ನಕಲಿ ಹಕ್ಕಿಗಳ
ಗೂಡು ಬದಲಾಗಲು
ಅಸಲಿ ಹಕ್ಕಿಗಳಿಗೆ
ಗೂಡೇ ಇಲ್ಲದಾಯಿತು...!
(೨೪ ಜುಲೈ ೨೦೦೮)
ವಿಧ ವಿಧವಾದ ಕಡ್ಲೆ ಕಾಯಿ ವಿತರಿಸುವ ಏಕೈಕ ಬ್ಲಾಗ್ ತಾಣಕ್ಕೆ ಸ್ವಾಗತ... ಇಲ್ಲಿವರೆಗೂ ಬಂದಿದೀರ, ಸ್ವಲ್ಪ ಕಡ್ಲೆ ಕಾಯಿ ತಿಂದು ಹೇಗಿದೆ ಅಂತ ಹೇಳಿ ಹೋಗಿ...
Monday, August 4, 2008
Sunday, December 23, 2007
ಹೇಳೇ ಗೆಳತಿ???
ನನ್ನ
ಹೃದಯವ
ನೀ ಕದ್ದೆ!
ನಿನ್ನ
ಹೃದಯವ
ಕದಿಯಲು
ಬಿಡಲೊಲ್ಲೆ!
ಹೃದಯವಿಲ್ಲದೆ
ಹೇಗೆ ಬದುಕಿರಲಿ
ಹೇಳೇ ಗೆಳತಿ...???
(೧೯-ಡಿಸೆಂಬರ್-೨೦೦೭)
ಹೃದಯವ
ನೀ ಕದ್ದೆ!
ನಿನ್ನ
ಹೃದಯವ
ಕದಿಯಲು
ಬಿಡಲೊಲ್ಲೆ!
ಹೃದಯವಿಲ್ಲದೆ
ಹೇಗೆ ಬದುಕಿರಲಿ
ಹೇಳೇ ಗೆಳತಿ...???
(೧೯-ಡಿಸೆಂಬರ್-೨೦೦೭)
Wednesday, December 5, 2007
ಓ ನಲ್ಲ...
ಎಲ್ಲಿ ಹೋದೆಯೋ, ಓ ನನ್ನ ನಲ್ಲ...!
ನೀನಿಲ್ಲದೇ, ಸೊರಗಿದೆ ನನ್ನ ಗಲ್ಲ...
ಹೋಗಿರುವೆ ಎತ್ತ?
ಕದ್ದು ನನ್ನಯ ಚಿತ್ತ...
ಬೇಗ ಬಾರೋ ನನ್ನಿನಿಯ,
ನನ್ನ ಗುಂಡಿಗೆಯೊಡೆಯ...
ಸೊರಗಿ ಸಾಯುತ್ತಿದೆ ನನ್ನ ಗಲ್ಲ
ಬಾ...ಮತ್ತೆ ಉಣಿಸೆನಗೆ, ಬೆಲ್ಲ,
ಮುತ್ತ ಸವಿ ಬೆಲ್ಲ...
- ಗೀಚಿದ್ದು ಡಿಸೆಂಬರ್ ೫, ೨೦೦೦೭
ನೀನಿಲ್ಲದೇ, ಸೊರಗಿದೆ ನನ್ನ ಗಲ್ಲ...
ಹೋಗಿರುವೆ ಎತ್ತ?
ಕದ್ದು ನನ್ನಯ ಚಿತ್ತ...
ಬೇಗ ಬಾರೋ ನನ್ನಿನಿಯ,
ನನ್ನ ಗುಂಡಿಗೆಯೊಡೆಯ...
ಸೊರಗಿ ಸಾಯುತ್ತಿದೆ ನನ್ನ ಗಲ್ಲ
ಬಾ...ಮತ್ತೆ ಉಣಿಸೆನಗೆ, ಬೆಲ್ಲ,
ಮುತ್ತ ಸವಿ ಬೆಲ್ಲ...
- ಗೀಚಿದ್ದು ಡಿಸೆಂಬರ್ ೫, ೨೦೦೦೭
Thursday, November 29, 2007
ಹತ್ತು ಹತ್ತು ಇಪ್ಪತ್ತು...
ನಾವು ಚಿಕ್ಕವರಾಗಿದ್ದಾಗ ಹೀಗೊಂದು ಹಾಡು ಕಲಿಸಿದ್ರು...
ಮಕ್ಕಳಿಗೆ ಕಲಿಸಲು ಉಪಯೋಗ ಆಗುತ್ತೆ.
ಮರೆತು ಹೋಗುವುದಕ್ಕೆ ಮುಂಚೆ ಇಲ್ಲಿ ಹಾಕೋಣ ಅಂತ....
--------~ *~ ---------
ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು
ತೋಟದಿ ಮಾವಿನ ಮರವಿತ್ತು
ಮೂವತ್ತು ಹತ್ತು ನಲವತ್ತು
ಮಾವಿನ ಮರದಲಿ ಕಾಯಿತ್ತು
ನಲವತ್ತು ಹತ್ತು ಐವತ್ತು
ಮಾವನು ಕಂಡನು ಸಂಪತ್ತು
ಐವತ್ತು ಹತ್ತು ಅರವತ್ತು
ಸಂಪತ್ತು ಕೈಲಿ ಕಲ್ಲಿತ್ತು
ಅರವತ್ತು ಹತ್ತು ಎಪ್ಪತ್ತು
ಕಲ್ಲನು ಬೀರಿದ ಸಂಪತ್ತು
ಎಪ್ಪತ್ತು ಹತ್ತು ಎಂಬತ್ತು
ಮಾವಿನ ಹಣ್ಣು ಉದುರಿತ್ತು
ಎಂಬತ್ತು ಹತ್ತು ತೊಂಬತ್ತು
ಮಾಲಿಯ ಕಂಡನು ಸಂಪತ್ತು
ತೊಂಬತ್ತು ಹತ್ತು ನೂರು
ಓಡಿ ಮನೆಯ ಸೇರು
ಮಕ್ಕಳಿಗೆ ಕಲಿಸಲು ಉಪಯೋಗ ಆಗುತ್ತೆ.
ಮರೆತು ಹೋಗುವುದಕ್ಕೆ ಮುಂಚೆ ಇಲ್ಲಿ ಹಾಕೋಣ ಅಂತ....
--------~ *~ ---------
ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು
ತೋಟದಿ ಮಾವಿನ ಮರವಿತ್ತು
ಮೂವತ್ತು ಹತ್ತು ನಲವತ್ತು
ಮಾವಿನ ಮರದಲಿ ಕಾಯಿತ್ತು
ನಲವತ್ತು ಹತ್ತು ಐವತ್ತು
ಮಾವನು ಕಂಡನು ಸಂಪತ್ತು
ಐವತ್ತು ಹತ್ತು ಅರವತ್ತು
ಸಂಪತ್ತು ಕೈಲಿ ಕಲ್ಲಿತ್ತು
ಅರವತ್ತು ಹತ್ತು ಎಪ್ಪತ್ತು
ಕಲ್ಲನು ಬೀರಿದ ಸಂಪತ್ತು
ಎಪ್ಪತ್ತು ಹತ್ತು ಎಂಬತ್ತು
ಮಾವಿನ ಹಣ್ಣು ಉದುರಿತ್ತು
ಎಂಬತ್ತು ಹತ್ತು ತೊಂಬತ್ತು
ಮಾಲಿಯ ಕಂಡನು ಸಂಪತ್ತು
ತೊಂಬತ್ತು ಹತ್ತು ನೂರು
ಓಡಿ ಮನೆಯ ಸೇರು
Monday, October 8, 2007
ರಾಮನಿಲ್ಲವೇ?? ಇಲ್ಲ ಬಿಡಿ...
ರಾಮನಿಲ್ಲವೇ?? ಇಲ್ಲ ಬಿಡಿ...
ರಾಮನಿಲ್ಲವೇ??
ಇಲ್ಲ, ಬಿಡಿ...
ದೇವರೇ ಇಲ್ಲವೇ??
ಇಲ್ಲ, ಬಿಡಿ...
ಆದರೆ...
ಜಲ ಪ್ರಳಯಕೆ
ಎಡೆ ಮಾಡಬೇಡಿ...
ಮೀನುಗಾರರ
ಹೊಟ್ಟೆಯನು ಹೊಡಿಬೇಡಿ...
ಜನರ ಹಣವನು
ಪೋಲು ಮಾಡಬೇಡಿ...
ದೇಶದ ಭದ್ರತೆಗೆ
ಧಕ್ಕೆ ತರಬೇಡಿ...
ಹವಳಗಳ, ಮೃದ್ವಂಗಿಗಳ
ಮರಣ ಮೃದಂಗ ಬಾರಿಸಬೇಡಿ...
ಥೋರಿಯಂ ನಿಕ್ಷೇಪವನು
ನಾಶ ಮಾಡಬೇಡಿ...
ನೀಚ ರಾಜಕಾರಣಕೆ
ಧರ್ಮ ಬಳಸಬೇಡಿ...
ರಾಮನಿಲ್ಲ ಬಿಡಿ...
ರಾಮನ ಹೆಸರಲ್ಲಿ ದೇಶದ ನಿರ್ನಾಮ ಮಾಡಬೇಡಿ...
(೮-ಅಕ್ಟೋಬರ್-೨೦೦೭)
ರಾಮನಿಲ್ಲವೇ??
ಇಲ್ಲ, ಬಿಡಿ...
ದೇವರೇ ಇಲ್ಲವೇ??
ಇಲ್ಲ, ಬಿಡಿ...
ಆದರೆ...
ಜಲ ಪ್ರಳಯಕೆ
ಎಡೆ ಮಾಡಬೇಡಿ...
ಮೀನುಗಾರರ
ಹೊಟ್ಟೆಯನು ಹೊಡಿಬೇಡಿ...
ಜನರ ಹಣವನು
ಪೋಲು ಮಾಡಬೇಡಿ...
ದೇಶದ ಭದ್ರತೆಗೆ
ಧಕ್ಕೆ ತರಬೇಡಿ...
ಹವಳಗಳ, ಮೃದ್ವಂಗಿಗಳ
ಮರಣ ಮೃದಂಗ ಬಾರಿಸಬೇಡಿ...
ಥೋರಿಯಂ ನಿಕ್ಷೇಪವನು
ನಾಶ ಮಾಡಬೇಡಿ...
ನೀಚ ರಾಜಕಾರಣಕೆ
ಧರ್ಮ ಬಳಸಬೇಡಿ...
ರಾಮನಿಲ್ಲ ಬಿಡಿ...
ರಾಮನ ಹೆಸರಲ್ಲಿ ದೇಶದ ನಿರ್ನಾಮ ಮಾಡಬೇಡಿ...
(೮-ಅಕ್ಟೋಬರ್-೨೦೦೭)
Friday, October 5, 2007
ಮುಗಿಲು
ಮುಗಿಲು
ಬಾನು-ಆಗಸ-ಮುಗಿಲು
ನಿನಗಿದೆ ಹೆಸರಲೂ ವಿವಿಧತೆ, ನಿನ್ನ ಗುಣದಂತೆ...
ಯಾರು ಬಣ್ಣ ತುಂಬುವರೋ ನಿನಗೆ
ನಸು ಕೆಂಪು-ತುಸು ಹಳದಿ-ತಿಳಿ ನೀಲಿ
ರಾತ್ರಿಯಾಗಲು ನೀನಾಗುವೆ, ಬೆಳ್ಳಿ ಚುಕ್ಕಿಯ ರಂಗೋಲಿ...
ಕ್ಷಣ ಕ್ಷಣವು ಹೊಸ ರಂಗು
ಅದೇನು ಚತುರ ಕಲೆ! ಸದಾ ಮಾಡುವೆ ದಂಗು!
ದಿನ ದಿನವು ಬಗೆ ಬಗೆಯ ಚಿತ್ತಾರ
ಯಾರದಿದು ಅದ್ಭುತ ಚಮತ್ಕಾರ?
ಒಂದೆಡೆ ಮಳೆಯ ಸುರಿಸುತ ಪನ್ನೀರ ಸಿಂಚನ
ಮತ್ತೊಂದೆಡೆ ಎಳೆದಿದೆ ಬಣ್ಣದಾ ಬಿಲ್ಲು, ಒಹ್ ರೋಮಾಂಚನ!
ಖುಷಿ ಕೊಡಲೆಂದೋ ಏನೋ, ಬಿಲ್ಲ ಮೇಲೆ ಮಗದೊಂದು ಬಿಲ್ಲು
ಇದ ನೋಡಲು, ನನ್ನದೆಯು ಅನ್ನದೇನು ಝಲ್ಲು!
ನಿನ್ನಲ್ಲಿ ಅದೇನು ಮೋಡಿಯೋ ಕಾಣೆ
ಸಾವಿರ ಕಣ್ಣ ನವಿಲು ಗರಿ ಬಿಚ್ಚಿ ಕುಣಿಯುವುದು ಕೋಣೆ ಕೋಣೆ
ಈಗಿನದು ಮರು ಕ್ಷಣಕಿಲ್ಲ, ಮತ್ತೆ ಕಾಣುವುದಿಲ್ಲ.
ಬೆಳ್ಳಿ ಮೋಡ- ಕೋಲ್ಮಿಂಚು ನಿನ್ನ ಅಲಂಕರಿಸುವುದಲ್ಲ!
ಯಾರು ಹಿಡಿದಿರುವರೋ ಕುಂಚ
ಸೃಷ್ಟಿಯಾಗಿದೆ ವಿಸ್ಮಯ ಪ್ರಪಂಚ
ನಿರಂತರವಾಗಿ ಹರಿದಿದೆ ಕಲಾಪಾಕ
ನೋಡುತ್ತಲೇ ದಕ್ಕುವುದೆನಗೆ ನಿತ್ಯ ನಾಕ!!
-ಶ್ರೀನಿವಾಸ್, ೪-ಅಕ್ಟೋಬರ್-೨೦೦೭
ಬಾನು-ಆಗಸ-ಮುಗಿಲು
ನಿನಗಿದೆ ಹೆಸರಲೂ ವಿವಿಧತೆ, ನಿನ್ನ ಗುಣದಂತೆ...
ಯಾರು ಬಣ್ಣ ತುಂಬುವರೋ ನಿನಗೆ
ನಸು ಕೆಂಪು-ತುಸು ಹಳದಿ-ತಿಳಿ ನೀಲಿ
ರಾತ್ರಿಯಾಗಲು ನೀನಾಗುವೆ, ಬೆಳ್ಳಿ ಚುಕ್ಕಿಯ ರಂಗೋಲಿ...
ಕ್ಷಣ ಕ್ಷಣವು ಹೊಸ ರಂಗು
ಅದೇನು ಚತುರ ಕಲೆ! ಸದಾ ಮಾಡುವೆ ದಂಗು!
ದಿನ ದಿನವು ಬಗೆ ಬಗೆಯ ಚಿತ್ತಾರ
ಯಾರದಿದು ಅದ್ಭುತ ಚಮತ್ಕಾರ?
ಒಂದೆಡೆ ಮಳೆಯ ಸುರಿಸುತ ಪನ್ನೀರ ಸಿಂಚನ
ಮತ್ತೊಂದೆಡೆ ಎಳೆದಿದೆ ಬಣ್ಣದಾ ಬಿಲ್ಲು, ಒಹ್ ರೋಮಾಂಚನ!
ಖುಷಿ ಕೊಡಲೆಂದೋ ಏನೋ, ಬಿಲ್ಲ ಮೇಲೆ ಮಗದೊಂದು ಬಿಲ್ಲು
ಇದ ನೋಡಲು, ನನ್ನದೆಯು ಅನ್ನದೇನು ಝಲ್ಲು!
ನಿನ್ನಲ್ಲಿ ಅದೇನು ಮೋಡಿಯೋ ಕಾಣೆ
ಸಾವಿರ ಕಣ್ಣ ನವಿಲು ಗರಿ ಬಿಚ್ಚಿ ಕುಣಿಯುವುದು ಕೋಣೆ ಕೋಣೆ
ಈಗಿನದು ಮರು ಕ್ಷಣಕಿಲ್ಲ, ಮತ್ತೆ ಕಾಣುವುದಿಲ್ಲ.
ಬೆಳ್ಳಿ ಮೋಡ- ಕೋಲ್ಮಿಂಚು ನಿನ್ನ ಅಲಂಕರಿಸುವುದಲ್ಲ!
ಯಾರು ಹಿಡಿದಿರುವರೋ ಕುಂಚ
ಸೃಷ್ಟಿಯಾಗಿದೆ ವಿಸ್ಮಯ ಪ್ರಪಂಚ
ನಿರಂತರವಾಗಿ ಹರಿದಿದೆ ಕಲಾಪಾಕ
ನೋಡುತ್ತಲೇ ದಕ್ಕುವುದೆನಗೆ ನಿತ್ಯ ನಾಕ!!
-ಶ್ರೀನಿವಾಸ್, ೪-ಅಕ್ಟೋಬರ್-೨೦೦೭
Subscribe to:
Posts (Atom)