ವಿಧ ವಿಧವಾದ ಕಡ್ಲೆ ಕಾಯಿ ವಿತರಿಸುವ ಏಕೈಕ ಬ್ಲಾಗ್ ತಾಣಕ್ಕೆ ಸ್ವಾಗತ... ಇಲ್ಲಿವರೆಗೂ ಬಂದಿದೀರ, ಸ್ವಲ್ಪ ಕಡ್ಲೆ ಕಾಯಿ ತಿಂದು ಹೇಗಿದೆ ಅಂತ ಹೇಳಿ ಹೋಗಿ...
Tuesday, February 15, 2011
Saturday, February 12, 2011
Wednesday, February 9, 2011
ಎಲ್ಲಮ್ಮನ ಜಾತ್ರೆ
Tuesday, February 8, 2011
ಯು.ಪಿ.ಎ. ಸಾಧನೆ ಅಂತರಿಕ್ಷಕ್ಕೇ ಮುಟ್ಟಿತಲ್ಲಯ್ಯ!
Monday, February 7, 2011
Sunday, February 6, 2011
ತರಚು ಗಾಯ
ಬೈಕ್ನಲ್ಲಿ ಹೋಗುವಾಗ
ಕಾಲಿಗೆ
ತರಚು ಗಾಯವಾಯ್ತೆಂದು
ತನಗೆ ತಗುಲಿಸಿದ
ಟಾಕ್ಸಿ ಡ್ರೈವರ್ ಜೊತೆ
ರಸ್ತೆ ಮಧ್ಯೆ
ವಾಗ್ವಾದಕ್ಕಿಳಿದ
ಟಪೋರಿಗೆ
ಒಂದು ಕಿಲೋಮೀಟರ್
ಉದ್ದದ ಟ್ರಾಫಿಕ್ ಜ್ಯಾಮ್ ಹಿಂದೆ
ಆಂಬುಲೆನ್ಸ್ನಲ್ಲಿದ್ದ
ಪ್ರಾಣಪಕ್ಷಿ
ಹಾರಿಹೋಯ್ತೆಂಬ ಅರಿವಿರಲಿಲ್ಲ...
--ಶ್ರೀ
(೬-ಫೆಬ್ರವರಿ-೨೦೧೧)
ಕಾಲಿಗೆ
ತರಚು ಗಾಯವಾಯ್ತೆಂದು
ತನಗೆ ತಗುಲಿಸಿದ
ಟಾಕ್ಸಿ ಡ್ರೈವರ್ ಜೊತೆ
ರಸ್ತೆ ಮಧ್ಯೆ
ವಾಗ್ವಾದಕ್ಕಿಳಿದ
ಟಪೋರಿಗೆ
ಒಂದು ಕಿಲೋಮೀಟರ್
ಉದ್ದದ ಟ್ರಾಫಿಕ್ ಜ್ಯಾಮ್ ಹಿಂದೆ
ಆಂಬುಲೆನ್ಸ್ನಲ್ಲಿದ್ದ
ಪ್ರಾಣಪಕ್ಷಿ
ಹಾರಿಹೋಯ್ತೆಂಬ ಅರಿವಿರಲಿಲ್ಲ...
--ಶ್ರೀ
(೬-ಫೆಬ್ರವರಿ-೨೦೧೧)
some-ಮೇಳನ
ಅಚ್ಚಕನ್ನಡದಲ್ಲಿ ಮಾತಾಡ್ಬೇಕು
ಸಂಸ್ಕೃತ ಹೇರಿಕೆ ನಿಲ್ಬೇಕು
ಎಂಬರ್ಥ ಬರುವ ಹೊತ್ತಗೆಗಳು
ಮಾರುತ್ತಿರುವ ಮಳಿಗೆಯಲ್ಲಿದ್ದ ಯುವಕ,
ತನ್ನ ಗೆಳೆಯನ ಬಳಿ ಪಿಸುಗುಟ್ಟುತ್ತಿದ್ದ
"ನಾನಿನ್ನೂ ರೌಂಡ್ಸ್ ಹೋಗೇ ಇಲ್ಲ...
ಒಂದ್ ಸರ್ತಿ ಎಲ್ಲ ಸ್ಟಾಲ್ಸ್ ನೋಡಿ,
ಬುಕ್ಸ್ ತೊಗೊಳ್ಬೇಕು!"
***
ಸಮ್ಮೇಳನಕ್ಕೆ
ಬಂದ ಯುವಕ
ಗೊಣಗುತ್ತಿದ್ದ
ಇಲ್ಲಿ
ಸಿಗೋದು ಎರಡೇ...
ಬುಕ್ಸು-ಧೂಳು!
***
ಸಾಹಿತ್ಯ ಸಮ್ಮೇಳನದಲ್ಲಿ
ಕವಿದಿದ್ದ
ಧೂಳು-ದುಮ್ಮು
ಬೆಂಗಳೂರು-ಕನ್ನಡಿಗ
ಸೋಂಬೇರಿತನವನ್ನು
ಕೊಡವಿ
ಎದ್ದಿದ್ದಕ್ಕಿರಬೇಕು!
--ಶ್ರೀ
(೬-ಫೆಬ್ರವರಿ-೨೦೧೧)
ಸಂಸ್ಕೃತ ಹೇರಿಕೆ ನಿಲ್ಬೇಕು
ಎಂಬರ್ಥ ಬರುವ ಹೊತ್ತಗೆಗಳು
ಮಾರುತ್ತಿರುವ ಮಳಿಗೆಯಲ್ಲಿದ್ದ ಯುವಕ,
ತನ್ನ ಗೆಳೆಯನ ಬಳಿ ಪಿಸುಗುಟ್ಟುತ್ತಿದ್ದ
"ನಾನಿನ್ನೂ ರೌಂಡ್ಸ್ ಹೋಗೇ ಇಲ್ಲ...
ಒಂದ್ ಸರ್ತಿ ಎಲ್ಲ ಸ್ಟಾಲ್ಸ್ ನೋಡಿ,
ಬುಕ್ಸ್ ತೊಗೊಳ್ಬೇಕು!"
***
ಸಮ್ಮೇಳನಕ್ಕೆ
ಬಂದ ಯುವಕ
ಗೊಣಗುತ್ತಿದ್ದ
ಇಲ್ಲಿ
ಸಿಗೋದು ಎರಡೇ...
ಬುಕ್ಸು-ಧೂಳು!
***
ಸಾಹಿತ್ಯ ಸಮ್ಮೇಳನದಲ್ಲಿ
ಕವಿದಿದ್ದ
ಧೂಳು-ದುಮ್ಮು
ಬೆಂಗಳೂರು-ಕನ್ನಡಿಗ
ಸೋಂಬೇರಿತನವನ್ನು
ಕೊಡವಿ
ಎದ್ದಿದ್ದಕ್ಕಿರಬೇಕು!
--ಶ್ರೀ
(೬-ಫೆಬ್ರವರಿ-೨೦೧೧)