Tuesday, September 30, 2008

ಮರಳಿ ಬಾ ಶಾಲೆಗೆ...ಬೀದಿ ನಾಟಕ ಪ್ರಯೋಗ

ನಮ್ಮೂರಲ್ಲಿ (ಅಡವಿ ನಾಗೇನಹಳ್ಳಿ, ಮಧುಗಿರಿ ತಾಲ್ಲೂಕು) ನಾವು ಜನ ಜಾಗೃತಿಗಾಗಿ ೭-ಸೆಪ್ಟೆಂಬರ್-೦೮ ರಂದು ಒಂದು ಸಣ್ಣ ಬೀದಿ ನಾಟಕವನ್ನು ಮಾಡಿದೆವು.
ಈ ನಾಟಕದಲ್ಲಿ, ಹಳ್ಳಿಯ ಜನರಿಗೆ ವಿದ್ಯಾಭ್ಯಾಸದ ಮಹತ್ವ, ಸರ್ಕಾರ ಮಕ್ಕಳಿಗೆ ಕೊಡುತ್ತಿರುವ ಸವಲತ್ತು,
ನೀರಿನ ಬಳಕೆ, ಕೆರೆಗಳ ಉಳಿಕೆ ಮುಂತಾದ ವಿಷಯಗಳನ್ನು ತಿಳಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡಿದೆವು.





ಇಡೀ ನಾಟಕವನ್ನು ನಮ್ಮ ಕುಟುಂಬದವರೇ ಬರೆದು, ನಡೆಸಿಕೊಟ್ಟದ್ದು ವಿಶೇಷವಾಗಿತ್ತು.
ಪಾತ್ರಧಾರಿಗಳಾಗಿ - ನಾನು, ನನ್ನ ಅಕ್ಕ - ರೋಹಿಣಿ, ನನ್ನ ಮಾವನ ಮಗ ಆನಂದ್, ನಮ್ಮ ಮಾವ ಕುಮಾರ್, ಕು.ಇಂದು ಮತ್ತು ಕು.ಸೌಮ್ಯ ಭಾಗವಹಿಸಿದ್ದೆವು.
(ಸೂ:
ನಾಟಕದಲ್ಲಿ ಎರಡು ಹಾಡುಗಳೂ ಒಳಗೊಂಡಿದ್ದು, ಇದರ ಚಿತ್ರಣ ಇಲ್ಲಿಲ್ಲ.
ನಾಟಕವನ್ನು ಬರೆದವರು ನನ್ನ ಮಾವಂದಿರ ಮನೆಯವರಾದ ಪುಷ್ಪಾ ಹಾಗೂ ಕುಮಾರ್.
ಈ ಹಾಡುಗಳಿಗೆ ರಾಗ ಸಂಯೋಜನೆಯನ್ನು ಹಾಕಿ ಕೊಟ್ಟವರು ವೆಂಕಟೇಶ್(ಮನು).
ವಿಡಿಯೋ ರೆಕಾರ್ಡಿಂಗ್ ಗುಣಮಟ್ಟ ಅಷ್ಟು ಚೆನ್ನಿಲ್ಲದಕ್ಕೆ ಕ್ಷಮೆಯಿರಲಿ.)

ಇದೇ ರೀತಿಯ ಬೀದಿನಾಟಕವನ್ನು ನಮ್ಮೂರ ಪಕ್ಕದ ಹಳ್ಳಿಯಾದ ತಿಪ್ಪಾಪುರದಲ್ಲೂ ನಡೆಸಿದೆವು.

ಈ ನಾಟಕವಲ್ಲದೆ, ಎರಡೂ ಹಳ್ಳಿಯ ಶಾಲೆಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಿದೆವು.
ಹಾಗೂ ಪುಸ್ತಕಗಳು, ಆಟದ ಸಾಮಾನುಗಳು, ಬಿಸಿಯೂಟ ಕಾರ್ಯಕ್ರಮಕ್ಕೆ ಅನುವಾಗಲು ಒಂದು ಕುಕ್ಕರ್ ವಿತರಿಸಿದೆವು.

ಇದಲ್ಲದೆ, ತಿಪ್ಪಾಪುರ ಮತ್ತು ಅಡವಿ ನಾಗೇನಹಳ್ಳಿ ಮಕ್ಕಳ ನಡುವೆ ರಸಪ್ರಶ್ನೆ ಕಾರ್ಯಕ್ರವನ್ನು ಹಮ್ಮಿಕೊಂಡಿದ್ದೆವು.
ಈ ರಸಪ್ರಶ್ನೆ ಕಾರ್ಯಕ್ರಮವು ಎರಡು ವಿಭಾಗಗಳಲ್ಲಿ ನಡೆಯಿತು.
ಮೊದಲ ವಿಭಾಗದಲ್ಲಿ ೪ ಮತ್ತು ೫ ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು
ಎರಡನೇ ವಿಭಾಗದಲ್ಲಿ ೬ ಮತ್ತು ೭ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದೆವು.
ಎರಡೂ ವಿಭಾಗಗಳಲ್ಲಿ ಅಡವಿ ನಾಗೇನಹಳ್ಳಿಯ ಮಕ್ಕಳು ಗೆಲುವನ್ನು ಸಾಧಿಸಿ ಬಹುಮಾನಗಳನ್ನು ಪಡೆದರು.

ಈ ಕಾರ್ಯಕ್ರಮ ಎಲ್.ಐ.ಸಿ ಮತ್ತು ಸಿ.ಒ.ಸಿ.ಬಿ. ಬ್ಯಾಂಕ್ ಸಹಕಾರದೊಂದಿಗೆ ನಡೆಯಿತು.

--ಶ್ರೀ

No comments: