Monday, February 16, 2009

ಹೀಗೊಂದು ಅಳಲು

[ಈ ಚಿತ್ರಕ್ಕೆ ಕವನ ಬರೆಯಬೇಕೆಂದು ಸಂಪದದಲ್ಲಿ ಹರಿ ಪ್ರಸಾದ್ ನಾಡಿಗ್ ಕರೆ ನೀಡಿದ್ದರು]


ಇಲ್ಲದಿದ್ದರೂ ಪಟದಲಿ
ಎಲ್ಲರಾ ಕವನದಲಿ
ಬೆತ್ತಲ ಮೂರುತಿಗೇ ಮನ್ನಣೆ...
ಅನಂತಾನಂತ ದೂರ
ಬಾನಲಿ ಬತ್ತಿಯಂತುರಿವ
ಕತ್ತಲ ಮೂರುತಿಗೇ ಮನ್ನಣೆ...

ಸನಿಹದಲ್ಲೇ ಇರುವೆ ನಾನು,
ಅನತಿ ದೂರದಲ್ಲೇ...
ಎತ್ತರ ತೆಂಗಿನ ಮರದಷ್ಟಾದರೂ...
ಕವಿಗಳ ನೋಟಕೆ ಬಾರದೇನು ನನ್ನ ಇರವು?
ಕವಿತೆಗೇಕಾಗಲಾರೆ ನಾ ಸ್ಫೂರ್ತಿಯ ಸೆಲೆಯು?

--ಶ್ರೀ

[ಫೆಬ್ರವರಿ ೧೬, ೨೦೦೯]

No comments: