Tuesday, September 30, 2008

ಕುಲ ಕುಲ ಕುಲವೆಂದು ಹೊಡೆದಾಡದಿರಿ...

'ಕುಲ ಕುಲ ಕುಲವೆಂದು ಹೊಡೆದಾಡದಿರಿ' ಅಂತ ಕನಕದಾಸರು ಹೇಳಿದ್ದು
ಆಗಾಗ ಮಹತ್ವಕ್ಕೆ ಬರುವುದು ಶೋಚನೀಯ...
ಮತ್ತೊಮ್ಮೆ ನಮ್ಮ ದಾಸರುಗಳು ಏನು ಹೇಳಿರುವರೆಂದು ನೋಡೋಣ...





ಇದೇ ರೀತಿ ನಮ್ಮ ಪುರಂದರ ದಾಸರು ಈ ರೀತಿ ಅರಿಕೆ ಮಾಡಿಕೊಂಡಿದ್ದಾರೆ...

ಆವ ಕುಲವಾದರೇನು ಆವನಾದರೇನು ಆತ್ಮ
ಭಾವವರಿತ ಮೇಲೆ || ಪಲ್ಲವಿ ||

ಹಸಿ ಕಬ್ಬು ಡೊಂಕಿರಲು ಅದರ
ರಸ ತಾನು ಡೊಂಕೇನೊ
ವಿಷಯಾಸೆಗಳ ಬಿಟ್ಟು
ಹಸನಾದ ಗುರುಭಕ್ತಿ ಮಾಡೋ || ೧ ||

ನಾನಾ ವರ್ಣದ ಆಕಳು ಅದು
ನಾನಾ ವರ್ಣದ ಕ್ಷೀರವೇನೋ
ಹೀನ ಕರ್ಮಗಳನ್ನು ಬಿಟ್ಟು ಹಿಗ್ಗಿ
ಜ್ಞಾನ ಒಲಿಸಿರೋ || ೨ ||

ಕುಲದ ಮೇಲೆ ಹೋಗಬೇಡ ಮನುಜಾ
ಕುಲವಿಲ್ಲ ಜ್ಞಾನಿಗಳಿಗೆ
ವರದ ಪುರಂದರವಿಠಲನ ಪಾದವ
ಸೇರಿ ಮುಕ್ತನಾಗೋ || ೩ ||

ಇದೇ ರೀತಿ, ಎಲ್ಲರೂ ಒಗ್ಗೂಡಿ ಬೆಳೆಯೋಣ, ನಲಿಯೋಣ , ಏನಂತೀರಿ? :)


--ಶ್ರೀ

No comments: