Sunday, December 23, 2007

ಹೇಳೇ ಗೆಳತಿ???

ನನ್ನ
ಹೃದಯವ
ನೀ ಕದ್ದೆ!
ನಿನ್ನ
ಹೃದಯವ
ಕದಿಯಲು
ಬಿಡಲೊಲ್ಲೆ!
ಹೃದಯವಿಲ್ಲದೆ
ಹೇಗೆ ಬದುಕಿರಲಿ
ಹೇಳೇ ಗೆಳತಿ...???

(೧೯-ಡಿಸೆಂಬರ್-೨೦೦೭)

Wednesday, December 5, 2007

ಓ ನಲ್ಲ...

ಎಲ್ಲಿ ಹೋದೆಯೋ, ಓ ನನ್ನ ನಲ್ಲ...!
ನೀನಿಲ್ಲದೇ, ಸೊರಗಿದೆ ನನ್ನ ಗಲ್ಲ...

ಹೋಗಿರುವೆ ಎತ್ತ?
ಕದ್ದು ನನ್ನಯ ಚಿತ್ತ...

ಬೇಗ ಬಾರೋ ನನ್ನಿನಿಯ,
ನನ್ನ ಗುಂಡಿಗೆಯೊಡೆಯ...

ಸೊರಗಿ ಸಾಯುತ್ತಿದೆ ನನ್ನ ಗಲ್ಲ
ಬಾ...ಮತ್ತೆ ಉಣಿಸೆನಗೆ, ಬೆಲ್ಲ,
ಮುತ್ತ ಸವಿ ಬೆಲ್ಲ...

- ಗೀಚಿದ್ದು ಡಿಸೆಂಬರ್ ೫, ೨೦೦೦೭

Thursday, November 29, 2007

ಹತ್ತು ಹತ್ತು ಇಪ್ಪತ್ತು...

ನಾವು ಚಿಕ್ಕವರಾಗಿದ್ದಾಗ ಹೀಗೊಂದು ಹಾಡು ಕಲಿಸಿದ್ರು...
ಮಕ್ಕಳಿಗೆ ಕಲಿಸಲು ಉಪಯೋಗ ಆಗುತ್ತೆ.
ಮರೆತು ಹೋಗುವುದಕ್ಕೆ ಮುಂಚೆ ಇಲ್ಲಿ ಹಾಕೋಣ ಅಂತ....

--------~ *~ ---------

ಹತ್ತು ಹತ್ತು ಇಪ್ಪತ್ತು
ತೋಟಕೆ ಹೋದನು ಸಂಪತ್ತು

ಇಪ್ಪತ್ತು ಹತ್ತು ಮೂವತ್ತು
ತೋಟದಿ ಮಾವಿನ ಮರವಿತ್ತು

ಮೂವತ್ತು ಹತ್ತು ನಲವತ್ತು
ಮಾವಿನ ಮರದಲಿ ಕಾಯಿತ್ತು

ನಲವತ್ತು ಹತ್ತು ಐವತ್ತು
ಮಾವನು ಕಂಡನು ಸಂಪತ್ತು

ಐವತ್ತು ಹತ್ತು ಅರವತ್ತು
ಸಂಪತ್ತು ಕೈಲಿ ಕಲ್ಲಿತ್ತು

ಅರವತ್ತು ಹತ್ತು ಎಪ್ಪತ್ತು
ಕಲ್ಲನು ಬೀರಿದ ಸಂಪತ್ತು

ಎಪ್ಪತ್ತು ಹತ್ತು ಎಂಬತ್ತು
ಮಾವಿನ ಹಣ್ಣು ಉದುರಿತ್ತು

ಎಂಬತ್ತು ಹತ್ತು ತೊಂಬತ್ತು
ಮಾಲಿಯ ಕಂಡನು ಸಂಪತ್ತು

ತೊಂಬತ್ತು ಹತ್ತು ನೂರು
ಓಡಿ ಮನೆಯ ಸೇರು

Monday, October 8, 2007

ರಾಮನಿಲ್ಲವೇ?? ಇಲ್ಲ ಬಿಡಿ...

ರಾಮನಿಲ್ಲವೇ?? ಇಲ್ಲ ಬಿಡಿ...

ರಾಮನಿಲ್ಲವೇ??
ಇಲ್ಲ, ಬಿಡಿ...

ದೇವರೇ ಇಲ್ಲವೇ??
ಇಲ್ಲ, ಬಿಡಿ...

ಆದರೆ...

ಜಲ ಪ್ರಳಯಕೆ
ಎಡೆ ಮಾಡಬೇಡಿ...

ಮೀನುಗಾರರ
ಹೊಟ್ಟೆಯನು ಹೊಡಿಬೇಡಿ...

ಜನರ ಹಣವನು
ಪೋಲು ಮಾಡಬೇಡಿ...

ದೇಶದ ಭದ್ರತೆಗೆ
ಧಕ್ಕೆ ತರಬೇಡಿ...

ಹವಳಗಳ, ಮೃದ್ವಂಗಿಗಳ
ಮರಣ ಮೃದಂಗ ಬಾರಿಸಬೇಡಿ...

ಥೋರಿಯಂ ನಿಕ್ಷೇಪವನು
ನಾಶ ಮಾಡಬೇಡಿ...

ನೀಚ ರಾಜಕಾರಣಕೆ
ಧರ್ಮ ಬಳಸಬೇಡಿ...

ರಾಮನಿಲ್ಲ ಬಿಡಿ...
ರಾಮನ ಹೆಸರಲ್ಲಿ ದೇಶದ ನಿರ್ನಾಮ ಮಾಡಬೇಡಿ...

(೮-ಅಕ್ಟೋಬರ್-೨೦೦೭)

Friday, October 5, 2007

ಮುಗಿಲು

ಮುಗಿಲು

ಬಾನು-ಆಗಸ-ಮುಗಿಲು
ನಿನಗಿದೆ ಹೆಸರಲೂ ವಿವಿಧತೆ, ನಿನ್ನ ಗುಣದಂತೆ...
ಯಾರು ಬಣ್ಣ ತುಂಬುವರೋ ನಿನಗೆ
ನಸು ಕೆಂಪು-ತುಸು ಹಳದಿ-ತಿಳಿ ನೀಲಿ
ರಾತ್ರಿಯಾಗಲು ನೀನಾಗುವೆ, ಬೆಳ್ಳಿ ಚುಕ್ಕಿಯ ರಂಗೋಲಿ...

ಕ್ಷಣ ಕ್ಷಣವು ಹೊಸ ರಂಗು
ಅದೇನು ಚತುರ ಕಲೆ! ಸದಾ ಮಾಡುವೆ ದಂಗು!

ದಿನ ದಿನವು ಬಗೆ ಬಗೆಯ ಚಿತ್ತಾರ
ಯಾರದಿದು ಅದ್ಭುತ ಚಮತ್ಕಾರ?

ಒಂದೆಡೆ ಮಳೆಯ ಸುರಿಸುತ ಪನ್ನೀರ ಸಿಂಚನ
ಮತ್ತೊಂದೆಡೆ ಎಳೆದಿದೆ ಬಣ್ಣದಾ ಬಿಲ್ಲು, ಒಹ್ ರೋಮಾಂಚನ!

ಖುಷಿ ಕೊಡಲೆಂದೋ ಏನೋ, ಬಿಲ್ಲ ಮೇಲೆ ಮಗದೊಂದು ಬಿಲ್ಲು
ಇದ ನೋಡಲು, ನನ್ನದೆಯು ಅನ್ನದೇನು ಝಲ್ಲು!

ನಿನ್ನಲ್ಲಿ ಅದೇನು ಮೋಡಿಯೋ ಕಾಣೆ
ಸಾವಿರ ಕಣ್ಣ ನವಿಲು ಗರಿ ಬಿಚ್ಚಿ ಕುಣಿಯುವುದು ಕೋಣೆ ಕೋಣೆ

ಈಗಿನದು ಮರು ಕ್ಷಣಕಿಲ್ಲ, ಮತ್ತೆ ಕಾಣುವುದಿಲ್ಲ.
ಬೆಳ್ಳಿ ಮೋಡ- ಕೋಲ್ಮಿಂಚು ನಿನ್ನ ಅಲಂಕರಿಸುವುದಲ್ಲ!

ಯಾರು ಹಿಡಿದಿರುವರೋ ಕುಂಚ
ಸೃಷ್ಟಿಯಾಗಿದೆ ವಿಸ್ಮಯ ಪ್ರಪಂಚ

ನಿರಂತರವಾಗಿ ಹರಿದಿದೆ ಕಲಾಪಾಕ
ನೋಡುತ್ತಲೇ ದಕ್ಕುವುದೆನಗೆ ನಿತ್ಯ ನಾಕ!!

-ಶ್ರೀನಿವಾಸ್, ೪-ಅಕ್ಟೋಬರ್-೨೦೦೭

Friday, September 28, 2007

Rama or Krishna - are they Gods after all??

Rama or Krishna - are they Gods after all??

Answer might be yes or no.
I have discussed similar topics at length with various people for long and I have bought their views. Thought of sharing it.

OK let us keep aside Rama/Krishna/ Vishnu etc...

Is Saibaba (Shirdi or Puttaparthi) God or Godman??
Many of us believe it and many don't.
But over the past few generations, you can see Saibaba temples are built and followers still exist.
Saibaba might have been an "ordinary" man with great thoughts/ethics and people appreciated it.
And at later stages after he died, Saibaba got promoted to Godman/God status.

Same case for Ramakrishna Paramahamsa or Ramana Maharshee etc.
There have been huge followers of Ramakrishna Paramahamsa and Sharadadevi etc.
(Though right now, it is fading away.)

Similarly Rama or Krishna might have been the greatest Emperors of India who did more right things than wrongs.
Hence there might have been huge number of people who started following/promoting them to Godman/God status. Eventually temples might have been built for them.

If you buy this argument, then there should be evidence for Rama's/Krishna's existence as well.
But!!! You might not find the proof of their existence as such because of various factors.
1> the time period is way too old
2> Number of kings who have invaded India after Rama-Krishna generations.
3> How invaders took away the valuable things from India back to their home.
4> How India/Indians have preserved its monuments (especially in last few centuries)

So it might be very difficult to prove the existence of person. But when you overall look at Ramayana/Mahabharata and relate all the things depicted, you will indeed see that, events did take place.

I think it is Mahabharata, (if my memory serves me right), Vyasa has mentioned dates in both Lunar and Solar calendars.
And these dates can be(have been) converted to Gregorian Calendar.
(If I am right, Ramayana mentions the dates only in Lunar calendars, and hence dating backwards is difficult)

In Mahabharata, since the dates can be tracked back and the incidence of Jayadhratha (where Krishna covers the sun), which is now touted as complete Solar Eclipse has also been figured out.

