದ ಹೊಗೆ
ಆರುವುದಿಲ್ಲವೆಂಬ ಅರಿವಿತ್ತು...
--ಶ್ರೀ
ಹಾಳು ಧಗೆ ಎಂದು
ಮನದ ಹೊಗೆ
ಹೊರಗೆ ಹಾಕುತ
ಭುಸುಗುಟ್ಟಿದೆ...
ಧಗೆಯ ಮೇಲಿನ
ಹೊಗೆ ಹೊರಹಾಕಿದರೂ
ಮನದಾಳದ ಹೊಗೆ
ಆರುವುದಿಲ್ಲವೆಂಬ ಅರಿವಿತ್ತು...
--ಶ್ರೀ
Tuesday, June 16, 2009
ಕಾಡುವ ಕರಿನೆರಳು
ಕಾಡುವ
ಕರಿನೆರಳನು ದಿಟ್ಟಿಸಿ
ಬೇಗುದಿಯಲಿ
ಸುಡುವುದಕಿಂತ,
ಕಂಗಳನೆತ್ತಿ
ಸುಡುವ ನೇಸರನಲಿ
ನೆಡುವುದು ಲೇಸು...
--ಶ್ರೀ
(೧೭ - ಜೂನ್ - ೨೦೦೯)
ಕರಿನೆರಳನು ದಿಟ್ಟಿಸಿ
ಬೇಗುದಿಯಲಿ
ಸುಡುವುದಕಿಂತ,
ಕಂಗಳನೆತ್ತಿ
ಸುಡುವ ನೇಸರನಲಿ
ನೆಡುವುದು ಲೇಸು...
--ಶ್ರೀ
(೧೭ - ಜೂನ್ - ೨೦೦೯)
Wednesday, June 10, 2009
ಕೊಚ್ಚೆಯಿಂದ ದೂರ ಉಳಿವಿರೇಕೆ?
ಕೊಚ್ಚೆಯ ಕೆಸರು
ಹಚ್ಚಿಕೊಳುವುದೆಂದು
ಬೆಚ್ಚನೆ ಉಳಿವಿರೇಕೆ?
ಕೊಚ್ಚೆಯಲಿಳಿವ
ಕೆಚ್ಚಿರುವವರಿಗೇ
ಮೆಚ್ಚಿ ತಾಗುವುದು ತಾವರೆ...
--ಶ್ರೀ
(೧೦ - ಜೂನ್ - ೨೦೦೯)
ಹಚ್ಚಿಕೊಳುವುದೆಂದು
ಬೆಚ್ಚನೆ ಉಳಿವಿರೇಕೆ?
ಕೊಚ್ಚೆಯಲಿಳಿವ
ಕೆಚ್ಚಿರುವವರಿಗೇ
ಮೆಚ್ಚಿ ತಾಗುವುದು ತಾವರೆ...
--ಶ್ರೀ
(೧೦ - ಜೂನ್ - ೨೦೦೯)
Subscribe to:
Posts (Atom)