There have been other things such as names of cities....

For eg., Khandahar -- is nothing but Gandhara of Shakuni.
Name is almost intact for ages now.
Ayodhya/Mathura/ Dwaraka - the names of these places haven't changed at all.
In fact Gandhara is also depicted in Ramayana.
I am not sure how many know that Kaikeyi was from Gandhara.
(When Dasharatha was in death bed, Bharatha was in Gandhara (now Afghanistan) as per Ramayana.)

There are other things mentioned in Mahabharata like King Shalya was from other side of Himalayas(may be a Chinese/Mangolean)
And Mahabharata clearly specifies that, Shalya and his people were talking a different language/dialect too.

For instance in Ramayana, when you look at the depiction about Sri Lanka and its nature, you might really wonder, did Valmiki indeed travel to Lanka and see how the environment was?
But thing to note is, Valmiki's depiction about Lanka is very close to what in reality is.
Depiction of Kishkinda where lot of stones/caves were there, is very close to the reality (now Bellary district, Karnataka).

Though these things might not prove anything about actual incidence and can be true in any story too, it is hard to believe that, one particular author roamed entire 'Bharatha Khanda' to write one single story.

Imagine a person traveling from Afghanistan to Himalayas to Sri Lanka to write this single novel? Hard to believe it.

So, I believe when you over all look into it, the incidence might have take place irrespective of whether Rama is God or not.

It is important to observe and imbibe the lessons from these Epics instead of figuring out Rama/Krisha are gods or not or whether Ramayana is just a story or actual incidence which took place.

=====================================================================

After thought:
If Pushpaka Vimana indeed existed, Valmiki might have travelled across the continent and written beautiful story of Rama ;)

Update
======

I forgot to mention that, Rama's birth has been mentioned in both Lunar and Solar calenders.
(Chaitra Maasa Shukla Navami as per Lunar Calendar and Punarvasu Star, Vrushchika Lagna as per Solar Calendar)
And Ramayana also provides Kundali (Horoscope) of Rama, which depicts the planetary positions at that point of time.
Hence this date has been traced back.
Based on this info one of the researches said,
Rama was born on Janaury 10th, 4039 BC and other research said January 10th, 5114 BC.

Wednesday, September 19, 2007

San Jose Flyover




Pic taken from 4-seater Cessna plane...
I was lucky to get the timing right for this shot!

Tuesday, September 18, 2007

ನೆಚ್ಚಿನ ಅಡವಿ ನಾಗೇನಹಳ್ಳಿ...

ದಾರಿಯಲ್ಲಿ ಸಿಗುವ ತೊಂಡೇಬಾವಿಯ ಬಳಿ ಒಂದು ಕೆರೆ...


ಅಮ್ಮನ ಊರಾದ ಅಡವಿ ನಾಗೇನಹಳ್ಳಿ, ಮಧುಗಿರಿ ತಾಲ್ಲೂಕಿನ ಒಂದು ಕುಗ್ರಾಮ.
ತೋಟದ ಕಡೆಗೆ ಹೋದಾಗ ಕ್ಲಿಕ್ಕಿಸಿದ ಒಂದಷ್ಟು ಕ್ಷಣಗಳು...






ಮತ್ತೆ ಬುದ್ಧಿ ಕಲಿಸಿದ ಕಾಗೆ; 'ಸರ್ವೈವಲ್ ಒಫ್ ದ ಫಿಟ್ಟೆಸ್ಟ್'

ಬೆಂಗಳೂರು ಕಾಂಕ್ರೀಟ್ ಕಾಡಾಗುತಿದ್ದರೂ ಕಾಗೆಗಳು ಮಾತ್ರ ಹೆಚ್ಚೇ ಆಗಿವೆ ಎಂಬುದು ನನ್ನ ಅನಿಸಿಕೆ. ಎಲ್ಲೆಡೆ ಮರಗಳು ಉರುಳುತ್ತಿದ್ದರೂ ಕಾಗೆಗಳು ಹೇಗಪ್ಪ ಉಳಿದಿವೆ ಎಂಬುದು ತಲೆ ಕೆರೆದುಕೊಳ್ಳುವಂಥಹಾ ವಿಷಯವೇ!

ಇತ್ತೀಚಿಗೆ ಮನೆ-ಕಟ್ಟುವವರ(ಬಾರ್-ಬೆಂಡರ್ಸ್, ಮೇಸ್ತ್ರಿ) ಬಳಿ ಮಾತಾಡುತ್ತಿದ್ದಾಗ ತಿಳಿದು ಬಂದಿದ್ದೇನೆಂದರೆ, ಕಾಗೆಗಳು ಮಾನವರು ಮನೆ ಕಟ್ಟಲು ಬಳಸುವ ಬೈಂಡಿಂಗ್-ವೈರ್ ಗಳಿಂದ ಗೂಡುಗಳನ್ನು ಕಟ್ಟಲು ಕಲಿತಿವೆ ಎಂದು...
ಈ ಕಾರಣಕ್ಕೆ ಮೇಸ್ತ್ರಿ ಬೈಂಡಿಂಗ್-ವೈರ್ ಗಳನ್ನು ಕಾಗೆಗಳಿಗೆ ಸಿಗದಂತೆ ಬಚ್ಚಿಡುತಿದ್ದ...!

ಮೇಸ್ತ್ರಿಯ ಜೊತೆ ಮಾತಾಡುವ ಎರಡು ದಿನಗಳ ಮುಂಚೆಯಷ್ಟೆ ಮರದ ಕಡ್ಡಿಯ ಬದಲು ವೈರ್ ಹಿಡಿದ ಕಾಗೆಯ ಮೂರ್ಖತನಕ್ಕೆ ನಾನು ಮರುಗಿದ್ದೆ. ಕಾಗೆಯ ಬುದ್ಧಿಶಕ್ತಿಯನ್ನು ಕಡೆಗಣಿಸಿದ ನಾನು ಮೂರ್ಖನಾಗಿದ್ದೆ ಅಷ್ಟೆ...!

'ಸರ್ವೈವಲ್ ಒಫ್ ದ ಫಿಟ್ಟೆಸ್ಟ್' ಸಿದ್ಧಾಂತಕ್ಕೆ ಕಣ್ಣೆದುರೇ ಕಂಡ ಉದಾಹರಣೆ.

ಸುತ್ತ-ಮುತ್ತಲ ಪ್ರಕೃತಿಗೆ ತಕ್ಕಂತೆ ತಮ್ಮ ಪ್ರಕೃತಿಯನ್ನು ಬದಲಿಸದರೆ ಮಾತ್ರವಲ್ಲವೆ ನಾವು ಉಳಿಯುವುದು? ಜಾಣ ಕಾಗೆಗಳು ತಮ್ಮ ಬದುಕನ್ನು ಸುರಕ್ಷಿತಗೊಳಿಸುವುದನ್ನು ಆಗಲೇ ಕಲಿತಿವೆ...ನೀವು ಕಲಿತಿರುವಿರಾ??

-ಶ್ರೀನಿವಾಸ್, ೧೮ ಸೆಪ್ಟೆಂಬರ್ ೨೦೦೭

(ಕಾಗೆಯು ನನಗೆ ಕಲಿಸಿದ ಮೊದಲ ಪಾಠದ ಬಗ್ಗೆ ಕುತೂಹಲವಿದ್ದಲ್ಲಿ ಓದಿ:
ಜಂಬದ ಕಾಗೆ )

Monday, August 27, 2007

Aadityaaya namo namaha!! (ಆದಿತ್ಯಾಯ ನಮೋಂನಮಃ...)

Sun rises on Bhagirathi peak



Sun rises in Tirupati
(I liked the shades of sky in this pic)



Konark Sun Temple




Sun going down behind Garudaadri



Sun set close to en route to Bangalore, somewhere close to Chandragiri


Sunset on the way to Kedar



Sunset near Chandra bhaga beach, Orissa


(Dont tell me that you are wondering where is the sea? :) )

Sunset at Panambur Beach, Karnataka



Panambur has a harbor...




One more from Panambur...




Malpe beach, Karnataka

Malpe beach again...

Monday, July 2, 2007

ಹೂವು ಚೆಲುವೆಲ್ಲ ತಂದೆಂದಿತು...



ತಿರುಪತಿ ಬೆಟ್ಟ ಹತ್ತುವಾಗ ಕಂಡ ಸುಂದರ ಹೂವು...

Wednesday, June 27, 2007

ಲಾಲಿ

ಪ್ರತಿ ದಿನ, ನನ್ನಕ್ಕನ ಮಗ ಪ್ರದ್ಯುಮ್ನ, ಅಕ್ಕನನ್ನು ಗೋಳು ಹೊಯ್ದುಕೊಳ್ಳುವುದೇ ಈ ಲಾಲಿಗೆ ಸ್ಫೂರ್ತಿ!
ಮಧ್ಯಮಾವತಿ ರಾಗವನ್ನು ಬಳಸಿದ್ದೇನೆ...


ಲಾಲಿ

ಬಾ ಬಾರೋ ಚಿನ್ನ, ಇನ್ನೆಷ್ಟು ಆಡುವೇ?
ಬೇಡವೆ ಆಟಕೆ ಪುರುಸೊತ್ತು?
ಬೇಡವೆ ಆಟಕೆ ಪುರುಸೊತ್ತು, ನನ್ನ ಚಿನ್ನ?
ನಿದ್ದೆ ಮಾಡುವ ಹೊತ್ತು ಈಗಾಯ್ತು...||

ಬೆಳಗಿಂದ ನೀನು ಎಷ್ಟೊಂದು ಆಡಿದೆ,
ದಣಿವಿಲ್ಲವೇನೋ ನನ್ನ ರಾಜ
ದಣಿದಿಲ್ಲವೇನೋ ನನ್ನ ಮುದ್ದು ರಾಜಣ್ಣ
ನಿದ್ದೆ ಮಾಡುವ ಹೊತ್ತು ಈಗಾಯ್ತು...||

ನಾಳೆ ಆಡುವೆಯಂತೆ, ತೀಟೆ ಮಾಡುವೆಯಂತೆ,
ನಿದ್ದೆಯ ಮಾಡೋ ಬಂಗಾರ
ನಿದ್ದೆಯ ಮಾಡೋ ಬಂಗಾರ - ದಮ್ಮಯ್ಯ
ಮಲಗುವ ಹೊತ್ತು ಈಗಾಯ್ತು...||

ಹಾಲು ಕೆನ್ನೆಯ ರಾಜ, ಕಪ್ಪು ಕಂಗಳ ತೇಜ
ತೂಗುವೆ ಬಾರೋ ನನ್ನ ಪುಟ್ಟ
ತೂಗುವೆ ಬಾರೋ ನನ್ನ ಮುದ್ದು ಪುಟ್ಟಣ್ಣ
ಮಲಗುವ ಹೊತ್ತು ಈಗಾಯ್ತು...||

ಜೋಗುಳವಾ ಹಾಡುವೆನೋ, ನಿನ್ನ ಮುದ್ದಾಡುವೆನೋ
ಬಿಗಿದಪ್ಪಿ ಹಾಡುವೆನೋ, ನಿನ್ನ ಮುದ್ದಾಡುವೆನೋ
ಮಡಿಲಿಗೆ ಬಾರೋ ತುಂಟಣ್ಣ
ಮಡಿಲಿಗೆ ಬಾರೋ ತುಂಟಣ್ಣ - ನನ್ನೊಡೆಯ
ಮಲಗುವ ಹೊತ್ತು ಈಗಾಯ್ತು...
ನಿದ್ದೆ ಮಾಡುವ ಹೊತ್ತು ಈಗಾಯ್ತು...
ಮಲಗಲು ಬಾರೋ ತುಸು ಹೊತ್ತು...
ಮಲಗುವ ಹೊತ್ತು ಈಗಾಯ್ತು...||

(೨೫-ಜೂನ್-೨೦೦೭)

Tuesday, June 26, 2007

ಪುಟಾಣಿಯ ಹುಟ್ಟು...

ಪುಟಾಣಿಯ ಹುಟ್ಟು...

ನನ್ನ ಸ್ನೇಹಿತ ವಾಸು, ಅಂದು (೨೪-ಏಪ್ರಿಲ್-೨೦೦೭) ರಾತ್ರಿ ಹದಿನೊಂದಕ್ಕೆ ರಿಂಗಿಸಿದ...
"ನನಗೆ ಒಂದು ಹಾಡನ್ನು ಬರೆದು ಕೊಡು. ನಾನು ಸಂಗೀತವನ್ನು ನೀಡಿದ್ದೇನೆ, ನೀನು ಅದಕ್ಕೆ ತಕ್ಕಂತೆ ಸಾಹಿತ್ಯ ಬರೆಯಬೇಕು, ಇದು ಮೈಸೂರಿನಲ್ಲಿ ಮಕ್ಕಳಿಗೋಸ್ಕರ ನಡೆಯುತ್ತಿರುವ ಕಚೇರಿಗಾಗಿ" ಎಂದು!
ನನಗೆ ಕಾಲವಕಾಶ ಇದ್ದದ್ದು ತೀರ ಕಡಿಮೆ, ಕಚೇರಿ ಇದ್ದದ್ದು ೨೯-ಏಪ್ರಿಲ್-೨೦೦೭ ಅಂದರೆ, ನನಗೆ ಸಮಯ ಇದ್ದದ್ದು ಹೆಚ್ಚೆಂದರೆ, ಎರಡು ದಿನ!
ವಾಸು, ಹೊಸದಾದ ಹಾಡನ್ನು ಪ್ರಾಕ್ಟೀಸ್ ಮಾಡಬೇಕಲ್ಲ!
ಆ ವಾರವೋ, ನನಗೆ ಆಫ಼ೀಸಿನ ಕೆಲಸದ ಒತ್ತಡವು ತುಂಬಾ ಹೆಚ್ಚಿತ್ತು...
ನಾನು ವಾಸುವಿಗೆ, "ಪ್ರಯತ್ನ ಮಾಡುತ್ತೇನೆ, ನನ್ನನ್ನು ನಂಬಬೇಡ, ಬೇರೆ ಹಾಡುಗಳ ತಯಾರಿ ನಡೆಸು" ಎಂದೆ.
ಆದರೂ ವಾಸು ಬಿಡದೆ, "ನಾನು ಫೋನ್ ನಲ್ಲಿ ಸಂಗೀತ ಹೇಳುತ್ತೇನೆ, ರೆಕೋರ್ಡ್ ಮಾಡಿಕೋ" ಎಂದ.
ನನ್ನ ಮೊಬೈಲ್ನಲ್ಲೇ ರೆಕೋರ್ಡಿಂಗ್ ಮಾಡಿಕೊಂಡೆ, ಸಂಗೀತ ಬಹಳ ಸೊಗಸಾಗಿತ್ತು.
ಹಾಡು ಮಕ್ಕಳಿಗಾಗಿ ಮತ್ತು ದೇಶಭಕ್ತಿಯ ಬಗ್ಗೆ ಇರಬೇಕೆಂಬ ಕಟ್ಟಪಣೆ ಮಾಡಿ, ನನ್ನನ್ನು ಇನ್ನಷ್ಟು ಕಷ್ಟಕ್ಕೆ ಸಿಲುಕಿಸಿದ್ದ!!
ಆ ರಾತ್ರಿ ನನಗೆ ನಿದ್ದೆ ಬರಲಿಲ್ಲ...ಅಂಡರ್-ಪ್ರಿವಿಲೇಜ್ ಮಕ್ಕಳಿಗಾಗಿ ಎಂಬ ಸೆಂಟಿಮೆಂಟಲ್ ಬ್ಲಾಕ್ ಮೈಲ್ ಬೇರೆ! :)
ಅಂದೇ ರಾತ್ರಿ ಕುಳಿತು, ಈ ಪ್ರಯತ್ನ ಮಾಡಿದೆ.

ವಾಸು ಅದ್ಭುತವಾಗಿ ಹಂಸನಾದ ರಾಗದಲ್ಲಿ ಸಂಯೋಜಿಸಿದ್ದಾನೆೆ...ಸಾಧ್ಯವಾದರೆ, ಆಡಿಯೋ ಕ್ಲಿಪ್ ಸೇರಿಸುತ್ತೇನೆ.
ಈ ಪ್ರಯತ್ನ, ವಾಸುವಿಗೆ ಸಂತೋಷ ತಂದಿದೆ, ಎಂಬುದು ಸಮಾಧಾನಕರ ಸಂಗತಿ.
ನೀವು ನಿಮ್ಮ ಅಭಿಪ್ರಾಯಗಳನ್ನು, ದಯವಿಟ್ಟು ತಿಳಿಸಿ...

-------*-------

ಇಲ್ಲಿ ಕೇಳೋ ಪುಟಾಣಿ

ಇಲ್ಲಿ ಕೇಳೋ ಪುಟಾಣಿ....ನಡೆಸು ನೀನು ದೇಶದ ದೋಣಿ
ಇಲ್ಲಿ ಕೇಳೋ ಪುಟಾಣಿ....ನಡೆಸಬೇಕು ದೇಶದ ದೋಣಿ

ಇಲ್ಲಿ ಕೇಳೋ ಚಿನ್ನಾರಿ...ದೇಶಕೆ ತೋರು ನೀ ದಾರಿ
ನನ್ನ ಮಾತು ಕೇಳು ಚಿನ್ನಾರಿ...ಭವ್ಯತೆಗೆ ಸಾಗಲಿ ದಾರಿ
ಇಲ್ಲಿ ಕೇಳೋ ಚಿನ್ನಾರಿ...ಭವ್ಯತೆಗೆ ನಡೆಯಲಿ ದಾರಿ

ಹೊಸ ಶಕ್ತಿಯನ್ನು ತುಂಬು ಬಾ....
ನವ ಯುಕ್ತಿಯಲ್ಲಿ ನಡೆಸು ಬಾ...
ಶಕ್ತಿಯನ್ನು ತುಂಬು ಬಾ, ನವ ಯುಕ್ತಿಯಲ್ಲಿ ನಡೆಸು ಬಾ
ನಿನ್ನಿಂದಲೇ ದೇಶೋಧ್ಧಾರ...ಭಾರತವು ಅರಳಲು ಸಾಧ್ಯ...
ನಿನ್ನಿಂದಲೇ ದೇಶದುಧ್ಧಾರಾ...ಭಾರತವು ಬೆಳಯಲು ಸಾಧ್ಯ...

ಇಲ್ಲಿ ಕೇಳೋ ಪುಟಾಣಿ....ಇಲ್ಲಿ ಕೇಳೋ ಪುಟಾಣಿ....
ನಿನ್ನಲ್ಲಿದೆ ನಮ್ಮ ಭವಿಷ್ಯ..
ಪುಟ್ಟ ಕೈಯಲ್ಲಿದೆ ನಮ್ಮ ಭವಿಷ್ಯ...
ಭಾರತವ ನಗಿಸಲು ಸಾಧ್ಯ...
ಭಾರತವ ಬೆಳಗಲು ಸಾಧ್ಯ...

ತುಂಬು ನೀ ನವ ಚೇತನ....
ತುಂಬು ನೀ ಹೊಸ ಹುರುಪನ...
ಆಗಲಿಂದು ನವ ನಿರ್ಮಾಣ
ಭಾರತದ ನವ ನಿರ್ಮಾಣ...

ಇಲ್ಲಿ ಕೇಳೋ ಪುಟಾಣಿ...ನಡೆಸು ನೀನು ದೇಶದ ದೋಣಿ...
ಹಿಡಿ ನೀನು ಚುಕ್ಕಾಣಿ...ನಡೆಸು ನೀನು ದೇಶದ ದೋಣಿ...
ನಡೆಸು ನೀನು ದೇಶದ ದೋಣಿ...

ಅಮ್ಮ

ಅಮ್ಮ

ಇರಲು ಅಮ್ಮನ ಮಡಿಲಲ್ಲಿ
ಸಿಗುವುದೆನಗೆ ನೆಮ್ಮದಿ, ಸುಖ, ಶಾಂತಿ, ಸಂತೋಷ...
ಹೊಡಿ ವೈಕುಂಠಕ್ಕೆ ಗೋಲಿ,
ಅಮ್ಮನ ಅಡಿಯಲ್ಲೇ ದೊರಕುವುದು ಎನಗೆ ಪರಮ ಮೋಕ್ಷ...

(೨೦-ಏಪ್ರಿಲ್-೨೦೦೭)

ಕಾವೇರಿ

ಕಾವೇರಿ

ಕಾವೇರಿ ನಮ್ಮದೆಂದು ನಡೆದಿಹುದು ಘರ್ಷಣೆ
ಬಗೆಹರಿವುದೆಂದೀ ಸಮಸ್ಯೆ? ಶತಮಾನದ ಬವಣೆ

ಕಾವೇರಿ ನಮ್ಮ ತಾಯಿ - ಜನ ಜೀವನದ ನಾಡಿ
ರಾಜಕಾರಣಿಗಳ ಕೈಯಲ್ಲಿ, ಆಗಿರುವಳು ರಾಡಿ

ನೀಚರಲ್ಲಿ ನೀಚರಿವರು - ಇದುವೇ ರಾಜಕಾರಣ
ಕಿಚ್ಚ ಆರಿಸಲು ಬಿಡರು - ಕಿಚ್ಚೇ ಇವರ ಔತಣ

ಸ್ವಾರ್ಥಿಗಳ ಕೈಯ ಕೆಳಗೆ, ಸಾಯುತಿಹರು ರೈತರು
ಇವರ ನೆಮ್ಮದಿಯ ಪಣಕಿಟ್ಟು, ದುಡ್ಡ ಮಾಡುತಿಹರು

ತೀರರಿವರು ಬೆಂದು ಬಸವಳಿದ ಜನರ ದಾಹ
ಇವರ ಚಿಂತೆ ಏನಿದ್ದರೂ, ತಣಿಸಲು ಅಧಿಕಾರದಾ ಮೋಹ

ಏಳಿ! ಎದ್ದೇಳಿ ಜನರೇ! ಇವರಿಗೂ ತಿಳಿಯಬೇಕು ನಮ್ಮ ನೋವು
ತಿರುಗಿಬೀಳಬೇಕು ನಾವು! ಮುಟ್ಟಿಸಿರಿ ಇವರಿಗೂ ಕಷ್ಟದ ಕಾವು

ನಿಲ್ಲಿಸಿರಿ ವಂಚನೆ, ಕಿತ್ತಾಟ, ಇನ್ನೊಬ್ಬರಾ ಮೇಲಿನ ತಿರಸ್ಕಾರ
ಬೇಕೆಂದರೂ ನಾವು ಹೋಗಲಾದೀತೇನು ದೂರ?

ಏಕೆ, ಈ ಕುದಿವ ದ್ವೇಷ? ಹಂಚಿರೆಲ್ಲ ಅಕ್ಕರೆ
ನೆಲೆಸುವುದು ನೆಮ್ಮದಿ, ನಮ್ಮ ಬಾಳು ಸಕ್ಕರೆ

ನಮ್ಮ ರಾಜ್ಯ ಎಂದ ಮನವು ಕಿರಿಯದಾಯಿತಲ್ಲವೇ?
ಒಟ್ಟಾಗಿ ಕಲೆತು ನಾವು ಕಗ್ಗಂಟ ಬಿಡಿಸಬೇಕಲ್ಲವೇ?

ಇಬ್ಬರಿಗೂ ಬೇಕಾಗಿದೆ ಇನ್ನೊಬ್ಬರಾ ಆಸರೆ
ಕೂಡಿ ಬೆಳೆದರೆಂಥ ಚೆನ್ನ! ಸ್ವರ್ಗವೇ ನಮ್ಮ ಕೈ ಸೆರೆ!

(ಜನವರಿ-ಫ಼ೆಬ್ರುವರಿ-೨೦೦೭)

Tuesday, June 12, 2007

ಎಲ್ಲಿರುವೆ??????

ಎಲ್ಲಿರುವೆ?

ಬಹು ದಿನಗಳ ಆಸೆ, ಬರೆಯಲು ಮತ್ತೊಂದು ಕವಿತೆ
ಎಷ್ಟು ಪ್ರಯತ್ನಿಸಿದರೂ ಆಗದು - ನನ್ನಲ್ಲಿ ಶಬ್ದಗಳಾ ಕೊರತೆ?

ಹಿಡಿದೆ ಪೆನ್ನು-ಪೇಪರನ್ನು ಬರೆದೇ ತೀರುತ್ತೇನೆಂದು
ತಿಣುಕಿದೆ ಸಾಲೊಂದ ಬರೆಯಲು - ಕವಿತೆ ಮುಗಿಯುವುದೆಂದು?

ಎಷ್ಟು ಹುಡುಕಿದರೂ ಸಿಗದು ಪದಗಳೊಂದು ನೆಟ್ಟಗೆ
ಎಲ್ಲಿ ಹೋಯಿತೆನ್ನ ಸ್ಫೂರ್ತಿ? ಮನವಾಗಿದೆ ಕೊಟ್ಟಿಗೆ

ವಿಷಯಕೇನು ಕೊರತೆ ಇಲ್ಲ - ಮಾಡಿದೆ ಹಲವು ಯತ್ನ
ಆದರೂ ಸಿಗದು ಫಲ - ಕವಿತಾ ಯಜ್ಞಕ್ಕೆ ನೂರೆಂಟು ವಿಘ್ನ

ಹೊಳೆದ ಸಾಲು ಕಳೆದೇ ಹೋಯ್ತು - ಮತ್ತೆ ಸಿಲುಕದಾಯ್ತು
ಮತ್ತೆ ಮತ್ತೆ ವಿಫಲ ಯತ್ನ - ಆದೆ ಕಡೆಗೆ ಸುಸ್ತು

ಎನೋ....ಕಳೆದುಕೊಂಡ ಭಾವನೆ
ಮನದ ಹೊಯ್ದಾಟ - ಹೇಳಿಕೊಳ್ಳಲಾಗದ ಯಾತನೆ

ಅಳುಕು ತುಂಬಿಹುದು ಮನದಿ - ಅತೃಪ್ತಿಯ ಛಾಯೆ
ಓ ಕವಿತೆ! ಎಲ್ಲಿರುವೆ? ಏನಿದೀ ಮಾಯೆ??

ಅರ್ಧ ಬರೆದೆ - ಅಷ್ಟಕ್ಕೆ ಬಿಟ್ಟೆ - ಇಲ್ಲ ಬುದ್ಧಿಗೆ ಸ್ಥಿಮಿತ
ಹಿಂದೆಂದೂ ಆಗಿಲ್ಲ - ಇದು ಚೂರಿಯ ತಿವಿತ

ಸರ ಸರನೆ ಪದಗಳ ಜೋಡಣೆಯ ಮಾಡುತ್ತಿದ್ದೆ ನಾನೊಮ್ಮೆ
ಈಗ ನಾನಾಗಿರುವೆ ಮಧ್ಯ ದಾರಿಯಲ್ಲಿ ನಿಂತ ಎಮ್ಮೆ

ಮಸ್ತಕದ ಪುಸ್ತಕದಿ ಸಿಗದು ಪದಗಳೆನಗೆ - ಎಂಥಾ ವಿಪರ್ಯಾಸ
ಸಿಕ್ಕ ಪದಕೆ ಸಿಗದು ಅದಕೊಂದು ಪ್ರಾಸ

ಮಸೂರ ಹಿಡಿದರೂ ಸಿಗದು, ಮನವಾಗಿದೆ ಬಿಳಿಹಾಳೆ
ಏಕೆ ಹೀಗಾಯ್ತು?? ಇದೆಂಥಾ ಗೋಳೇ??

ಪದಗಳಾ ಚಿಲುಮೆ - ನನ್ನೊಲುಮೆಯ ಬುಗ್ಗೆ ಕಾಣದಾಗಿದೆ ಏಕೆ?
ಮನದ ಬಾವಿಯು ಇಂದು ಬತ್ತಿಹುದು ಏಕೆ?

ಮನಕೆ ಕವಿದಿದೆ ಮಸುಕು - ಎಲ್ಲವೂ ಮಂಕು
ಎಂದು ನಾ ಸರಿ ಹೋಗುವೆ? ಹಿಡಿದಿದೆ ಬುದ್ಧಿಗೆ ಸೋಂಕು

ಬರೆಯಲೇ ಬೇಕೆಂಬ ಹಟದ ಮುಳ್ಳು ಮನಕೆ ಚುಚ್ಚಿದೆ
ಮುಳ್ಳ ಒಗೆದು - ಗುಣ ಪಡಿಸುವ ಮುಲಾಮು ಇನ್ನೂ ಸಿಕ್ಕದೇ...

ಎಲ್ಲಿ ನೀನು ಅಡಗಿ ಕುಳಿತಿಹೆ? ನನ್ನ ಕೂಗು ಕೇಳದೇ?
ಆಟವೆಷ್ಟು ಆಡುತ್ತೀಯೇ? ಬೇಗ ಹೊರ ಬರಬಾರದೇ?

ಹೆಚ್ಚು ದಿನವಾದರೆ ಆಗುವುದು ಬುದ್ಧಿಗೆ ಭ್ರಮಣೆ
ಮುಖ ತೋರೇ, ನೀನು - ತೀರು ನನ್ನ ಬವಣೆ

ಯಾರಲ್ಲಿ ಹೇಳಲಿ ನಾನು, ನನ್ನ ವೇದನೆ - ಈ ನೋವನ್ನು ತಾಳೆನೇ
ಓಡೋಡಿ ಬಾ ಓ ನನ್ನ ಪ್ರಿಯತಮೆ, ನಿನ್ನ ಬಿಟ್ಟಿರಲಾರೆನೇ....

(೧೪,೧೫-ಫ಼ೆಬ್ರುವರಿ-೨೦೦೭)

ಈ ಕವಿತೆ ಪ್ರೇಮಿಗಳ ದಿನದಂದೆ ಬರೆದದ್ದು ಆಕಸ್ಮಿಕ :)

ಹಳ್ಳಿ ಹುಚ್ಚು

ಹಳ್ಳಿ ಹುಚ್ಚು

ಅಂದು ನಾ ಹೊರಟಿದ್ದೆ ಗಿಜಿ ಗಿಜಿ ರಸ್ತೆಯಲ್ಲಿ ಎಂದಿನಂತೆ
ನನಗೆ ತಿಕ್ಕಲೋ-ಪ್ರಪಂಚಕ್ಕೋ ತಿಳಿಯದಾಗಿತ್ತು

ಹಳ್ಳ ಗುಂಡಿಗಳ ಕಪ್ಪು ಟಾರಿನ ರಸ್ತೆಯೊಂದು
ಹಳ್ಳಿಯ ಮಣ್ಣ ಹಾದಿಯಂತೆ ಕಂಡಿತ್ತು ನನಗೆ ಅಂದು

ಚೀಲ ಹಿಡಿದು ಕಛೇರಿಗೆ ಹೊರಟ ಜನರು
ಗುದ್ದಲಿ-ಸನಿಕೆ ಹಿಡಿದ ರೈತರಂತಿದ್ದರು

ಬೇಕಾದ್ದಕ್ಕಿಂತ ಹೆಚ್ಚೇ ಅಲಂಕೃತಳೀಕೆ - ನೋಡಲು ರತಿ
ಕಂಡಳಂದು ಗಂಡನಿಗಾಗಿ ಬುತ್ತಿ ಹೊತ್ತ ಗರತಿ

ಶಾಲೆಗೆ ಹೊರಟ ಪುಟ್ಟ ಮಕ್ಕಳೆಲ್ಲಾ
ನಗುವ ಸೂರ್ಯಕಾಂತಿಯಂತೆ ಕಂಡರಲ್ಲಾ

ನಗರದ ಕೊಳಚೆ ನೀರಿನ ಕೊಚ್ಚೆ ಕೂಡ
ತಿಳಿನೀರ ಹೊಳೆಯಾಗಿತ್ತು - ಏನಿದೀ ಪವಾಡ!

ದ್ವಿಚಕ್ರಗಳು "ಪೋಂ" "ಪೋಂ" ಶಬ್ದ ಮಾಡುತಿದ್ದರೆ
ಕೇಳಿಸಿತ್ತೆನಗೆ ಹಸುವಿನ "ಅಂಬಾ" ಕರೆ

ಭರ್ರನೆ ಕಾರುಗಳು ಸುತ್ತ ಹೋಗುತಿರಲು
ಎತ್ತಿನ ಬಂಡಿಗಳಂತೆ ಭಾಸವಾಗಿತ್ತು - ನನಗೆ ಖಂಡಿತಾ ಐಲು

ಜನರನ್ನು ಹೊಟ್ಟೆಯಲ್ಲಿರಿಸಿಕೊಂಡು ಬಸ್ಸಲ್ಲಿ ನಿಂತಿತ್ತು
ಒಣ ಹುಲ್ಲ ಗುಡ್ಡದಂತೆ - ಬಣವೆಯಾಗಿ ಕಂಡಿತ್ತು


ವಾಹನಗಳ ದಟ್ಟಣೆ - ವಾಯು ಮಾಲಿನ್ಯ
ಗೋಧೂಳಿಯಂತೆ ಗೋಚರಿಸಿತ್ತು - ನಾನಾಗ ಧನ್ಯ

ಕಂಠಕೌಪೀನಧಾರಿ ಧಿಮಾಕಿನ ಠೊಣಪ
ಕಟ್ಟೆ ಮೇಲೆ ಕಂಡನೆನಗೆ ಶಾಲು ಹೊದ್ದ ಭೂಪ

ರಸ್ತೆಯಲಿ ನಡೆಯುತಿರಲು ಹಲವು ದೀಪದ ಕಂಬ
ಕಂಗೊಳಿಸಿತ್ತು ನನಗದು ಸಾಲ ತೆಂಗ ಬಿಂಬ

ಧೂಮಪಾನ ಮಾಡುತ ನಿಂತ ಒಬ್ಬ ಯುವಕ
ಹಳ್ಳಿ ಕಿಟ್ಟನಂತೆ ಕಂಡಾಗ - ನನಗೆ ಮೈ ನಡುಕ

ಹುಚ್ಚೇ ಹಿಡಿಯಿತೆಂದು ಹೋದೆ ವೈದ್ಯರ ಬಳಿಗೆ
ಅಲ್ಲೂ ನನಗೆ ದಕ್ಕಿತ್ತು ಅಳಲೆಕಾಯ ಗುಳಿಗೆ!!!

(ದಿನ: ೧೨-೨೫-೨೦೦೬)

Friday, May 4, 2007

ಸುಂದರ ನೆನಪು


ಸುಂದರ ನೆನಪು

ಇದಾಗಿ ಹದಿನೈದು ವರುಷಕ್ಕೂ ಹೆಚ್ಚು
ಮಾಸದು ಈ ಸುಂದರ ನೆನಪು - ಮನದಲ್ಲಿ ಪಡಿಯಚ್ಚು

ಹೊರಟಿದ್ದೆವು ನಾವು ಛುಕ್ಕು-ಭುಕ್ಕು ರೈಲಿನಲಿ
ನಾನು-ನನ್ನಕ್ಕ ಕುಳಿತಿದ್ದೆವು - ಇಣುಕುತಾ ಕಿಟಕಿಯಲಿ

ಕೀಟಲೇ ಮಾಡುತಾ ತುಂಟಾಟವಾಡುತಾ
ದಂಡೆತ್ತಿ ಹೊರೆಟೆವು ಉತ್ತರ ಭಾರತ!

ಸಾಗಿತ್ತು ರೈಲದು - ಬೆಟ್ಟ ಗುಡ್ಡ ಛೇದಿಸುತ
ನಡೆದಿತ್ತು ವಯ್ಯಾರಿಯಂತೆ - ತನ್ನ ಮೈ ಬಳಕಿಸುತ

ಗಿಡ ಮರಗಳು ಕಾದಿದ್ದವು ಶಬರಿಯಂತೆ ಮಾಡುತ ವ್ರತವಾ
ಬರುತಲೆ ಇಟ್ಟವು ಮುತ್ತು, ಕೇಳಿತು - ಕುಶಲೋಪರಿ ಸಾಂಪ್ರತವ!

ಹೂ-ಬಳ್ಳಿ ಕೋರಿತ್ತು ಸ್ವಾಗತವ ಅಲ್ಲಿ
ನಸು ನಕ್ಕು ನಾಚಿತ್ತು ಪರಿಮಳವ ಚೆಲ್ಲಿ

ಅಲ್ಲೇ ಅನತಿ ದೂರದಲೇ ಕಂಡಿತ್ತು ತಿಳಿನೀರ ಕೊಳ
ಗುಲಾಬಿ ಬಣ್ಣವೇ ತುಂಬಿತ್ತು - ಕಣ್ಣಿಗೆ ರಸಗವಳ!

ನಮಗೆಂದೇ ಏನೋ ರೈಲಲ್ಲಿ ನಿಂತಿತು
ನನಗೆ ನನ್ನಕ್ಕನಿಗೆ ಮನವು ಹಿರಿಹಿಗ್ಗಿತು

ಇಳಿದು ಹೊರಟೆವು ನಾವು ಆ ಕೊಳದ ಬಳಿಗೆ
ಹೆಜ್ಜೆಗಳು ಮೂಡಿತ್ತು ಹಸಿ ಮಣ್ಣಿನೊಳಗೆ

ಮಂಧರನು ಕುಳಿತಿದ್ದ ಧರೆಯ ದಿಗಂತದಲಿ
ರಾಜಹಂಸಗಳು ಬೀಡು ಬಿಟ್ಟಿಹವು ಅಲ್ಲಿ

ತರು-ಲತೆಯು ಒಂದನೊಂದು ತಬ್ಬಿತ್ತು - ಎರಡು ದೇಹ ಒಂದೇ ಜೀವ
ಎಷ್ಟು ಜನ್ಮದಿಂದ ಕಾದಿತ್ತೋ ಇವು - ಎಂಥಾ ಅನ್ಯೋನ್ಯ ಭಾವ

ಜಿಂಕೆಯೊಂದು ಛಂಗನೆ ಎಗರಿ ಮರೆಯಾಗಿತ್ತು ಮರಗಳಲಿ
ಸೀತೆಗೂ ಸಿಗದ ಮಾಯಮೃಗ ಬೇಕಾಗಿತ್ತು ನಮಗೆ ಅಂದಲ್ಲಿ

ಕೋಗಿಲೆಯ "ಕೂ" ಕರೆಗೆ, ಹೂಂಗುಟ್ಟಿತ್ತು ನಮ್ಮ ಮನ
ಮಂತ್ರಮುಗ್ಧವಾಗಿತ್ತು ಇಂಪಿನಾ ಗಾನ

ಪುಟ್ಟ ಅಳಿಲೆರಡು ತುಂಟಾಟದಲ್ಲಿ
ತೊಡಗಿತ್ತು ಕಾಯಿಗಳ ಉರುಳಾಟದಲ್ಲಿ

ಬಂದಿತ್ತು ಹನಿ ಹನಿಯ ಮಳೆಯು ಅಷ್ಟರಲ್ಲಿ
ಮೂಡಿತ್ತು ಸಪ್ತ ವರ್ಣದಾ ಬಿಲ್ಲು ತಕ್ಷಣವೇ ಅಲ್ಲಿ

ಅಕ್ಕ ಪಟ್ಟು ಹಿಡಿದಳು ಕೆಂದಾವರೆ ಬೇಕೆಂದು
ಬೆಪ್ಪಾದೆ ತರ ಹೋಗಿ ಕೊಚ್ಚೆಯಲಿ ಬಿದ್ದು

ಕುಣಿದು ಕುಪ್ಪಳಿಸಿದೆವು ನಾವು ಪನ್ನೀರ ಎರಚುತಾ
ಹಸಿರ ಹಾಸಲಿ ಉರುಳಿ ನಲಿದೆವು - ಗುದ್ದಾಟವಾಡುತಾ

ಮನ ತಣಿವ ಕಲೆಯಂತೆ ಬಾನ ಬಣ್ಣ ಬದಲಾಗಿತ್ತು
ರಾಧಾಕೃಷ್ಣರ ಸಮಾಗಮ ಕಣ್ಣೆದುರೇ ಮೂಡಿತ್ತು

ಸಮಯದ ಪರಿವೆಯೇ ಇಲ್ಲ - ಸಂಜೆಯಾಗಿತ್ತು
ದೂರದಲಿ ನಿಂತಿದ್ದ ರೈಲ ಸಿಳ್ಳೆ ಕೇಳಿತ್ತು

ಒಲ್ಲದಾ ಮನದಲ್ಲಿ ಬಿಟ್ಟೆವು ಸ್ವರ್ಗಲೋಕವ
ಅದಾಗಿತ್ತು ಜೀವನ ಪರ್ಯಂತ ಮರೆಯದಾ ಅನುಭವ!

ಸ್ಯಾರೀ!!

ಮನೆ ಹತ್ರ ಒನ್ದ್ ಮಾರುತಿ ವಾನ್-ನಲ್ಲಿ ಸೀರೆ ಮಾರಕ್ಕೆ ಅಂಥ ತಂದ್ರಪ್ಪ...
ಹೆಣ್ಮಕ್ಕಳು ಏನು ನೂಕು ನುಗ್ಗಲು ಅಂತೀರ...
ಅದನ್ನ ನೋಡ್ದಾಗ ನನ್ೆ ಯೋಚನೆ ಬಂದಿದ್ದು ಗಂಡಂದಿರ್ ಪಾಡು...

***
ಸ್ಯಾರೀ!! (Saree)

ಬೇಕೆಂದು Saree,
ದುಂಬಾಲು ಬಿದ್ದಳು ಎನ್ನ ನಾರಿ.
ನಾನೆಂದೆ - "ಈಗ ಬೇಡ, Sorry"
ಅಡಿಗೆಮನೆಯಿಂದಲೇ
ಗುಡುಗಿದಳು - ನನಗೆ ಗಾಬರಿ!
"ನೀವೇ ಆರಿಸಿರಿ!"
"ನನಗೆ Saree,
ಇಲ್ಲ - ನಿಮಗೆ ಗೋರಿ!!!"
ಆ ಶಬ್ದಕ್ಕೆ ನಾ ಬೆದರಿ
ಆದೆ ಒಂದು ಕುರಿಮರಿ
"ಇವಳೊಂದು ಹೆಮ್ಮಾರಿ"
ಎಂದು ನಾ ಒದರಿ
ದುಡ್ಡನಿತ್ತು, ಆದೆ ಪರಾರಿ...

*
(೧೧-೧೧-೨೦೦೬)

Thursday, April 26, 2007

ಬಾಳ ಜೋಡಿ

ಬಾಳ ಜೋಡಿ ಯಾರು ಅಂಥ ಕೇಳಬೇಡಿ, ಇನ್ನು ಸಿಕ್ಕಿಲ್ಲ :)

********************************
ಬಾಳ ಜೋಡಿ

ಬಾಳ ಮುಂಜಾನೆಯು ಚೆನ್ನಾಯ್ತು-ನಲಿದಾಯ್ತು
ನೆತ್ತಿಯ ಮೇಲಿನ ರವಿಯ ಹೊತ್ತಾಯ್ತು

ನೀನೀಗ ಬಂದಿರುವೆ ನನ್ನ ಜೀವನದಲಿ
ನನ್ನೊಡನೆ ಬರಲೊಪ್ಪಿರುವೆ ಬಾಳಹಾದಿಯಲಿ

ದಾರಿಯಲಿ ಇಹುದು ಕಡಿದಾದ ಬೆಟ್ಟ
ನೀನಿರಲು ಹತ್ತುವುದು ಬಲು ಸುಲಭ! ಪುಟ್ಟ!

ನಾವ್ದಾಟಬಹುದು ನದಿಯು-ನದಿಯ ಸುಳಿಯು
ನೀನಿರಲು ಜೊತೆಯಲ್ಲಿ ಇರುವುದೇ ಸುಳಿಯ ಸುಳಿವು?

ಕ್ರಮಿಸಬಹುದೂ ಮುಂದೆ ಬಿಸಿ ಮರಳಗಾಡು
ನೀನಿರಲು ನನ್ನೊಡನೆ ಅದು ಕೋಗಿಲೆ ಹಾಡು

ಭೇದಿಸಬೇಕಾಗಬಹುದು ಕಾಡು-ಕೋಟೆ ದುರ್ಗಮ
ನಿನ್ನ ಕೈ ಹಿಡಿದಿರಲು, ನೀರ ಕುಡಿದಷ್ಟೇ ಸುಗಮ

ದಾರಿ ಬಹು ದೂರವಿದೆ ಬುತ್ತಿಯಾ ಕಟ್ಟು
ಬುತ್ತಿ ಎಂದೂ ಬತ್ತದು ನೀನಿರಲು ಒಟ್ಟು

ನಾನು ದಣಿಯಲು ಒರಸು ಸೆರಗಲಿ ನೀನು
ನೀನು ಬಳಲಲು ಕೊಡುವೆ ಹೆಗಲನ್ನು ನಾನು

ಬಾ ಇನ್ನು ಹೊರಡೋಣ ಓ ನನ್ನ ರನ್ನ
ಮುಳ್ಳಹಾದಿಯೂ ಹೂವಾಗುವುದು, ಚಿನ್ನ

ದೇವನಲಿ ನಾವು ಕೇಳೋಣ ಇಂದು,
ಬಾಳ ಮುಸ್ಸಂಜೆಯು ಬರದಿರಲಿ ಎಂದು

*
(೮-ನವಂಬರ್-೨೦೦೬)


ಮಾತು

ಮಾತು

ಆಗಿದೆ ವಯಸ್ಸು ಕತ್ತೆಯಷ್ಟು
ನೂರಾರು ಮಾತು - ಆದರೂ ಬರೀ ಮಣ್ಣು...
ನಡೆದರೆ ಎಡವುವುದು, ಮಾತು ತೊದಲು
ಆದರೂ ಹೇಳಿದೆ ಸಾವಿರ ಆ ಪುಟ್ಟ ಕಣ್ಣು...

(ಕನಸಲ್ಲಿ ಮೂಡಿದ್ದು, ಪ್ರದ್ಯುಮ್ನನ ಕಣ್ಣುಗಳಿಂದ ಪ್ರೇರಿತನಾಗಿ)
ಮೂವತ್ತು-ಅಕ್ಟೋಬರ್-ಎರಡು ಸಾವಿರದ ಆರು

Monday, April 23, 2007

ಮಂಜಾಟ - ಕೊಡೈಕೆನಾಲ್


Mist in Kodai
ಮಂಜಾಟ - ಕೊಡೈಕೆನಾಲ್, ಜನವರಿ ೧, ೨೦೦೬

Friday, April 20, 2007

ಜಂಬದ ಕಾಗೆ

ಜೀವನದಲ್ಲಿ ಯಾರು ಯಾರಿಂದ ಪಾಠ ಕಲಿ ಬೇಕೋ?? :)

ಜಂಬದ ಕಾಗೆ

ಕಿಟಕಿಯ ಆಚೆ ಇಣುಕಿದೆ ನಾನು
ಕರ್ರಗೆ ಕಾಗೆ ಕುಳಿತಿತ್ತಲ್ಲಿ

ತಕ್ಷಣವೇ ನಾ ಅಣಕಿಸ ಹೊರಟೆ
"ಅಪಸ್ವರದಾ ಪ್ರತಿಮೂರ್ತಿ ಇಲ್ಲಿ"

ಕಾ ಕಾ ಎಂದು ನಾ ಕರೆದಾಗ
ಹಾರಿತು ಕಾಗೆ ಖಾಲಿ ಆ ಜಾಗ

ಅಣಕು ಕೊಡದು ಖುಷಿಯು ಮನಕೆ
ದನಿ - ಕರ್ಣಕಠೋರವಾಗಿತ್ತದಕೆ

ಸುಶ್ರಾವ್ಯನೆಂದು ತಿಳಿದಿದ್ದೆನಗೆ
ಆಯಿತು ಮಂಗಳ ಆರುತಿ ಕೊನೆಗೆ

ನಾನಗಿದ್ದೆ ಜಂಬದ ಕಾಗೆ
ಮದವನು ಇಳಿಸಿತ್ತು ಆ ಕರಿ ಕಾಗೆ

(ಘಟನೆ ನಡೆದಿದ್ದು - ೮-ಅಕ್ಟೊಬರ-೨೦೦೬)

ಅತ್ಯದ್ಭುತ ಸೃಷ್ಟಿ ಯಾವುದು?

ಅತ್ಯದ್ಭುತ ಸೃಷ್ಟಿ?

ದೇವನಲಿ ಹುಟ್ಟಿಹುದು ಒಂದು ಪರಿಪ್ರಶ್ನೆ
ಬ್ರಹ್ಮಾಂಡದಿ ಭವ್ಯ ಯಾವುದು ನನ್ನ ಸೃಷ್ಣೆ?

ಉತ್ತರಕೆ ಸುತ್ತಿಹನು ಇಡೀ ನಭೋಮಂಡಲ
ಎಲ್ಲೂ ಸಿಗದು - ಕಡೆಗೆ ಕಂಡಿತು - ಸೌರ ಮಂಡಲ

ಸೂರ್ಯನ ನೋಡಿದರೆ ಸುಡುವಗ್ನಿ ಕುಂಡ
ಮಂಗಳನಿಲ್ಲಾಗಿಹನು ಕಡು ಕೆಂಪು ಕೆಂಡ

ಗುರುವಿಗೆ ಕ್ಷುದ್ರಗ್ರಹದ ಕಾಟವಿರುವುದಿಲ್ಲಿ
ನೆಪ್ಚೂನ್-ಯುರೇನಸ್ ಬಿಳಿಚಿಹರು ಅಲ್ಲಿ

ಇದರ ಮಧ್ಯೆ ಹೊಳೆದಿಹುದು ಫಳಫಳ ಈ ಗೋಳ
ಗೋಳವು ಪ್ರಜ್ವಲಿಸಿದೆ - ಇದರ ಬಣ್ಣ - ನೀಲ

ಭೂಗೋಳದ ಒಳಗೆ ಹೊಕ್ಕಿಹನು ದೇವ
ಅಚ್ಚರಿಯ ಆಘಾತವು - ಅದ್ಭುತದ ಅಭಾವ

ಮೂಲೆ ಮೂಲೆ ತಿರುಗಿದನು - ಅಮೇರಿಕ - ಚೀನ
ಎಲ್ಲರಲೂ ಕಂಡಿಹುದು - ಊನ-ಅಪೂರ್ಣ

ಸೃಷ್ಟಿ ಬಲವು ಇಷ್ಟೇ? ಎಂದು ದೇವನಲಿ ಲಜ್ಜೆ
ಅಷ್ಟರಲಿ ಕೇಳಿಸಿತು ಸುನಾದದ ಹೆಜ್ಜೆ

ಅಲೆ ಅಲೆಯಲಿ ಕೇಳಿದೆ ಸಂಗೀತದ ನಾದ
ಸಾಗರವು ಸ್ಪರ್ಶಿಸಿಹುದು ಈಕೆಯ ಪಾದ

ಉಟ್ಟಿಹಳು ಕೇಸರಿಯ ರೇಶಿಮೆ ಸೀರೆ
ದೇವರಿಗೂ ರೋಮಾಂಚನ - ರೂಪಸಿ - ಈ ನೀರೆ

ಮೆರಗನ್ನು ನೀಡಿಹುದು ಹಸಿರ-ಹೊನ್ನ ಅಂಚು
ಮೈಯಲ್ಲಿ ಹುಟ್ಟಿತು ಝಲ್ಲನೆ ಕೋಲ್ಮಿಂಚು

ಬಲದ ಕೈಯಲಿ ಇಹುದು ಕ್ಷೀರದಾ ಕಲಶ
ಎಡಗಡೆ ಹರಿದಿಹಳು ಪಾವನೀ ಗಂಗೆ

ಯಮುನೆ-ತುಂಗೆ-ನರ್ಮದೆಯರ ಜಲಲ ಜಲಲ ಧಾರೆ
ಇವುಗಳಿಂದ ಮೂಡಿದೆ ಜಲದ ನಿರಿಗೆ ಸೀರೆ

ಸಿಂಧು ನದಿಯ ಕೆಮ್ಮಣ್ಣೇ ಇವಳ ಸಿಂಧೂರ
ಮಂದಸ್ಮಿತೆ ಈಕೆ - ಇದೇ ದಿವ್ಯಾಕಾರ

ಝಗಮಗಿಸಿದೆ ಈ ಸುಂದರ ಮಕುಟ
ಕಣ್ಣ ಕೋರೈಸಿದೆ ಇದು ಹಿಮಕಿರೀಟ

ಇವಳ ಕಂಡ ದೇವನು ಆದ ಕೊನೆಗೆ ಧನ್ಯ
"ನಿನಗಿಂತಿನ್ಯಾರಿಹರು - ನೀನು ಅಸಾಮಾನ್ಯ"

ದೇವನು ಉದ್ಘೋಷಿಸಿದ - "ನೀನೆ ಉತ್ಕೃಷ್ಟೆ!"
"ಜಗದಲಿ ನಿನಗೆ ಅಸಮ -ನೀ ಸೃಷ್ಟಿ ಪರಾಕಾಷ್ಟೆ!"

----------*----------

ತಕ್ಷಣವೇ ಮೊಳಗಿತು -

ಜಯಹೇ ಜಯಹೇ ಮಾತೆ
ಜಯ ಭಾರತಿ ಮಾತೆ
ಜಯ ಗಂಗಾ ಜನನಿ
ನೀ ಪತಿತ ಪಾವನಿ
ಜಯ ಭಾರತಾಂ.....ಬೆ!

(ದಿನಾಂಕ: ೪-ಅಕ್ಟೋಬರ್-೨೦೦೬)

Monday, April 16, 2007

ಚಿಟ್ಟೆ ಕಂಡ್ರೆ ಯಾರಿಗೆ ಇಷ್ಟ ಆಗೋಲ್ಲಾ?


ಚಿಟ್ಟೆ

ಆಹಾ! ನೋಡು ಬಣ್ಣದ ಚಿಟ್ಟೆ!
ನಿನ್ನೀ ಮೆರುಗಿಗೆ ನಾ ಮರುಳಾಗಿಬಿಟ್ಟೆ!

ಹುಟ್ಟಿನಲಿ, ನೀನು ಕರ್ರಗಿನ ಕಂಬಳಿ - ಕುರೂಪಿ
ಬೆಳೆಯಲು, ಅಪ್ಸರೆಯರೂ ಹಿಮ್ಮೆಟ್ಟಿದರು, ನೀ ಸ್ಫುರದ್ರೂಪಿ!

ಬಣ್ಣವೋ ಬಣ್ಣ ಇದು ಅದ್ಭುತ ಚಿತ್ತಾರ
ಚೆಲ್ಲಿದೆ ರಂಗು - ಸೌಂದರ್ಯದ ಪರಮಾವಧಿ - ಸಾಕಾರ!

ಎಂಥಾ ಚೆಲುವು - ಓ ಪಾತರಗಿತ್ತಿ!
ನೋಡೀ ನೀರೆಯರೂ ನಾಚಿದರು - ನೀ ಬಿನ್ನಾಣಗಿತ್ತಿ!

ಅದೇನು ನಿನ್ನ ಈ ಅಂದ-ಚೆಂದ!
ಹೀರಿದೆಯಾ ನೀ ಹೂಗಳ ಮಕರಂದ!

ಒಂದೇ ಒಂದು ಸ್ಪರ್ಶಕ್ಕೆ ಕಾದಿವೆ ಕೋಟಿ ಶ್ಯಾಮಲೆ
ನಿಂತಲ್ಲೆ ನಿಲ್ಲಲಾರೆ - ನೀ ಮಹಾ ಚಂಚಲೆ!

ಪ್ರೀತಿಯಲಿ ಪುಷ್ಪಕ್ಕೆ ಕೊಟ್ಟಿಹೆ ಸಿಹಿ ಚುಂಬನ
ಮೃದು ಹೂವದು ನಸು ನಡುಗಿದೆ - ಎಂಥಾ ರೋಮಾಂಚನ!

ಕುಡಿದಿರುವೆ ನೀನು ಹೂವಿನ ಜೇನು...
ಹೇಳು! ನಿನ್ನ ಸೌಂದರ್ಯದ ಗುಟ್ಟು ಇದೇ ಏನು?

ನಿನ್ನ ಸೃಷ್ಟಿಸಿದ ಬ್ರಹ್ಮನ ಬಲವು ಅಷ್ಟಿಷ್ಟೇ?
ಇದನೆಲ್ಲ ಯೋಚಿಸಿ ಸ್ತಬ್ಧನಾಗಿ - ಮೂಗಿನ ಮೇಲೆ ಬೆರಳಿಟ್ಟೆ!

(ಹೊಳೆದಿದ್ದು - ೨೧-ಸೆಪ್ಟಂಬರ್-೨೦೦೬, ಚಕ್ರತೀರ್ಥದಲ್ಲಿ ಚಿಟ್ಟೆಯ ಚಿತ್ತಾರವನ್ನು ಸೆರೆಹಿಡಿದಿದ್ದು - ೧೦-ಮಾರ್ಚ್-೨೦೦೭)

ಪದಬಂಧ ನನ್ನ ಹವ್ಯಾಸ... :)

ಪದಬಂಧ ನನ್ನ ಹವ್ಯಾಸ... :)

ಪದಬಂಧ

ಪದಗಳ ಆಟವೇ
ಪದಬಂಧ
ಎನಿತೋ ವರುಷದ
ಸಂಬಂಧ

ಸುಳಿವಿನ ರಾಶಿಯು
ಗೋಜಲೋ ಗೊಜು
ಗಾಳಕೆ ಸಿಕ್ಕರೆ
ಮೋಜೋ ಮೊಜು

ಪದಗಳು ಸಿಗದಿರೆ
ಬಲು ತಿಕ್ಕಾಟ
ಸಿಕ್ಕರೆ ಇವುಗಳು
ಇದೆ ಗೆದ್ದಾಟ

ಮುಖವಾಡದ ಪದಗಳ
ಅಟ್ಟಹಾಸ!
ಕಳಚಿರೆ ಇವನು
ಅರೆ! ಸುಹಾಸ!

ತಿಣುಕಿದೆ ಏಕೋ?
ಅಯ್ಯೋ ಪೆದ್ದೆ!
ಎಲ್ಲವು ಸಿಕ್ಕರೆ
ನೀನೇ ಗೆದ್ದೆ

ಆಡಿವೆ ಏಕೆ,
ಕಣ್ಣು ಮುಚ್ಚಾಲೆ?
ಬರದಿಹೆ ಪ್ರೀತಿಯ
ಕರೆಯೋಲೆ!

ಇವಕೆ ವಿರಹವು
ಕಾಡಿವೆಯಂತೆ
ಇನ್ನೊಂದನು ಮುತ್ತಿಕ್ಕಲು
ಕಾದಿವೆಯಂತೆ

ಚಿತ್ರ ವಿಚಿತ್ರ ಇದೆ
ಈ ಜಾಡು
ಅದುವೇ ಜಾಣ್ಮೆಯು
ಜೋಡಣೆ ಮಾಡು

ತೆಗೆದರೂ ಪದಗಳ
ಮೆಲ್ಲಗೆ ಹೆಕ್ಕಿ,
ಪ್ರೀತಿಯು ಉಕ್ಕಿ,
ಗುದ್ದಿವೆ, ಢಿಕ್ಕಿ!

ಕಲಸು ಮೆಲೋಗರ
ಪದ ಚಿತ್ರಾನ್ನ
ಸರಿ ಪಡಿಸಲು ಇದನು
ಸಿಹಿ ಮೊಸರನ್ನ

ರಕುತವ ಹಂಚಿದ
ಜೋಡಿಗಳಂತೆ,
ಸಮ ಅಕ್ಷರದ
ಅವಳಿಗಳಂತೆ!

ಸುಲುಭದ ಆಟವೆ?
ಇದು ಕಗ್ಗಂಟು
ಗೆಲ್ಲಲು ಮೆದುಳೇ
ನಿನಗೆ ನಿಘಂಟು

ಎಲ್ಲವು ಸಿಕ್ಕರೆ
ಇದೆ ಹಾಡಂತೆ
ಹಾಡಿನ ಸ್ವರಗಳು
ಗಮ"ಪದ" ವಂತೆ

ಇದುವೇ ಒಂದು
ಜಾಣರ ಆಟ
ಚಿಣ್ಣರಿಗಾಗಲಿ
ಇದು ಪರಿಪಾಟ

ಬಲು ಮಧುರ
ಪದಬಂಧದ ಬಂಧ
ಇರಲಿ ಅಮರ
ಈ ಅನುಬಂಧ

(ಬರೆದದ್ದು...೧೯-ಸೆಪ್ಟಂಬರ್-೨೦೦೬)

Saturday, April 14, 2007

ನೋಡು ಬಾ ನೋಡು ಬಾ ಮೈಸೂರಾ...


ಮೈಸೂರು ಅರಮನೆ ನನ್ನ ಮೂರನೆ ಕಣ್ಣಲ್ಲಿ...

ವಡೆ ಮಾಡೋದು ಗೊತ್ತಾ?

ಒಂದಿಷ್ಟು ಹುಡುಗೀರು ನಿಂಗೆ ವಡೆ ಮಾಡಕ್ಕೆ ಗೊತ್ತಾ ಅಂಥ challenge ಹಾಕಿದ್ರೂ...
ಅದೇನ್ ದೊಡ್ಡ ಮಹಾ ಅಂಥ ಒಂದು ಆಶು ಕವಿತೆ ಬರೆದೆ...

ವಡೆ


ಬೇಳೆಯ ನೆನೆಸಿ
ಮಾಡಿರಿ ಹಿಟ್ಟು

ಒಂದಿಷ್ಟು ತೆಗೆದು
ಎಲೆ ಮೇಲೆ ತಟ್ಟು

ಕಾದ ಎಣ್ಣೆಯಲಿ
ನೀ ಅದ putಉ (ಪುಟ್ಟು)

ಕರಿದ ವಡೆಯ
ತಟ್ಟೆಗೆ getಉ (ಗೆಟ್ಟು)

ಗರಿ ಗರಿ ವಡೆಯು
ಹೊಟ್ಟೆಗೆ fitಉ (ಫ಼ಿಟ್ಟು)!

ವಡೆಯ ಮಾಡುವ
ವಿಧಾನವಿಷ್ಟು!!

(ಹತ್ತು-ಸೆಪ್ಟಂಬರ್-೨೦೦೬)

Friday, April 13, 2007

ಹತ್ರೀ ಬನ್ರೀ Route-3


ನಮ್
Juniper Shuttle, Route-3ಲಿ ಇರೋಷ್ಟ್ ಮಜ ಬೇರೆ ಎಲ್ಲಿ ಇದೆಯೋ ನಾ ಕಾಣೆ

Route-3


ಹತ್ರೀ ಬನ್ರೀ Route-3
ಖುಷಿಯು ನಿಮಗೆ ಖಾತ್ರೀ !!
ಮೀನ ಮೇಷ ಯಾಕ್ರೀ??
ನಗಲೂ ಹಿಂದೇಟ್ ಎನ್ರೀ?

ಹಾಡುಗಳನ್ನು ಹಾಡುತ್ತೇವೆ
ಆಡಿರಿ ಬನ್ನಿ ಅಂತಾಕ್ಷರಿ!
ಮೂಕ ಸನ್ನೆಯ ಮಾಡುತ್ತೇವೆ
ಪದಗಳ ನೀವು ಪತ್ತೆ ಹಚ್ರೀ!

ಹತ್ರೀ ಬನ್ರೀ Route-3
ತಲೆ ಕೆರೀತೀರ್ ಯಾಕ್ರೀ??

ಮೆದುಳಿಗೆ ಬೇಕೆ ಚುರಿಮುರಿ?
Lateral Thinking ಆಡ್ ಬನ್ರೀ
ಪ್ರಶ್ನಾವಳಿಯ ಸುರಿಮಳೆ ಹಾಕಿ
ವ್ಯಕ್ತಿಯ ನೀವು ಕಂಡು ಹಿಡೀರಿ!

ಹತ್ರೀ ಬನ್ರೀ Route-3
ದಂಗಾಗಿದ್ದೀರ್ ಎನ್ರೀ??

Dumb Dumb Cನ ನೋಡಿ
ಮೂಕನೆ ಮೂಕನಾಗ್ಯಾರಿ!
ತುಂಟಾಟವನು ಆಡುತ್ತೇವೆ
ಕಾಲನು ನೀವು ಎಳೀ ಬನ್ರೀ


ಹತ್ರೀ ಬನ್ರೀ Route-3
ನಮ್ಮೊಳಗ್ ನೀವೊಬ್ರಾಗ್ರೀ
ನಗುವಲಿ ಭಾಗಿ ಆಗ್ರೀ
ಖುಷಿಯು ನಿಮಗೆ ಖಾತ್ರೀ!

ಹತ್ರೀ ಬನ್ರೀ Route-3
ಖುಷಿಯು ನಿಮಗೆ ಖಾತ್ರೀ!

(ಗೀಚಿದ್ದು ೪-ಸೆಪ್ಟಂಬರ್-೨೦೦೬)

ಪ್ರದ್ಯುಮ್ನನ ಬಗ್ಗೆ ಹೇಳ್ದೆ ಇರಕ್ಕೆ ಆಗತ್ತಾ???


ನನ್ನಕ್ಕನ ಮಗ - ನನ್ನ ಬಂಗಾರಿ, ಚಿನ್ನಿ ಮರಿ - ಪ್ರದ್ಯುಮ್ನ!
ತುಂಟ ಪುಟ್ಟ ಪೋರನ ಬಗ್ಗೆ...

ಪುಟ್ಟ ಪ್ರದ್ಯುಮ್ನ

ವರುಷದಿ ಹಿಂದೆ
ನಮ್ಮೀ ಮನೆಗೆ
ಬಂದಿಹನೊಬ್ಬನು ಪುಟ್ಟಣ್ಣ

ಪ್ರೀತಿಯ ಪುಟ್ಟಗೆ
ನಾಮವನಿಟ್ಟರು
ಹೆಸರಾಯಿತು ಅದು "ಪ್ರದ್ಯುಮ್ನ"

ಅಪ್ಪನು ಆಡಿಸೆ
ಕುಣಿದರು ಮುಂದೆ
ಖುಷಿಯಲಿ ಚೀರಿದ ರಾಜಣ್ಣ

ತಿಂಗಳೈದಾಗಲೆ
ಮಗುಚಿದ ಇವನು
ಬೋರಲು ಬಿದ್ದನು ಚಿನ್ನಣ್ಣ

ನಗುವೇ ಮೊಗದಲಿ
ಆಕರ್ಷಣೆಯು
ಎಲ್ಲರ ಸೆಳೆದನು ಇವನಣ್ಣ

"ಬೌ ಬೌ" ಪ್ರಿಯನು
ಆಜ್ಞೆಯನಿತ್ತನು
"ನಾಯಿಯ ಹಿಂದೆ ಓಡಣ್ಣ"

ತುಂಬಿತು ಎಂಟು
ದೇಕಿತು ತುಂಟು
ಕಣ್ಗದೆ ಹಬ್ಬವು ನೋಡಣ್ಣ

ಮಾಸವು ಹತ್ತು
ಅಂಬೆಗಾಲಿತ್ತು
ಮುನ್ನುಗಿತ್ತು ಚಿಕ್ಕಣ್ಣ

ಹೆಚ್ಚಿನ ಸಮಯವು
ಬೇಕೆ ಇವಗೆ
ಹೆಜ್ಜೆಯನಿಟ್ಟನು ಗುಂಡಣ್ಣ

ಘಲು ಘಲು ಗೆಜ್ಜೆಯ
ನಾದವ ಮಾಡಲು
ಕೇಳಲು ನಮಗೆ ಮಜವಣ್ಣ

ಅಮ್ಮನು ಮಾಮನು
ಪ್ರೀತಿಲಿ ಕರೆದರು
"ಚಿನ್ನಿಮರಿ-ಗುಂಡು-ವಡ್ಡಣ್ಣ"

ನೆಚ್ಚಿನ ಆಟಿಕೆ
ಸಿಗದಿರೆ ಇವಗೆ
ಆಗುವನಿವನು ಮೊಂಡಣ್ಣ

ಹಾಡು ಕುಣಿತವು
ಇಷ್ಟವು ರಾಜಗೆ
ಕೇಳಲೆ ತೂಗಿದ ಗುಂಡಣ್ಣ

ನಡೆಯಲು ಕಲಿತಾ
ಮುದ್ದಿನ ಪೋರನು
ಪುಂಡನು ಆಗಿಹ ನೋಡಣ್ಣ

ಅಜ್ಜಿಯ ಕೂಡ
ಕರೆದಿಹನಿವನು
"ಅಮ್ಮಾ" ಎಂದೇ ಕೇಳಣ್ಣ

ಪಕ್ಕದ ಮನೆಯ
ಅಜ್ಜಿಯು ಕರೆದರು
ಅಕ್ಕರೆಯಲಿ - "ನಮ್ಮಣ್ಣ"

ಜಾಣನು ಇವನು
ಎಲ್ಲರ ಪ್ರಿಯನು
ನಮ್ಮಯ ಪುಟ್ಟ ಪ್ರದ್ಯುಮ್ನ
ನಮ್ಮಯ ಪುಟ್ಟ ಪ್ರದ್ಯುಮ್ನ


(ಬರೆದದ್ದು ೨೨-ಆಗಸ್ಟ್-೨೦೦೬)

ಕಾಮನಬಿಲ್ಲು

ಆ ಒಂದು ಸಂಜೆ ನಮ್ Juniper terraceನಲ್ಲಿ ನಿಂತಿದ್ದಾಗ ಹನಿ ಹನಿ ಮಳೆ ಬಂದು, ಕಾಮನ ಬಿಲ್ಲು ಮೂಡಿತು...
ಮೂಡಿದ್ದೇ ಮೂಡಿದ್ದು ಎನು ಮೋಡಿ ಹಾಕ್ತೋ, ನನ್ನ ದಡ್ಡ ತಲೇಗೂ ಒಂದು ಕವನ ಹೊಳೀತು, ಇಲ್ಲಿದೆ ಓದಿ

ಕಾಮನಬಿಲ್ಲು

ಆಗಸದಿ ಮೂಡಿತು ಕಾಮನಬಿಲ್ಲು
ರಂಗಿನ ಓಕುಳಿ ಎಲ್ಲೆಲ್ಲೂ

ಸಿಂಚನವೇ ಈ ತುಂತುರು ಮಳೆಯು
ನಲಿ ನಲಿಯುತ್ತಿವೆ ಮಿಂದಾ ಸಸಿಯು

ಹಾರುವ ಹಕ್ಕಿಗಳಿಂಪಿನ ದನಿಯು
ಇದ ನೋಡಲು ಇಣುಕಿದ ರವಿಯು

ಬಿರಿದಿವೆ ನಗುತಿವೆ ಹೂವು-ಹುಲ್ಲು
ಕುಣಿಯುವ ಚಿಣ್ಣರ ಗುಲ್ಲೋ ಗುಲ್ಲು

ಪ್ರಕೃತಿಯ ರಸವೇ ಬಹು ರುಚಿಯು
ಇದ ಮರೆಯದೆ ಮನುಜ ನೀ ಮೆಲ್ಲು... ನೀ ಮೆಲ್ಲು...

(ಬರೆದ ದಿನಾಂಕ - ೭-ಆಗಸ್ಟ್-೨೦೦೬)

ಬ್ಲಾಗಿನ ಬಾಗಿಲಿಗೆ...

ಬ್ಲಾಗೋದೋ ಬೇಡ್ವೋ?
ಬ್ಲಾಗಿಗೆ ಬಾಗೋದೋ ಬೇಡ್ವೋ???
ಕೊನೇಗೂ ಬ್ಲಾಗಿನ ಬಾಗಿಲಿಗ್ ಬಂದಿದ್ದೂ ಆಯ್ತು, ಬಿದ್ದಿದ್ದೂ ಆಯ್ತು.
ನಾನು ಬಾಗಿಲಿಗೆ ಬಂದೆ ಅಂಥ ಹೇಳೋಕಿಂತಾ, ನೂಕಿದಾರೆ ಅಂಥ ಹೇಳ್ಬಹುದು...
ಆವಾಗ್ ಆವಾಗ ಸ್ವಲ್ಪ ಗೀಚ್-ತೀನ? ಅದನ್ನ ಬ್ಲಾಗ್-ಬೇಕಂಥೆ!
ಹೇಳ್ಕೊಳ್ಳೋಂಥಾದ್ದೇನು ಬರದಿಲ್ಲ ಬಿಡಿ...ಆದ್ರೂ ಅವರಿಗೆ ಚಪಲ...
ಪಾಪ ಅವರ್ ಮಾತೂ ಸ್ವಲ್ಪ ಕೇಳೋಣಾ ಅಂಥ...
ಹಾಗೇ ಕ್ಯಾಮರ ಕಣ್ಣಲ್ಲಿ ನೋಡಿದ್ದೂ ಹಾಕೋಕೆ ಆಸೆ...
ನೋಡೋಣ ಎಷ್ಟು ದಿನ ಬ್ಲಾಗ್ತೀನೋ...
ತುಂಬ ದಿನ ನಡೆಯೋದು Doubtಉ...
ನನ್ಗೆ ನನ್ನ ಸೋಮಾರಿತನದ ಮೇಲೆ ಅಷ್ಟು confidence!!!
ಇರ್‍ಲಿ ಒಂದ್ ಕೈ ನೋಡೆ ಬಿಡಾವ ಅಂಥ... :)